ಶುಕ್ರವಾರ, ಸೆಪ್ಟೆಂಬರ್ 16, 2011

ಸ್ವಲ್ಪ ಖಾರ ಸ್ವಲ್ಪ ಸಿಹಿ -೧

ತಲೆ ಹರಟೆ - 1
(ಸ್ವಲ್ಪ ಖಾರ ಸ್ವಲ್ಪ ಸಿಹಿ ) ಅಲ್ಲಿ ಇಲ್ಲಿ ನೋಡಿದ್ದು, ಕೇಳಿದ್ದು ಓದಿದ್ದು.........ಮುಂದ...........ಓದ್ರಿ ಮತ್ತ!

 ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ದಿನಗೂಲಿ ಮುಖ್ಯಮಂತ್ರಿ ---ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ನಾನು ನಿಜಕ್ಕೂ ದಿನಗೂಲಿ ನೌಕರನೇ ಸರಿ. ನಾಡಿನ 6.5 ಕೋಟಿ ಜನರ ವಿನಮ್ರ ಸೇವಕ --ಮುಖ್ಯಮಂತ್ರಿ ಸದಾನಂದ ಗೌಡ 
****
ಬಳ್ಳಾರಿಯಿಂದ ಹೈದರಬಾದಿಗೆ ಲಾರಿಯಲ್ಲೇ ಕೋಟ್ಯಂತರ ರೂ. ಸಾಗಾಟ,
-- 
ಗಣಿನ ಲೂಟಿ ಹೊಡೆದ ದುಡ್ಡು, ಇವತ್ತು ಇಷ್ಟು ಸಿಕ್ಕಿ ಹಾಕಿಕೊಳ್ತು, ಇನ್ನು ಎಷ್ಟಿದೆಯೋ? ಇದಕ್ಕೂ ಮುಂಚೆ ಎಷ್ಟು ಸಾಗಿಸಿದ್ದಾರೋ? ಯಾರ್ಯಾರು ತಗೊಂಡಿದಾರೋ? ಯಾರು ಕೊಟ್ಟಿದಾರೋ? ಧಣಿಗಳೇ ಬಲ್ಲರು.
****
ಸೆಲೆಬ್ರಿಟಿಗಳು ಜೈಲು ಸೇರಿದ್ರೆ ಏನೇನೋ ಕಾಯಿಲೆ ಗಳು ಒಂದೇ ದಿನದಲ್ಲಿ ಬಂದು ಬಿಡುತ್ವೆ ಯಾಕೆ.
-- ಕಾಯಿಲೆಗಳು ಜನಸಾಮನ್ಯರಿಗೆ ಸ್ವಲ್ಪ ಉದಾರಿ, ಆದರೆ ಸೆಲೆಬ್ರಿಟಿಗಳು ಜೈಲು ಸೇರಿದ್ರೆ ಒಂದೇ ಸಾರಿ ಅಟಕಾಯಿಸ್ಕೊಂಡು ಬಿಡ್ತಾವೆ.
****
ಉದಯವಾಣಿ’ಯಲ್ಲಿ ಪತಿ ಲೇಖನ ಬರೆದರೆ?
--ಸಮಯದಲ್ಲಿ ಪತ್ನಿಗೆ ಪಿಂಕ್ ಸ್ಲಿಪ್.
****
ಬದಲಾದ ಸಮಯ ಲುಕ್
-- ಏನ್ ಸಮಯ 24 X 7 ಲೋಗೋ ನ ? 
ಅಲ್ಲ , 
ಮತ್ತೆ?
ಹಾಟ್ ಹಾಟ್ ಸೀನ್ ಗಳು
ಅಂದ್ರೆ ?
ನಿನ್ನೆ (೧೫.೦೯.೨೦೧೧) ಕಿಸ್ ಕಿಂಗ್ - ಸೆನ್ಸಾರ್ ಇಲ್ಲದ ಇಮ್ರಾನ್ ಹಶ್ಮಿ ಯ ಕಾಮ ಕೇಳಿ.
****
ರಮ್ಯ ನಟಿಸಿದ ಲಕ್ಕಿ ಸಿನಿಮಾ ನಿರ್ಮಾಪಕಿ-- ರಾಧಿಕ "ಕುಮಾರಸ್ವಾಮಿ"
-- ಓಹೋ ಈಗ ಅಧಿಕೃತ ಮುದ್ರೆ ಬಿತ್ತಾ!
****
ಸತತ ಹನ್ನೊಂದು ವರ್ಷಗಳಿಂದ ಉಪವಾಸ ನಡೆಸುತ್ತಿರುವ ಇರೋಮ್ ಶರ್ಮಿಳಾ ಚಾನು ರವರ ಮಾತುಗಳನ್ನು ಕೇಳಿ ಅಂತ ಅಂದರು
-- ಮಾಧ್ಯಮ ದವರಿಗೆ ಈಗ ಜ್ನಾನೋದಯ ಆಯಿತ? ಅಂತ ಇನ್ನೊಬ್ಬರು ಕೇಳಿದರು.
****
ಇಂಜಿನೀಯರ್ಸ್ ಡೇ-- ಇಂಜಿನೀಯರ್ಸ್ ಗಳಿಗೆ ನಮನ
ನಮ್ಮ ಇಂಜಿನಿಯರುಗಳಿಗೆ ದೊಡ್ಡ ನಮಸ್ಕಾರ
-- 
ಧನ್ಯವಾದ ಅರ್ಪಣೆಯ ಈ ತಂಪನೆ ಹೊತ್ತಿನಲ್ಲಿ ಕಡುಬಡವರಿಗೆ ಈಗಲೋ ಆಗಲೋ ಬೀಳತ್ತೆ ಎನಿಸುವ "ಆಸರೆ" ಗೃಹ ಕಟ್ಟಿಕೊಡುವ, ಪುತಪುತನೆ ಉದುರುವ ಹೌಸಿಂಗ್ ಬೋರ್ಡ್ ಮನೆಗಳನ್ನು ಕಟ್ಟುವ, ಇಲ್ಲದ ನದಿಗೆ ಸುಳ್ಳುಸುಳ್ಳೇ ಸೇತುವೆ ಕಟ್ಟುವ ಛೀಫ್ ಎಕ್ಸಿಕ್ಯುಟಿವ್ ಇಂಜಿನಿಯರುಗಳನ್ನು ಮತ್ತು ರಸ್ತೆಗೆ ಟಾರ್ ಹಾಕ್ರೋ ಎಂದರೆ ಅಲ್ಲೇ ಗಣಿಗಾರಿಕೆ ಮಾಡ್ತೀನಿ ಅನ್ನೋ ಮುನ್ಸಿಪಾಲ್ಟಿ ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳಬಾರದು (ದಟ್ಸ್ ಕನ್ನಡ ಸಂಪಾದಕರು- ಶ್ಯಾಮ್ ಸುಂದರ್)
****
ಒಂದು ಮಾತು--
ಪ್ರತಿಯೊಬ್ಬರು ಒಳ್ಳೆಯವರೆ. ನಾವು ಬೇರೆಯವರಿಂದ ಏನನ್ನು ಬಯಸದೇ ಇರುವ ತನಕ........ವಿಜಯ್ ದೊರೆ(ಫೇಸ್ ಬುಕ್ಕಿನಲ್ಲಿ)
****
ಈ ಮಾತು ಯಾರು ಯಾರಿಗೆ ಯಾವಗ ಹೇಳ್ತಾರೆ
"ಇಂಗ್ಲೀಷಿನೋರಿಗೆ ಹುಟ್ಟಿದಂಗೆ ಆಡ್ತಾನೆ/ಆಡ್ತಾಳೆ/ಆಡ್ತಾರೆ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ