ಮಂಗಳವಾರ, ಸೆಪ್ಟೆಂಬರ್ 27, 2011

ಹೆಚ್.ವಿಶ್ವನಾಥ್ ರ ಮಾತು ಅಂದರೆ...........



ಚುನಾವಣೆಯಲ್ಲಿ ಹಣ ಹೆಂಡ ಹಂಚುವುದು ಸಾಮನ್ಯ ಅಂತ ಎಲ್ಲರಿಗೂ ಗೊತ್ತು ಆದ್ದರಿಂದ ಅದನ್ನು ಕಾನೂನು ಬದ್ದವಾಗಿ ಜಾರಿಗೋಳಿಸಿ ಅಂತ ಹೇಳಲಿಲ್ಲವಲ್ಲ ಸದ್ಯ. 


ತಾವು ಕಂಡ ಸತ್ಯಗಳನ್ನು ಸ್ವಲ್ಪವೂ ಮರೆಮಾಚದೇ ನೇರವಾಗಿ ಹೇಳುವ ಸರಳ ಸಜ್ಜನ ರಾಜಕಾರಣಿ  ಹೆಚ್.ವಿಶ್ವನಾಥ್ ರವರ ಮಾತು ಅಂದರೆ ಅಲ್ಲೊಂದು ವಿವಾದದ ಸಾಧ್ಯತೆ ಇಲ್ಲದೆ ಇರುವ ಅವಕಾಶ ಬಹು ಕಡಿಮೆ ಎನ್ನುವ ಮಟ್ಟಿಗೆ ಆಗಿದೆ ಇತ್ತೀಚಿನ ದಿನಗಳಲ್ಲಿ. ಕೆಲದಿನಗಳ ಹಿಂದೆ ಕಾಂಗ್ರೆಸ್ನಲ್ಲಿ ಸಖಿ ಸಂಸ್ಕೃತಿ ಬೆಳೆಯುತ್ತಿದೆ ಅಂತ ಒಂದು ಹೇಳಿಕೆ ಕೊಟ್ಟರು. ಆ ಮಾತಿನ ಬಾಣ ಡಿಕೆಶಿ ಮತ್ತು ನಟಿ ರಮ್ಯ ಕುರಿತದ್ದಾಗಿತ್ತು. ಆ ಸಖಿ ಯಾರು ಮತ್ತು ಯಾರಿಗೆ ಸಖಿ ಎಂದು ಕೇಳುವಷ್ಟರಲ್ಲಿ ಡಿಕೆಶಿ ಯಾರು ಸಖಿ ಸಂಸ್ಕೃತಿ ಹುಟ್ಟು ಹಾಕುತ್ತಿದ್ದಾರೆ ಎಂಬುದನ್ನು ಹೈಕಮಾಂಡ್ ಗೆ ದೂರಲಿ ಅಂತ ಹೇಳೀಯೆ ಬಿಟ್ಟರು.



ತಮ್ಮ ಮಗ ಜೈನಧರ್ಮದ ಹುಡುಗಿಯನ್ನು ಪ್ರೀತಿಸಿದಾಗ, ಅವರಿಷ್ಟದಂತೆಯೆ ಯವುದೇ ವಿರೋಧ ತೋರದೆ ಸರಳ ಮದುವೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು.


ಒಂದು ಸಾರಿ ಕಾಂಗ್ರೆಸ್ಸಿಗರಿಗೆ ಕಾಲುಬಾಯಿ ರೋಗ ಅಂತ ಹೇಳಿ ಪಕ್ಷದ ಒಳಗಡೆ ವಿರೋಧ ಕಟ್ಟಿಕೊಂಡಿದ್ದರು. ಹೀಗೆ ಒಂದಿಲ್ಲೊಂದು ವಿವಾದದ ಮಾತುಗಳನ್ನಾಡಿ ಹಲವರಿಗೆ ಇರುಸು ಮುರುಸು ಮಾಡಿರುವುದು ನಾವೆಲ್ಲ ಕಂಡಿದ್ದೇವೆ.


ತಮ್ಮ ಹಳ್ಳಿ ಹಕ್ಕಿಯ ಹಾಡು ಕೃತಿಯಲ್ಲಿ ಎಸ್.ಎಂ. ಕೃಷ್ಣ ಹಾಗೂ ನಟಿ ಸರೋಜಾದೇವಿ ಅವರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಎಸ್. ಎಂ. ಕೃಷ್ಣ ಮತ್ತು ಚಲನಚಿತ್ರ ಅಭಿನೇತ್ರಿ ಬಿ. ಸರೋಜಾದೇವಿ ನಡುವೆ "ಅಮರಾಮಧುರಾ ಪ್ರೇಮ, ನೀ ಬಾಬೇಗ ಚಂದಮಾಮ" ಎನ್ನುವಂಥ ಸಂಬಂಧಗಳು ಚಿಗುರೊಡೆದಿದ್ದವು. ಅವರಿಬ್ಬರ ಕೋಮಲ ಮನಸ್ಸುಗಳು ಪರಸ್ಪರ ಅನುರಾಗದ ತೆಕ್ಕೆಗೆ ಬಿದ್ದಿದ್ದವು ಎಂದು ಬರೆದಿದ್ದರು.


ರಾಜಕಾರಣಿಗಳ ದೌರ್ಬಲ್ಯವೇನೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ಎಲ್ಲರೂ politically correct ಆಗಿ ಇರಲು ಪ್ರಯತ್ನಿಸುತ್ತಾರೆ. ಅಂಥದ್ದರಲ್ಲಿ ವಿಶ್ವನಾಥ್ ಇಂತಹ ಹೇಳಿಕೆ ಗಳನ್ನು ಕೊಡುವ ಮೂಲಕ ಒಂದಿಲ್ಲೊಂದು ವಿವಾದ ಗಳನ್ನು ಮೈಮೆಲೆ ಎಳೆದುಕೊಳ್ಳುತ್ತಾರೆ.  


ಜನರಿಗೆ ಆಮಿಷ ನೀಡಿ ಮತದಾರರನ್ನು ಸೆಳೆಯಲು ಇಂತಹ ಮಾರ್ಗ ಗಳನ್ನು ಶುರು ಮಾಡಿದ್ದು ಯಾರು? ಈ ರಾಜ ಕಾರಣಿಗಳೇ ಅಲ್ಲವೆ. ಅಧಿಕಾರ ಬೇಕು ಅದಕ್ಕಾಗಿ ಇಂತಹ ವಾಮ ಮಾರ್ಗಗಳನ್ನು ಹುಡುಕಿದರು. ಜತೆಗೆ ಜಾತಿ  ಧರ್ಮದ ಓಲೈಕೆ. ಹೀಗೆ ಸಮಾಜವನ್ನು  ಒಡೆದು ಆಳುವ ಕಾರ್ಯವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಮಾಡುತಿದ್ದಾರೆ. 


ಪ್ರತಿಯೊಬ್ಬರಿಗೂ ಶಿಕ್ಷಣ ಹಾಗು ಮೂಲಭೂತ ಸೌಲಭ್ಯಗಳನ್ನು ನೀಡಿ ದ್ದರೆ ಇಂತಹ ಪ್ರಮೇಯವೇ ಬರುತ್ತಿರಲಿಲ್ಲ. ಸುಶಿಕ್ಷಿತ ಮತದಾರರು ಇಂತಹ ಯಾವುದೇ ಆಮಿಷಗಳಿಗೆ ಒಳಗಾಗದೆ ತಮಗೆ ಬೇಕಾದ ವ್ಯಕ್ತಿಗೆ ಮತ ಚಲಾಯಿಸುತ್ತಾರೆ,  ಚುನಾವಣ ನೀತಿ ಸಂಹಿತೆ ಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿದ್ದು ಟಿ,ಎನ್ ಶೇಷನ್, ಕಾಯ್ದೆ ಯಲ್ಲಿ ಇದ್ದ ಕಾನೂನುಗಳ ವ್ಯಾಪ್ತಿಯಲ್ಲಿ  ಚುನಾವಣೆ ಹೇಗೆ ನಡೆಯಬೇಕು ಎಂದು ತೋರಿಸಿಕೊಟ್ಟಿದ್ದರು. ಅಂತಹ ಇಚ್ಚಾಶಕ್ತಿ ಎಲ್ಲರಿಗೂ ಇದ್ದರೆ ಪ್ರತಿಯೊಂದು ಚುನಾವಣೆಗಳು ಕಟ್ಟುನಿಟ್ಟಾಗಿ ನಡೆಯುತಿದ್ದವು.


ರಾಜಕಾರಣಿಗಳು ಬದಲಾಗದೆ ಮತದಾರರು ಬದಲಾಗುವುದು ಸಾಧ್ಯವಿಲ್ಲ ಎಷ್ಟು ನಿಜವೋ ಹಾಗೆ ಮತದಾರರು ಬದಲಾಗದೆ ರಾಜಕಾರಣಿಗಳು ಬದಲಾಗಲು ಸಾಧ್ಯ್ವವಿಲ್ಲ. ಬಹುತೇಕ ಅರಬ್ ದೇಶಗಳಲ್ಲಿ ಮಧ್ಯಪಾನ ನಿಷೇದ ವಿದ್ದು ಸಮಾಜದ ಸ್ವಾಸ್ತ್ಯವನ್ನು ಕಾಪಡುವಲ್ಲಿ ಯಶಸ್ವಿಯಾಗಿದೆ. 



ಮಾನ್ಯ ವಿಶ್ವನಾಥ್ ರವರ ಹೇಳಿಕೆಗಳು ಸಮಾಜವನ್ನು ಬದಲಾಯಿಸುವ ಕಾರ್ಯಕ್ಕೆ ಮುನ್ನುಡಿಯಾಗಬೇಕು ಹೊರತು ಸಮಾಜವನ್ನು ಪ್ರಪಾತಕ್ಕೆ ತಳ್ಳುವಂತಾಗಬಾರದು. ಮಧ್ಯಪಾನ ನಿಷೇದ ಮಾಡಿ ಅಂತ ಒಂದು ಹೋರಾಟ ಬಹು ಕಾಲದಿಂದಲೂ ನಡೆಯುತಿದೆ. ಗಾಂಧೀಜಿಯವರು ಸಹ ಮಧ್ಯಪಾನ ನಿಷೇದಕ್ಕೆ ತಮ್ಮ ಸಮ್ಮತಿಯನ್ನಿತ್ತಿದ್ದರು. ಅದೇ ಗಾಂಧೀಜಿ ಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷದ ಇಂದಿನ ರಾಜಕಾರಣಿ ವಿಶ್ವನಾಥ್ ರವರು ಹಣ ಹೆಂಡ ದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ.


 ಇಂದು ರಾಜಕಾರಣಿಗಳು  ಸಾರಾಯಿ ಮೇಲಿನ ನೀಷೇದ ತೆಗೆಯಿರಿ ಎಂದು ಒತ್ತಾಯಿಸುತ್ತಾರೆ, ಆಮೇಲೆ ಹಣ ಹೆಂಡ ಹಂಚೋದಕ್ಕೆ ಕಾನೂನು ಬದಲಾವಣೆ ಮಾಡಿ ಅಂತಾರೆ. ಹಾಗೆ ಬೇರೆಯವರು ವೇಶ್ಯಾವಾಟಿಕೆ ಗೆ ಒಂದು ಕಾನೂನು ಮಾಡಿ ಅಂತಾರೆ, ನಮಗೆ ಅರಣ್ಯಪ್ರಾಣಿಗಳ ಬೇಟೆಯಾಡುವಾಸೆ, ಆ ನಿಷೇದ ತೆಗೆಯಿರಿ ಅಂತಾರೆ, ಲಂಚತೆಗೆದುಕೊಳ್ಳೋದಿಕ್ಕೆ ಕಷ್ಟಾಅಗ್ತಾಯಿದೆ ಲೋಕಾಯುಕ್ತ ಬಂದ್ ಮಾಡಿ ಅಂತಾರೆ  ಹಿಂಗೆ ಎಲ್ಲ ನಿಷೇದಗಳನ್ನು ತೆಗೆದು ಎಲ್ಲರಿಗೂ full freedom ಕೊಟ್ಟು ಯಾರ್ಯಾರಿಗೆ ಹೇಗೆ ಬೇಕೊ ಹಾಗೆ ಕಾನೂನು ಬದಲಾವಣೆ ಮಾಡಿ ಎಲ್ಲರು ಶಿಲಾಯುಗದ ಆದಿಮಾನವರಾಗಿ ಇದ್ದುಬಿಟ್ರೆ ಎಷ್ಟು ಚೆನ್ನಾಗಿರುತ್ತೆ.


ಕೊನೆಕುಟುಕು:


AVÛVÚ ÑÚ}ÚÀ ÔæÞ×Û¡«æ ÑÛÁé
GÑé.GM. OÚäÎÚ| ÈÚßßRÀÈÚßM~à AW¥Û§VÚ ÑÚM®Úâ´lÑÚºæ ÈÚßßWÒ, ÑÚ_ÈÚ G^é. ÉËÚ‡«Û¢é d}æ ɨ۫ÚÑè¨Ú¥Ú AÈÚÁÚy¥ÚÆÇ «Úsæ¥Úß ÔæàÞVÚß~¡¥Û§VÚ GIÒÒ ÈÚáÛf ÑÚ¥ÚÑÚÀ ÔÚÂËÚ`M¥ÚÃVèsÚ G¥ÚßÁÛ¥ÚÁÚß. OÚäÎÚ| @ÈÚÁÚ«Úß„ OÚMsÚÈÚÁæÞ †Û¿ßVæ …M¥ÚM}æ …¾ÚßÀÄß ËÚßÁÚß ÈÚáÛt¥ÚÁÚß. "ÑæÉß' GM¥æÞ VÚßÁÚß~ÒOæàMtÁÚßÈÚ ÔÚÂËÚ`M¥ÚÃVèsÚÂVæ ®ÚÁÚÁÚ ¬M¥Ú«æ ®ÚÁÚÈÚß R¾ÚáÛÆ. "¬ÞÈÚâ´ @ƒOÛÁÚOæQ …M¥Ú ÈæßÞÅæ ÁÛdÀOæQ …ÁÚ …M}Úß. AVÚ†ÛÁÚ¥æ§ÄÇ AWÔæàÞ¿ß}Úß' - ÕÞVæ H«æÄÇ J¥ÚÂ¥ÚÁÚß. GÄÇÁæ¥ÚßÁÚß ÈÛVÛ§ØVæ ÒPQ¥Úߧ OÚäÎÚ| @ÈÚÂVæ ÈÚßßdßVÚÁÚ DMlß ÈÚáÛt}Úß. @¥Ú«Úß„ }æàÁÚVæàsÚ¥Ú OÚäÎÚ|, "ÂÞ, ÉËÚ‡«Û¢é ¾ÚáÛÂ%Þ @¥Úß. H«æÞ«æà ÈÚáÛ}Ût¡¥Û§Áæ' @M}Ú OæÞØ¥ÚÁÚß. AVÚ ÉËÚ‡«Û¢é ÔæÞØ¥Úߧ: "ÑÛÁé, @ÈÚâý„ ÔÚÂËÚ`M¥ÚÃVèsÚ @M}Ú «ÚÈÚáé ®Ûn%¾ÚßÈÚ«æÞ. Ñڇİ ÑÚ¿ßÄÇ. A¥ÚÁæ AVÛVÚ ÑÚ}ÚÀ ÔæÞ×Û¡«æ ÑÛÁé.' 

-- ಪಿ.ತ್ಯಾಗರಾಜ್

ಶುಕ್ರವಾರ, ಸೆಪ್ಟೆಂಬರ್ 23, 2011

ಹೀಗೊಂದು ಪತ್ರ !, ಉತ್ತರಿಸುವಿರಾ?

ಇಂದಿನ ಕನ್ನಡಪ್ರಭದ (24.09.2011) ಪತ್ರಪ್ರಭ ವಿಭಾಗದಲ್ಲಿ ಒಂದು ಪತ್ರ ಪ್ರಕಟವಾಗಿದೆ. ನಿಮ್ಮ ಪ್ರತಿಕ್ರಿಯೆ ತಿಳಿದುಕೊಳ್ಳುವ ಕುತುಹಲವಿದೆ ನನಗೆ.
ಮತ್ತೆ ತಡ ಏಕೆ ಪ್ರತಿಕ್ರಿಯಿಸಿ.

ತಲೆಹರಟೆ - ಸ್ವಲ್ಪ ಖಾರ ಸ್ವಲ್ಪ ಸಿಹಿ - 2


ಚೀನಾ ವಿದ್ಯಾರ್ಥಿಗಳಿಗೆ ಸೆಕ್ಸ್- ಲವ್ ಕೋರ್ಸ್ ಕಡ್ಡಾಯ
ಚೀನಾ ಶಿಕ್ಷಣ ಸಚಿವಾಲಯ ಲೈಂಗಿಕ ಶಿಕ್ಷಣ ಹಾಗೂ ಪ್ರೇಮ ಪಾಠವನ್ನೊಳಗೊಂಡ ಮನಃಶಾಸ್ತ್ರ ಅಧ್ಯಯನವನ್ನೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಪೀಟರ್ :- ಥಿಯರಿ ಜತೆ ಪ್ರಾಕ್ಟಿಕಲ್ ಕ್ಲಾಸಸ್ ಉಂಟೋ?


ನರೇಂದ್ರ ಮೋದಿ ನಿರಶನಕ್ಕೆ ಜಯಲಲಿತಾ ಬೆಂಬಲ

ತೃತಿಯ ರಂಗದಿಂದ ಎನ್ ಡಿ ಎ ಗೆ ಜಂಪ್ ಮಾಡುವ ಮುನ್ಸೂಚನೆಯೋ?

30 ಕೆಜಿ ತೂಕ ಇಳಿಸಿಕೊಂಡ ಗಡ್ಕರಿ
ಹೊಟ್ಟೇಲಿ ಏನಿತ್ತು ಅಂತ ಕೇಳಿದ್ರಂತೆ ಬೇರೆ ಪಕ್ಷದೋರು!


ನಮ್ಮ ಮೆಟ್ರೊ ಬೇಗ ಕಟ್ರೋ
ಬೇಗ ಬೇಗ ಕಾಸು ಬಿಚ್ಚಿದರೆ ಏನು ಬೇಕಾದರು ಕಟ್ಟುತ್ತೀವಿ,  



Facebook nalli Sri Rama Gowda ಪೋಸ್ಟ್ ಮಾಡಿದ್ದು
ಬೇರೆಯವರಿಗೆ ಕೊಡುವ ಉಪದೇಶವನ್ನು ನಾವೇ ಪಾಲಿಸಿದರೆ ಎಲ್ಲರಿಗಿಂತ ಮೊದಲು ಯಶಸ್ವಿಯಾಗಬಹುದು...





ಸೋಮವಾರ, ಸೆಪ್ಟೆಂಬರ್ 19, 2011

ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಯಾಕೆ ತೂಗ್ತೀರ?




ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸೋಮವಾರ ಸಂಜೆ ರಾಜ್ಯಪಾಲ ಹಂಸರಾಜ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ  ಸಲ್ಲಿಸಿದ್ದಾರೆ. ಕಾರಣ ನಿಯಮ ಬಾಹಿರ ವಾಗಿ ನಿವೇಶನ ವನ್ನು ಹೊಂದಿದ ಆರೋಪದ ಮೇಲೆ. ಇದೆಲ್ಲ  ಶುರುವಾಗಿದ್ದು ಒಂದು ಆಂಗ್ಲ ಮಾಧ್ಯಮ ವರದಿಯಿಂದ


ನ್ಯಾ.ಶಿವರಾಜ್ ಪಾಟೀಲ್ ನೇಮಕವಾಗಿದ್ದು ಯಡ್ಯೂರಪ್ಪನವರಿಂದ, ಮೊದಲೇ ಯಡ್ಯೂರಪ್ಪ ಭ್ರಷ್ಟಾಚಾರ ಆರೋಪವನ್ನು ಎದುರಿಸುತಿದ್ದಾರೆ ಹಾಗು ತಮ್ಮದೇ ಜಾತಿಯವರನ್ನು ಅವರು ನೇಮಕ ಮಾಡಿದ್ದಾರೆ ಆದ್ದರಿಂದ ಇದೇ ಹಿನ್ನಲೆ ಮೇಲೆ ಶಿವರಾಜ್ ಪಾಟೀಲ್ ರ ಮೇಲೆ ಒಂದು ಕಣ್ಣು ಇಟ್ಟು ಅವರ ಆಸ್ತಿ ಪಾಸ್ತಿ ಗಳನ್ನು ವಿವರವನ್ನು ಕಲೆ ಹಾಕಿದ್ದಾರೆ. ೩ ನಿವೇಶನಗಳು ಕಂಡ ಕೂಡಲೆ ಅವರ ಮೇಲೆ ಆರೋಪ ಮಾಡಿದ್ದಾರೆ


ಮೊದಲನೆಯದಾಗಿ '1982ರಲ್ಲಿ ಅವರು  ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲನಾಗಿ ಸೇವೆ ಸಲ್ಲಿಸುತ್ತಿರುವಾಗ ವಸಂತನಗರದಲ್ಲಿ ಸಣ್ಣ ನಿವೇಶನವೊಂದನ್ನು ಖಾಸಗಿ ವ್ಯಕ್ತಿಯಿಂದ ಖರೀದಿಸಿ ಮನೆ ಕಟ್ಟಿದ್ದರು. ಈ ನಿವೇಶನವನ್ನು ಸರ್ಕಾರ ಅಥವಾ ಯಾವುದೇ ಸೊಸೈಟಿಯಿಂದ ಪಡೆದುಕೊಂಡಿಲ್ಲ'


ಎರಡನೆಯದಾಗಿ   1994ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ ಕರ್ನಾಟಕ ನ್ಯಾಯಾಂಗ ಇಲಾಖೆ ಹೌಸಿಂಗ್‌ ಸೊಸೈಟಿಯಿಂದ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನವೊಂದನ್ನು ಪಡೆದುಕೊಂಡಿದ್ದರು


ಮೂರನೆಯದು, 2006ರಲ್ಲಿ ಅಂದರೆ ಸುಪ್ರೀಂಕೋರ್ಟ್‌ ನ್ಯಾಯಾಮೂರ್ತಿ ಸ್ಥಾನದಿಂದ ನಿವೃತ್ತಿಯಾದ ಬಳಿಕ  ಅವರ ಪತ್ನಿಯು ನಾಗವಾರದಲ್ಲಿ ವೈಯಾಲ್‌ಕಾವಲ್‌ ಹೌಸಿಂಗ್‌ ಸೊಸೈಟಿಯಿಂದ ನಿವೇಶನವೊಂದನ್ನು ಖರೀದಿಸಿದ್ದರು. ಸಮಸ್ಯೆಗೆ ಈಡು ಮಾಡಿದ್ದು ಇದೇ ಸೈಟ್ ವಿಚಾರ, ತಮ್ಮ ಹೆಸರಿನಲ್ಲಿ ವಸಂತನಗರದಲ್ಲಿ ಒಂದು ನಿವೇಶನ ಇದ್ದಿದ್ದರೂ ಹೆಂಡತಿ ಹೆಸರಲ್ಲಿ ಮತ್ತೊಂದು ಹೌಸಿಂಗ್ ಬೋರ್ಡ್ ನಿವೇಶನ ಕೊಂಡ ಆರೋಪ.
ಕೂಲಂಕುಷವಾಗಿ  ವಿಚಾರಣೆ ನಡೆಸಿದರೆ ಸತ್ಯ ಏನಂತ ಗೊತ್ತಾಗುತ್ತೆ. ಹೋಗಲಿ ಎಂದರೆ ಕೆ,ಜಿ,ಬಾಲಕೃಷ್ಣನ್ ಮತ್ತು ಪಿ,ಡಿ,ದಿನಕರನ್   ರವರು ಎದುರಿಸಿದ ಆರೋಪ ಗಳಿವೆಯಾ? ಯಕಶ್ಚಿತ್  ಒಂದು ಕ್ಷುಲ್ಲಕ ಕಾರಣದಿಂದ ಅವರ ಜೀವಮಾನ ವಿಡಿ ಕಾಪಾಡಿಕೊಂಡು ಬಂದಿದ್ದ  ಪ್ರಾಮಣಿಕತೆ ಗೌರವ ಮಣ್ಣು ಪಾಲು ಮಾಡಲು ಹೊರಟಿದ್ದು ಎಷ್ಟು ಸರಿ? ಅವರಂಥ  ದಕ್ಷ  ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ಸಮರ ಸಾರಲು, ಅವರ ರಾಜೀನಾಮೆ ಪಡೆಯಲು ಇದು ಸಮಂಜಸವಾದ ಸಮಯವೆ?


ಅವರು ಸಲ್ಲಿಸಿದ 2ಜಿ ತರಂಗಗುಚ್ಛ ಹಗರಣದ ವರದಿಯಿಂದಾಗಿ ಎ ರಾಜಾರಂಥ ಹಗಲು ದರೋಡೆಕೋರರು ಇಂದು ತಿಹಾರ್ ಜೈಲಿನಲ್ಲಿ ದ್ದಾರೆ. ಆ ಪ್ರಕರಣಗಳ ವಿಚಾರಣೆಗೆ ಹಿನ್ನಡೆ ಉಂಟಾಗುವುದಿಲ್ಲ  ಎನ್ನುವ ಗ್ಯಾರಂಟಿ ಇದೆಯಾ? 


ಕೆಲ ರಾಜಕೀಯ ಮುಖಂಡರು ಇಂತಹ  ಸಮಯದಲ್ಲಿ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ, ಯಾಕೆಂದರೆ ಅವರು ನ್ಯಾಯಮೂರ್ತಿ ಯಾಗಿದ್ದಾಗ ಕಳಂಕಿತ ಹಾಗೂ ಭ್ರಷ್ಟರಿಗೆ ಚೆನ್ನಾಗಿ ಬಿಸಿ ಮುಟ್ಟಿಸುತಿದ್ದರು.


ಆರೋಪ ಕೇಳಿಬಂದ ತಕ್ಷಣ ಸೆ. 14  ರಂದು ನಿವೇಶನ ವನ್ನು  ಹಿಂದಿರುಗಿಸಿದ್ದಾರೆ,  ಆದರೆ ಅದನ್ನೇ ಮುಂದಿಟ್ಟುಕೊಂಡು ಅಕ್ರಮ ಎಸಗಿದಿದ್ದುಕ್ಕಾಗಿ ಆರೋಪಿ ಎಂದು ಬಿಂಬಿಸಿದ್ದುದು ಎಷ್ಟರ ಮಟ್ಟಿಗೆ ಸರಿ?  ಬೆಟ್ಟದಷ್ಟು ಭ್ರಷ್ಟಾಚಾರದ ಸಮಸ್ಯೆಗಳು ನಮ್ಮ ಮುಂದೆ ಇರುವಾಗ, ಅದೇ ಬೆಟ್ಟವನ್ನು ಇಲಿಗಾಗಿ ಅಗಿಯುವುದು ಎಲ್ಲಿಯ ನ್ಯಾಯ? ತಪ್ಪಿನ ಪ್ರಮಾಣ ಎಷ್ಟೇ ಇರಲಿ, ತಪ್ಪು ತಪ್ಪೇ. ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುವಾಗ ಅದನ್ನೇ ದೊಡ್ಡದು ಮಾಡಿಕೊಂಡು, ಮುಂದಿನ ದೊಡ್ಡ ಸಮಸ್ಯೆಗಳನ್ನು  ಸಣ್ಣದಾಗಿಸುವುದು ಎಷ್ಟು ಸರಿ?  ಇಂತಹ ಪ್ರವೃತ್ತಿಯಿಂದ ಪ್ರಾಮಾಣಿಕ ವ್ಯಕ್ತಿ ಗಳಿಗೆ ಹಿನ್ನಡೆಯಾಗಿ ಇಂತಹ ಯಾವುದೇ ಜವಬ್ದಾರಿಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಭ್ರಷ್ಟಾಚಾರ ವಿರುದ್ಧ ದ ಹೋರಾಟಕ್ಕೆ ಸೋಲಾಗುತ್ತದೆ. ಭ್ರಷ್ಟರ ಕೈ ಮೇಲಾಗುತ್ತದೆ.
Kannadaprabha 24.09.2011


Kannadaprabha 22.09.2011





Kannadaprabha 21.09.2011
sampadakeeya - Vishweswara Bhat




Kannadaprabha 20.09.2011




Samyukta Karnataka 20.09.2011





ಶನಿವಾರ, ಸೆಪ್ಟೆಂಬರ್ 17, 2011

ನಾವು ಹೀಗೇನೆ...!

ಗೆಣಸ್ಲೆ ಬ್ಲಾಗ್ - ಸಚಿನ್ ಭಟ್ ಬರೆದ ಲೇಖನ
ಅ೦ತೂ ಡೆಲ್ಲಿಯಲ್ಲಿ ಮತ್ತೊ೦ದು ಬಾ೦ಬ್ ಢಮಾರ್ ಅ೦ದಿದೆ. ಪ್ರತಿ ಸ್ಫೋಟದ೦ತೆ ಒ೦ದಿಷ್ಟು ಜನ ಸತ್ತು ಕೆಲವರು ಆಸ್ಪತ್ರೆ ಸೇರಿದ್ದಾರೆ. ಟಿವಿ ಚಾನಲ್ಲುಗಳ ಬ್ರೇಕಿ೦ಗ್ ನ್ಯೂಸುಗಳಿಗೆ ವಾರಕ್ಕಾಗುವಷ್ಟು ಆಹಾರ ಸಿಕ್ಕಿದೆ. ಎ೦ದಿನ೦ತೆ ಮ.ಮೋ. ಸಿ೦ಗಮ್ ಮೌನವಾಗಿದ್ದಾರೆ. ಅವರು ಮಾತೇ ಆಡುವುದಿಲ್ಲ. ಆಡಿದರೂ ಯಾರೂ ಕೇಳುವವರಿಲ್ಲವೆ೦ಬುದು ಅವರಿಗೂ ಗೊತ್ತು. ಒ೦ದು ಲಕ್ಷ, ಐವತ್ತು ಸಾವಿರದ ಕೆಲ ಚೆಕ್ಕುಗಳನ್ನು ಹಿಡಿದುಕೊ೦ಡು ಹೋಗಿ ಸೋನಿಯಾ ಸ೦ತ್ರಸ್ತರಿಗೆ ಹ೦ಚಿ ಫೋಟೊಕ್ಕೆ ಪೋಸ್ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಪಾಕಿಸ್ತಾನದಲ್ಲಿ ದಿನವೂ ಬಾ೦ಬ್ ಸ್ಫೋಟವಾಗುತ್ತದೆ, ನಮ್ಮಲ್ಲಿ ನೋಡಿ ಎಷ್ಟೊ೦ದು ಕಡಿಮೆ. ಇದನ್ನು ನೋಡಾದರೂ ಸ೦ತೋಷಪಡಿ ಎ೦ದು ಸಾ೦ತ್ವನ ಹೇಳುತ್ತಾರೆ ರೌಲ್ ವಿನ್ಸಿ ಅಲ್ಲಲ್ಲ ರಾಹುಲ್ ಗಾ೦ಧಿ. ಇದಕ್ಕೆ ಪೋಲಿಸ್ ವೈಫಲ್ಯವೇ ಕಾರಣವೇ ಹೊರತೂ ಸರ್ಕಾರವಲ್ಲ ಎನ್ನುತ್ತಾರೆ ಪ್ರಣಬ್ ದಾ. ಘಟನೆಯ ನೈತಿಕ ಹೊಣೆ ಹೊತ್ತು ಗೃಹಸಚಿವರು ರಾಜಿನಾಮೆ ನೀಡಬೇಕು ಎ೦ದಬ್ಬರಿಸಿ ಸುಮ್ಮನಾಗುತ್ತಾರೆ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್. ಭಯೋತ್ಪಾದಕರು ಮೊದಲೇ ಹೇಳಿ ಬಾ೦ಬ್ ಸ್ಫೋಟಿಸಿದ್ದರೆ ನಮಗೆ ಗೊತ್ತಾಗುತ್ತಿತ್ತು. ಆದ್ದರಿ೦ದ ನಮ್ಮ ತಪ್ಪೇನೂ ಇಲ್ಲ. ಅಷ್ಟಕ್ಕೂ ಕಳೆದ ಹದಿನೈದು ದಿನದಲ್ಲಿ ಇದೊ೦ದೇ ಭಯೋತ್ಪಾದಕರ ದಾಳಿ ನಡೆದದ್ದು ಎ೦ದು ಸಮರ್ಥಿಸಿಕೊಳ್ಳುತ್ತಾರೆ ಚಿದ೦ಬರಮ್. ಪಾಪದ ಭಯೋತ್ಪಾದಕರ ಹೆಸರು ಕೆಡಿಸಲು ಈ ಬಾ೦ಬ್ ಸ್ಫೋಟವನ್ನು ನಡೆಸಿದ್ದೇ ಅರೆಸ್ಸೆಸ್ ಎ೦ದು ಚಾನಲ್ಲುಗಳೆದುರು ಕೂಗುತ್ತಾರೆ ಡಿಗ್ಗಿ ರಾಜಾ. ಯುರೇಕಾ ಯುರೇಕಾ ಎ೦ದು ಏನನ್ನೋ ಕ೦ಡುಹಿಡಿದವರ೦ತೆ ಕೇಸರಿ ಭಯೋತ್ಪಾದನೆಯೇ ಇದಕ್ಕೆ ಕಾರಣವಿರಬಹುದೆ೦ದು ದಿನಗಟ್ಟಲೆ ಚರ್ಚಿಸುತ್ತಾರೆ ರಾಜದೀಪ್ ಸರ್ದೇಸಾಯ್ ಮತ್ತು ಸಾಗರಿಕಾ ಘೋಶ್. ಮು೦ದಿನ ಕಾರ್ಯತ೦ತ್ರಗಳ ಕುರಿತು ಚರ್ಚಿಸಲು ಸರ್ಕಾರ ಉನ್ನತ ಅಧಿಕಾರಿಗಳು ಮತ್ತು ಮ೦ತ್ರಿಗಳ ಸಭೆ ಕರೆಯುತ್ತದೆ. ಬ೦ದವರೆಲ್ಲ  ಬಿಸ್ಕಿಟ್ ತಿ೦ದು ಟೀ ಕುಡಿದು ಎದ್ದು ಹೋಗುತ್ತಾರೆ. ಸ೦ಸತ್ತಿನಲ್ಲಿ ಎಡ, ಬಲ, ಮಧ್ಯಗಳೆಲ್ಲ ಒಟ್ಟಾಗಿ ನಾವು ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎ೦ದು ಘೋಷಿಸುತ್ತಾರೆ. ಇವೆಲ್ಲವುಗಳ ಮಧ್ಯೆ ಅಬ್ಬ ನಾವು ಸಾಯದೇ ಬಚಾವಾದೆವು ಎ೦ದು ನಿಟ್ಟುಸಿರುಬಿಡುತ್ತಾರೆ ಸ್ಫೋಟದಲ್ಲಿ ಬದುಕುಳಿದ ಜನ. ಉಳಿದವರು ಹತ್ತರೊಳಗೆ ಹನ್ನೊ೦ದನೇ ಸುದ್ದಿಯ೦ತೆ ಪತ್ರಿಕೆಯಲ್ಲಿ ಓದಿ ದಿವ್ಯವಾದ ಆಕಳಿಕೆ ತೆಗೆದು ಎ೦ದಿನ೦ತೆ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಅವರಿಗೂ ಗೊತ್ತು ಮು೦ದಿನ ಬಾ೦ಬ್ ಸ್ಫೋಟವಾಗುವವರೆಗೆ ನಾವು ಸೇಫ್ ಎ೦ದು

ಶುಕ್ರವಾರ, ಸೆಪ್ಟೆಂಬರ್ 16, 2011

ಸ್ವಲ್ಪ ಖಾರ ಸ್ವಲ್ಪ ಸಿಹಿ -೧

ತಲೆ ಹರಟೆ - 1
(ಸ್ವಲ್ಪ ಖಾರ ಸ್ವಲ್ಪ ಸಿಹಿ ) ಅಲ್ಲಿ ಇಲ್ಲಿ ನೋಡಿದ್ದು, ಕೇಳಿದ್ದು ಓದಿದ್ದು.........ಮುಂದ...........ಓದ್ರಿ ಮತ್ತ!

 ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ದಿನಗೂಲಿ ಮುಖ್ಯಮಂತ್ರಿ ---ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ನಾನು ನಿಜಕ್ಕೂ ದಿನಗೂಲಿ ನೌಕರನೇ ಸರಿ. ನಾಡಿನ 6.5 ಕೋಟಿ ಜನರ ವಿನಮ್ರ ಸೇವಕ --ಮುಖ್ಯಮಂತ್ರಿ ಸದಾನಂದ ಗೌಡ 
****
ಬಳ್ಳಾರಿಯಿಂದ ಹೈದರಬಾದಿಗೆ ಲಾರಿಯಲ್ಲೇ ಕೋಟ್ಯಂತರ ರೂ. ಸಾಗಾಟ,
-- 
ಗಣಿನ ಲೂಟಿ ಹೊಡೆದ ದುಡ್ಡು, ಇವತ್ತು ಇಷ್ಟು ಸಿಕ್ಕಿ ಹಾಕಿಕೊಳ್ತು, ಇನ್ನು ಎಷ್ಟಿದೆಯೋ? ಇದಕ್ಕೂ ಮುಂಚೆ ಎಷ್ಟು ಸಾಗಿಸಿದ್ದಾರೋ? ಯಾರ್ಯಾರು ತಗೊಂಡಿದಾರೋ? ಯಾರು ಕೊಟ್ಟಿದಾರೋ? ಧಣಿಗಳೇ ಬಲ್ಲರು.
****
ಸೆಲೆಬ್ರಿಟಿಗಳು ಜೈಲು ಸೇರಿದ್ರೆ ಏನೇನೋ ಕಾಯಿಲೆ ಗಳು ಒಂದೇ ದಿನದಲ್ಲಿ ಬಂದು ಬಿಡುತ್ವೆ ಯಾಕೆ.
-- ಕಾಯಿಲೆಗಳು ಜನಸಾಮನ್ಯರಿಗೆ ಸ್ವಲ್ಪ ಉದಾರಿ, ಆದರೆ ಸೆಲೆಬ್ರಿಟಿಗಳು ಜೈಲು ಸೇರಿದ್ರೆ ಒಂದೇ ಸಾರಿ ಅಟಕಾಯಿಸ್ಕೊಂಡು ಬಿಡ್ತಾವೆ.
****
ಉದಯವಾಣಿ’ಯಲ್ಲಿ ಪತಿ ಲೇಖನ ಬರೆದರೆ?
--ಸಮಯದಲ್ಲಿ ಪತ್ನಿಗೆ ಪಿಂಕ್ ಸ್ಲಿಪ್.
****
ಬದಲಾದ ಸಮಯ ಲುಕ್
-- ಏನ್ ಸಮಯ 24 X 7 ಲೋಗೋ ನ ? 
ಅಲ್ಲ , 
ಮತ್ತೆ?
ಹಾಟ್ ಹಾಟ್ ಸೀನ್ ಗಳು
ಅಂದ್ರೆ ?
ನಿನ್ನೆ (೧೫.೦೯.೨೦೧೧) ಕಿಸ್ ಕಿಂಗ್ - ಸೆನ್ಸಾರ್ ಇಲ್ಲದ ಇಮ್ರಾನ್ ಹಶ್ಮಿ ಯ ಕಾಮ ಕೇಳಿ.
****
ರಮ್ಯ ನಟಿಸಿದ ಲಕ್ಕಿ ಸಿನಿಮಾ ನಿರ್ಮಾಪಕಿ-- ರಾಧಿಕ "ಕುಮಾರಸ್ವಾಮಿ"
-- ಓಹೋ ಈಗ ಅಧಿಕೃತ ಮುದ್ರೆ ಬಿತ್ತಾ!
****
ಸತತ ಹನ್ನೊಂದು ವರ್ಷಗಳಿಂದ ಉಪವಾಸ ನಡೆಸುತ್ತಿರುವ ಇರೋಮ್ ಶರ್ಮಿಳಾ ಚಾನು ರವರ ಮಾತುಗಳನ್ನು ಕೇಳಿ ಅಂತ ಅಂದರು
-- ಮಾಧ್ಯಮ ದವರಿಗೆ ಈಗ ಜ್ನಾನೋದಯ ಆಯಿತ? ಅಂತ ಇನ್ನೊಬ್ಬರು ಕೇಳಿದರು.
****
ಇಂಜಿನೀಯರ್ಸ್ ಡೇ-- ಇಂಜಿನೀಯರ್ಸ್ ಗಳಿಗೆ ನಮನ
ನಮ್ಮ ಇಂಜಿನಿಯರುಗಳಿಗೆ ದೊಡ್ಡ ನಮಸ್ಕಾರ
-- 
ಧನ್ಯವಾದ ಅರ್ಪಣೆಯ ಈ ತಂಪನೆ ಹೊತ್ತಿನಲ್ಲಿ ಕಡುಬಡವರಿಗೆ ಈಗಲೋ ಆಗಲೋ ಬೀಳತ್ತೆ ಎನಿಸುವ "ಆಸರೆ" ಗೃಹ ಕಟ್ಟಿಕೊಡುವ, ಪುತಪುತನೆ ಉದುರುವ ಹೌಸಿಂಗ್ ಬೋರ್ಡ್ ಮನೆಗಳನ್ನು ಕಟ್ಟುವ, ಇಲ್ಲದ ನದಿಗೆ ಸುಳ್ಳುಸುಳ್ಳೇ ಸೇತುವೆ ಕಟ್ಟುವ ಛೀಫ್ ಎಕ್ಸಿಕ್ಯುಟಿವ್ ಇಂಜಿನಿಯರುಗಳನ್ನು ಮತ್ತು ರಸ್ತೆಗೆ ಟಾರ್ ಹಾಕ್ರೋ ಎಂದರೆ ಅಲ್ಲೇ ಗಣಿಗಾರಿಕೆ ಮಾಡ್ತೀನಿ ಅನ್ನೋ ಮುನ್ಸಿಪಾಲ್ಟಿ ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳಬಾರದು (ದಟ್ಸ್ ಕನ್ನಡ ಸಂಪಾದಕರು- ಶ್ಯಾಮ್ ಸುಂದರ್)
****
ಒಂದು ಮಾತು--
ಪ್ರತಿಯೊಬ್ಬರು ಒಳ್ಳೆಯವರೆ. ನಾವು ಬೇರೆಯವರಿಂದ ಏನನ್ನು ಬಯಸದೇ ಇರುವ ತನಕ........ವಿಜಯ್ ದೊರೆ(ಫೇಸ್ ಬುಕ್ಕಿನಲ್ಲಿ)
****
ಈ ಮಾತು ಯಾರು ಯಾರಿಗೆ ಯಾವಗ ಹೇಳ್ತಾರೆ
"ಇಂಗ್ಲೀಷಿನೋರಿಗೆ ಹುಟ್ಟಿದಂಗೆ ಆಡ್ತಾನೆ/ಆಡ್ತಾಳೆ/ಆಡ್ತಾರೆ"

ಗುರುವಾರ, ಸೆಪ್ಟೆಂಬರ್ 15, 2011

ಇದು ವಾರ್ತಭಾರತಿಯ ವಿಶೇಷ.



 ಇದು ವಾರ್ತಭಾರತಿಯ ವಿಶೇಷ. 


ಬೇರೆ ಪತ್ರಿಕೆಗಳು ಕೊಡದ ಮಹತ್ವವನ್ನು ವಾರ್ತಭಾರತಿ ಪತ್ರಿಕೆ ತನ್ನ ಮುಖಪುಟದಲ್ಲಿ ಈ ವರದಿಯನ್ನು ಪ್ರಕಟಿಸುವುದರೊಂದಿಗೆ ತಾನು ಬಿನ್ನ ಎಂದು ತೋರಿಸಿದೆ. 

ಮತ್ತೊಂದು ವಿಶೇಷ ಎಂದರೆ, ಬೇರೆ ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಯೇ ಇಲ್ಲ. ಅಮೇರಿಕ ಕಾಂಗ್ರೆಸ್ಸಿನ ವರದಿಯ  ಭಿನ್ನ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ.


ಕನ್ನಡಪ್ರಭದ ವರದಿ ೧೩ ನೇ ಪುಟದಲ್ಲಿ



ಸಂಯುಕ್ತ ಕರ್ನಾಟಕದ ವರದಿ ೭ ನೇ ಪುಟದಲ್ಲಿ


ಪ್ರಜಾವಾಣಿಯ ವರದಿ ೧೨ ನೇ ಪುಟದಲ್ಲಿ


ರಾಹುಲ್- ಮೋದಿ ನೇರ ಸ್ಪರ್ಧೆ ಸಂಭವ











ಶುಕ್ರವಾರ, ಸೆಪ್ಟೆಂಬರ್ 9, 2011

ಇದಪ್ಪ ಮಾತು ಅಂದ್ರೆ!


ದುರಂತದ ಬಗ್ಗೆ ಮಾಹಿತಿ ಇದ್ದಿದ್ದರೆ ಮುಖಪುಟಕ್ಕೆ ಈ ಜಾಹಿರಾತು ತೆಗೆದುಕೊಳ್ಳುತ್ತಿರಲಿಲ್ಲವೇನೋ?

ಎಲ್ಲಾ ವಿವರಣೆ ಓಕೆ ಆದರೆ ಈ ಮೇಲಿನ ಮಾತು ಯಾಕೆ? ಸಮರ್ಥನೆ ಅಂದ್ರೆ ಇದು ಕಣ್ರಿ,

ಗುರುವಾರ, ಸೆಪ್ಟೆಂಬರ್ 8, 2011

ಈ ಎಡಬಿಡಂಗಿಗಳೇ ಹಿಂಗೇ!




ನಮ್ಮ ನಿಮ್ಮ ಮಧ್ಯೆಯಿರುವ ಕೆಲ ಎಡಬಿಡಂಗಿ ಗಳು ನಿನ್ನೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ಬಾಂಬ್ ಸ್ಪೋಟದ ಕುರಿತು ಒಂದು ಹೇಳಿಕೆ ಕೊಟ್ಟರು. " ಬಿಜೆಪಿಗೆ ಅವಮಾನ ಆಗುವ ಸಂಧರ್ಭ ಗಳಲ್ಲಿ ಬಾಂಬ್ ಸ್ಪೋಟ ನಡೆಯುತ್ತಿದೆ ಹಾಗಾಗಿ ರೆಡ್ಡಿಯ ಬಂಧನದ ಸಂಧರ್ಭ ದಲ್ಲಿ ಈ ಸ್ಪೋಟ ನಡೆದಿರುವುದು ಹಲವಾರು ಉಹಾಪೋಹಗಳಿಗೆ ಎಡೆ ಮಾಡಿಕೊಡುತ್ತಿದೆ. ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ನಡೆಸಿದ ಬಾಂಬ್ ಸ್ಪೋಟಗಳೇ ಇದಕ್ಕೆ ಸಾಕ್ಷಿ. ಅಣ್ಣಾ ಹಜಾರೆ ಮತ್ತು ರೆಡ್ಡಿ ಬಂಧನದ ಅಬ್ಬರ ಗಳಿಗಿಂತ ಹೆಚ್ಚಿನರೀತಿಯಲ್ಲಿ ಬಿಜೆಪಿ ದೇಶ ಭಕ್ತರು ಕಿರುಚಾಟಗಳನ್ನು ಶುರುಮಾಡ್ತಾರೆ ನೋಡ್ತಾಯಿರಿ" ಎಂದು ಎರಡು ಲೈನ್ ಬರೆದು ತಮ್ಮ ಮನಸ್ಸಿನಲ್ಲಿರುವ ಅಸಹ್ಯವನ್ನು ಹೊರಹಾಕಿದರು.


ಸ್ನೇಹಿತರೇ ನಾವು ಗಮನಿಸ ಬೇಕಾದ ಮುಖ್ಯವಾದ ಅಂಶವೆಂದರೆ ಈಗ ನಡೆಯುತ್ತಿರುವುದು ಭಯೋತ್ಪಾದಕರು ಮತ್ತು ಭಾರತ ದೇಶದ ಮಧ್ಯೆ ಯುದ್ದ, ಈ ಯುದ್ದ ದಲ್ಲಿ  ಭಯೋತ್ಪಾದಕರು ವಿಜಯಿಯಾಗುತಿದ್ದಾರೆ. ಈ ಭಯೋತ್ಪಾದನೆ ಕೃತ್ಯಗಳನ್ನ ಯಾವುದೇ ದೇಶ ಸುಮ್ಮನೆ ಸಹಿಸಿ ಕೊಳ್ಳುವುದಿಲ್ಲ. ಹಾಗು ಕೃತ್ಯ ನಡೆಸಿದವರಿಗೆ ಸರಿಯಾದ ಶಿಕ್ಷೆ ಕೊಡುವ ವ್ಯವಸ್ಥೆ ಬೇರೆ ದೇಶಗಳಲ್ಲಿದೆ. ಒಂದು ಸಣ್ಣ ಪ್ರಮಾದ ದಿಂದ ಬೆಂಗಳೂರಿನ ವೈದ್ಯ ಹನೀಫ್ ಆಸ್ಟ್ರೇಲಿಯಾದಲ್ಲಿ ಹೇಗೆ ನರಳಿದ ಎಂದು ನಮಗೆ ಗೊತ್ತಿಲ್ಲವೆ.


ಪಕ್ಷಗಳನ್ನು ಸಮರ್ಥಿಸಿಕೊಂಡು ಜಗಳವಾಡುವ ಸಮಯ ಇದಲ್ಲ. ಸುಮ್ಮನೆ ವಿತಂಡವಾದ ಮಾಡಿ ಎಲ್ಲದಕ್ಕು ಒಂದೊಂದು ಸಂಭಂದ ಕಲ್ಪಿಸಿ ನಿಮ್ಮ ಹೊಲಸನ್ನು ಕಾರಬೇಡಿ. ನಿಮ್ಮ ಭಂಡತನದ ನಿಲುವುಗಳು ಏನೆಂದು ಅಣ್ಣಾ ಹಜಾರೆ ಹೋರಾಟದ ಸಂಧರ್ಭದಲ್ಲಿ ನಮ್ಮ ಭಾರತದ ಎಲ್ಲ ಸತ್ಪ್ರಜೆಗಳಿಗೆ ಗೊತ್ತಾಗಿವೆ.


ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ , ಎಲ್ಟಿಟಿಯಿ, ಎಲ್ ಇ ಟಿ ಅಥವ ಮತ್ತಿನ್ಯಾದೋ ಸಂಘಟನೆ ಇಂತಹ ಕೃತ್ಯ ಯಾರೇ ಮಾಡಿದರು ಸಮರ್ಥನೆ ಅದು ಸರಿಯಲ್ಲ. ಅವರು ಅಂತಹ ಕೃತ್ಯ ಮಾಡಿದ್ದಾರೆಂದು ಸಾಬೀತಾದರೆ ತಕ್ಕ ಶಿಕ್ಷೆ ಆಗಲೇಬೇಕು.


ದಿಲ್ಲಿ ಸ್ಫೋಟ ಪ್ರಕರಣದಲ್ಲಿ, ಗಾಯಗೊಂಡು ರಾಮ ಮನೋಹರ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ನೋಡಲೆಂದು ರಾಹುಲ್ ಗಾಂಧಿ ಮಧ್ಯಾಹ್ನ ಅಲ್ಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಡೀ ರಾಹುಲ್ ಗಾಂಧಿ ವಿರೋಧಿ ಘೋಷಣೆಗಳು, ಕಾಂಗ್ರೆಸ್ ವಿರೋಧೀ ಕೂಗಾಟಗಳು ಮತ್ತು ಯುಪಿಎ ವಿರೋಧಿ ಘೋಷಣೆಗಳೇ ಕೇಳಿಬರತೊಡಗಿದ್ದವು. "ರಾಹುಲ್ ಗಾಂಧಿ ವಾಪಸ್ ಜಾವೋ" "ರಾಹುಲ್ ಗಾಂಧಿ ಹೇಡಿ" ಮುಂತಾದ ಘೋಷಣೆಗಳೊಂದಿಗೆ ಯುಪಿಎ ಡೌನ್‌ಡೌನ್, ಕಾಂಗ್ರೆಸ್ ಡೌನ್‌ಡೌನ್ ಎಂಬ ಘೋಷಣೆಗಳೂ ಕೇಳಿಬಂದಿದ್ದವು.




ಈ ರೀತಿ ನಡೆದುಕೊಳ್ಳಿ ಎಂದು ಬಿಜೆಪಿ ಯವರು ಅಥವ ಸಂಘಪರಿವಾದವರು ಸಂತ್ರಸ್ತರಿಗೆ ಮಾರ್ಗ ದರ್ಶನ ಕೊಟ್ಟಿದ್ದರೆ? ಅದು ಅವರು ಅನುಭವಿಸಿದ ಕಷ್ಟ ನಷ್ಟ ನೋವುಗಳ ಆಕ್ರೋಶ ಅವರನ್ನು ಆ ರೀತಿ ನಡೆಸಿತ್ತು. ಈಗ ಅಧಿಕಾರ ಯಾರ ಕೈಯಲ್ಲಿ ಇದೆಯೊ ಅವರನ್ನೆ ಗುರಿ ಮಾಡುತ್ತಾರೆ ವಿನಹ ವಿರೋಧ ಪಕ್ಷದವರನ್ನು ಗುರಿ ಮಾಡಿ ಟೀಕೆ ಮಾಡುವುದಿಲ್ಲ. ಇಂದಿಗೂ ಮಾಜಿ ಪ್ರಧಾನಮಂತ್ರಿ ದಿ.ಇಂದಿರಗಾಂಧಿಯವರನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳುವುದು ದೇಶದ ಒಳಿತಿಗಾಗಿ ಅವರು ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದ. ಅಂತಹ ಗಂಡೆದೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಇಂದಿನವರು ಆಪೇಕ್ಷಿಸುತಿದ್ದಾರೆ ವಿನಹ ಬೇರೇನು ಅಲ್ಲ.


ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ಬಗ್ಗೆ ಮಾತಾಡ್ತಾಯಿರ್ತೀರಲ್ಲ. ಅವರಿಗೂ ಅಷ್ಟೆ, ಪದೇ ಪದೇ ನಡೆದು ಹೋದ ಭಯೋತ್ಪಾದಕ ಕೃತ್ಯಗಳ ಬಗ್ಗೆ ರೋಸಿ ಹೋಗಿ ಕೈಗೊಂಡ ಸ್ವಯಂ ನಿರ್ಧಾರವೇ ಹೊರತು ಯಾವುದೇ ಪಕ್ಷ ಅಥವ ಸಂಘಟನೆ ಈ ರೀತಿ ಮಾಡಿ ಎಂದು ಅವರಿಗೆ ಮಾರ್ಗದರ್ಶನ ನೀಡಿರಲಿಲ್ಲ.


ಪ್ರತಿಯೊಬ್ಬ ಪ್ರಜೆ ತನ್ನ ಮನೆಯ ಪಕ್ಕದ ಅಥವ ಗಲ್ಲಿಯಲ್ಲಿರುವ ಯಾವುದೇ ಧರ್ಮ ಹಾಗೂ ಯಾವುದೇ ಜಾತಿಯ ಜನರನ್ನು ಸ್ನೇಹಿತರಂತೆ ಕಾಣುತ್ತಾನೆ ಹೊರತು ವೈರಿಯಂತೆ ಕಾಣುವುದಿಲ್ಲ.  ಎಲ್ಲರಿಗೂ ಬೇಕಾಗಿರುವುದು ಶಾಂತಿ ನೆಮ್ಮದಿ ಮತ್ತು ದೇಶದ ಪ್ರಜೆಗಳ ರಕ್ಷಣೆ ಹೊರತು ಬೇರೇನಲ್ಲ. ಆದರೆ ಇಂತಹ ಸೌಹಾರ್ದ ಸಂಭಂದಕ್ಕೆ ಧಕ್ಕೆ ತರುವುದು ನಿಮ್ಮಂತ ಎಡಬಿಡಂಗಿ, ಲದ್ದಿಜೀವಿಗಳ ಪ್ರಭಾವಳಿ ಗಳೇ ಕಾರಣ.


ಕನ್ನಡಪ್ರಭ ದಿ. 08.09.2011 ರಲ್ಲಿ ಪ್ರಕಟವಾದ ಒಂದು ವರದಿ. 



ಸೋಮವಾರ, ಸೆಪ್ಟೆಂಬರ್ 5, 2011

ರೆಡ್ಡಿಯ ಸಹವಾಸ ದೇವೇಗೌಡ ದೂರಾಲೋಚನೆ



ದೇವೇಗೌಡರೇ ಹೀಗೆ ಯಾವತ್ತೂ ಮುಂದಿನ ಪರಿಣಾಮಗಳನ್ನು ಗುರುತಿಸಿಯೇ ಹೆಜ್ಜೆಯನ್ನಿಡುವವರು ಎಂಬುದು ಈಗ ಮತ್ತೂಮ್ಮೆ ಸಾಬೀತಾಗಿ


Udayavani | Sep 05, 2011
ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೇ ಹೀಗೆ ಯಾವತ್ತೂ ಮುಂದಿನ ಪರಿಣಾಮಗಳನ್ನು ಗುರುತಿಸಿಯೇ ಹೆಜ್ಜೆಯನ್ನಿಡುವವರು ಎಂಬುದು ಈಗ ಮತ್ತೂಮ್ಮೆ ಸಾಬೀತಾಗಿದೆ.

ಇದೀಗ ಸಿಬಿಐ ವಶದಲ್ಲಿರುವ ರೆಡ್ಡಿಯ ಸಹವಾಸಕ್ಕೆ ಮುಂದಾಗಿದ್ದ ತಮ್ಮ ಪುತ್ರ ಎಚ್‌.ಡಿ. ಕುಮಾರಸ್ವಾಮಿಯನ್ನು ದೇವೇಗೌಡರು ತಡೆದಿದ್ದರ ಹಿಂದೆ ಅವರ ಎಂದಿನ ದೂರಾಲೋಚನೆ ಕೆಲಸ ಮಾಡಿತ್ತು. ರೆಡ್ಡಿಗಳ ಜತೆ ಸೇರಿದರೆ ಪಕ್ಷದ ಮತ್ತು ವೈಯಕ್ತಿಕವಾಗಿ ತಮ್ಮ ಕುಟುಂಬದ ಮಾನ ಮರ್ಯಾದೆ ಎಲ್ಲಿಗೆ ಬಂದು ಮುಟ್ಟುತ್ತದೆ ಎಂಬುದು ಅವರಿಗೆ ಗೊತ್ತಿತ್ತು.

ರೆಡ್ಡಿ ಬಳಗದ ಹರಕೆಯ ಕುರಿಯಾಗಿರುವ ಬಿ. ಶ್ರೀರಾಮುಲು ಮೂಲಕ ರೆಡ್ಡಿ ಸಹೋದರರ ಹತ್ತಿರಕ್ಕೆ ಹೋಗಲು ಕುಮಾರಸ್ವಾಮಿ ಕಾರ್ಯತಂತ್ರ ರೂಪಿಸಿಕೊಂಡಿದ್ದರು. ರೆಡ್ಡಿಗಳ ಪರಮಾಪ್ತ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದ ಜಗನ್‌ ಮೋಹನ್‌ ರೆಡ್ಡಿ ಅವರನ್ನು ಸಹ ಕುಮಾರಸ್ವಾಮಿ ಇತ್ತೀಚಿಗೆ ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದರು. ಆದರೆ ಕುಮಾರಸ್ವಾಮಿ ಈ ಭೇಟಿಯನ್ನು ನಿರಾಕರಿಸಿದ್ದರು.

ಬಿಜೆಪಿಯನ್ನು ಮುರಿಯಬೇಕೆಂಬ ಏಕೈಕ ಉದ್ದೇಶದಿಂದಲೇ ಕುಮಾರಸ್ವಾಮಿ ರೆಡ್ಡಿಗಳ ಸಹವಾಸಕ್ಕೆ ಮುಂದಾಗಿದ್ದರು. ಆದರೆ ಕುಮಾರಸ್ವಾಮಿಯ ಈ ವರ್ತನೆ ದೇವೇಗೌಡರಿಗೆ ಸುತಾರಂ ಇಷ್ಟವಿರಲಿಲ್ಲ. ಆದ್ದರಿಂದಲೇ ಅವರು ಬಿ. ಶ್ರೀರಾಮುಲು ಪಕ್ಷ ಸೇರ್ಪಡೆಗೂ ವಿರೋಧ ವ್ಯಕ್ತಪಡಿಸಿದ್ದರು.

ಯಾವುದೇ ಹೆಜ್ಜೆಯನ್ನಿಟ್ಟರು ಅದರಿಂದ ಎದುರಾಗುವ ಸಾಧಕ-ಬಾಧಕಗಳು, ತೊಂದರೆಯಾದರೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಮೊದಲೇ ಆಲೋಚನೆ ಮಾಡಿ ಇಡುವ ಅಪರೂಪದ ರಾಜಕಾರಣಿ ದೇವೇಗೌಡ. ಈ ಪ್ರಕರಣದಲ್ಲಿಯೂ ದೇವೇಗೌಡರು ಇದೇ ರೀತಿಯಲ್ಲಿ ವರ್ತಿಸಿದ್ದರು. ಶ್ರೀರಾಮುಲು ಪರಿಶಿಷ್ಟ ಪಂಗಡದ ನಾಯಕನಾಗಿದ್ದು, ಆತನನ್ನು ರೆಡ್ಡಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಗೌಡರಲ್ಲಿದೆ. ಆದರೆ ಆತ ಸೇರಿದಂತೆ ರೆಡ್ಡಿ ಬಳಗದ ಯಾವೊಬ್ಬ ನಾಯಕನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸುತಾರಾಂ ಸಿದ್ಧರಿರಲಿಲ್ಲ. ಬ್ಲಾಕ್‌ ಮೇಲ್‌ ಮಾಡುವವರನ್ನು ಬಗಲಿನಲ್ಲಿ ಕಟ್ಟಿಕೊಂಡಂತೆ ಎಂದೇ ಹೇಳಿದ್ದರು.

ಅಕ್ರಮ ಗಣಿಗಾರಿಕೆ ವಿಷಯವನ್ನು ಆಂಧ್ರಪ್ರದೇಶ ಸರ್ಕಾರ 2009ರಲ್ಲಿಯೇ ಸಿಬಿಐಗೆ ವಹಿಸಿದ್ದರಿಂದ ಇಂದಲ್ಲ ನಾಳೆ ರೆಡ್ಡಿಗಳು ಬಂಧನಕ್ಕೆ ಒಳಗಾಗುತ್ತಾರೆ ಎಂಬುದು ಗೌಡರಿಗೆ ತಿಳಿದಿತ್ತು. ಆದ್ದರಿಂದಲೇ ಆದಷ್ಟು ತಮ್ಮ ಪುತ್ರನನ್ನು ಈ ವಿಷಯದಲ್ಲಿ ಹೆಚ್ಚು ಮುಂದುವರೆಯದಂತೆ ತಡೆದರೆಂದು ಪಕ್ಷದ ಮೂಲಗಳು ಸ್ಪಷ್ಟಪಡಿಸುತ್ತವೆ.

ಆದ್ದರಿಂದಲೇ ಕುಮಾರಸ್ವಾಮಿ ಮೊದಲಿಗೆ ಶ್ರೀರಾಮುಲು ರಾಜೀನಾಮೆ ನೀಡಿದಾಗ ಅವರ ಪರವಾಗಿ ಹೇಳಿಕೆ ನೀಡಿದ್ದರಾದರೂ, ಈಗ ತಾವು ರೆಡ್ಡಿಗಳ ಸಹವಾಸಕ್ಕೆ ಹೋಗುವ ಪ್ರಯತ್ನ ಮಾಡಿದ್ದಾಗಿ ಬರುತ್ತಿರುವ ಸುದ್ದಿಗಳೆಲ್ಲ ಕೇವಲ ವದಂತಿಗಳೆಂದು ಅಲ್ಲಗಳೆಯುತ್ತಿದ್ದಾರೆ.

ದೇವೇಗೌಡರು ರೆಡ್ಡಿಗಳನ್ನು ಬಲವಾಗಿ ವಿರೋಧಿಸಲು ಕಾರಣಗಳು ಇದ್ದೇ ಇವೆ. ಮೊದಲನೇಯದು 150 ಕೋಟಿ ರೂ.ಗಳ ಗಣಿಕಪ್ಪದ ಆರೋಪವಾದರೆ, ದೇವೇಗೌಡರನ್ನು ವೈಯಕ್ತಿಕವಾಗಿ ರೆಡ್ಡಿಗಳು ಕೆಣಕಿದ್ದು ಮತ್ತೂಂದು ಕಾರಣವಾಗಿದೆ. ಗೌಡರ ಕುಟುಂಬದ ಸದಸ್ಯರ ವಿರುದ್ಧ ರೆಡ್ಡಿ ಟೀಕಾರೋಪವನ್ನು ಮಾಡಿದ್ದರು.

ಇದೆಲ್ಲದರಿಂದ ಕೆಂಡಾಮಂಡಲರಾಗಿದ್ದ ದೇವೇಗೌಡರು ಸಹ ರೆಡ್ಡಿಗಳ ಅಕ್ರಮ ಗಣಿಗಾರಿಕೆಯ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದರು. ರೆಡ್ಡಿಗಳ ಗಣಿ ಕಂಪೆನಿಯ ನೌಕರ ಆಂಜನೇಯಲುವನ್ನು ಹೊರ ಹಾಕಿದಾಗ ಆತನ ಕುಟುಂಬಕ್ಕೆ ಸಾಕಷ್ಟು ನೆರವಾಗುವ ಮೂಲಕ ಮಾಹಿತಿ ಸಂಗ್ರಹಣೆಗೆ ಬಳಸಿಕೊಂಡಿದ್ದರು. ರೆಡ್ಡಿಗಳ ಬಗ್ಗೆ ಸದಾ ಕುದಿಯುತ್ತಲೇ ಇದ್ದ ಗೌಡರು. ಆದ್ದರಿಂದಲೇ ರೆಡ್ಡಿ ಪಾಳಯದ ಯಾರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ತಮ್ಮ ಪುತ್ರನಿಗೂ ಬುದ್ದಿ ಹೇಳಿ ರೆಡ್ಡಿ ಮತ್ತು ಶ್ರೀರಾಮುಲು ಸಹವಾಸ ಬೇಡವೆಂದು ನಿಲ್ಲಿಸಿದ್ದರು.

ಭಾನುವಾರ, ಸೆಪ್ಟೆಂಬರ್ 4, 2011

ಶ್ರೀ ರಾಮುಲು ಮುಂದಿನ ಮುಖ್ಯಮಂತ್ರಿ!

ಕೆಲ ದಿನಗಳ ಹಿಂದೆ ಇದ್ದ ಉಹಾ ಪೋಹಗಳಿಗೆ ಈಗ ಒಂದೊಂದಾಗಿ ತೆರೆಬಿಳ್ತಾಯಿದೆ. ಗಣಿಧಣಿಗಳು ಹೊಸಪಕ್ಷ ಕಟ್ತಾರೆ, ಇಲ್ಲವೇ ಜೆಡಿಎಸ್ ಅನ್ನು ಸೇರಬಹುದು ಎಂದು ಪತ್ರಿಕೆಗಳು ವರದಿಯನ್ನು ಪ್ರಕಟಿಸಿದ್ದವು. ಅದಕ್ಕೆ ಆಟದ ಮೊದಲ ದಾಳವಾಗಿ ಶ್ರೀರಾಮುಲು ರಾಜೀನಾಮೆ ಕೊಟ್ಟಿದ್ದಾರೆ.  ಇನ್ನು ಮುಂದೆ ಏನಾಗುತ್ತೆ ಅಂತ ರಾಜ್ಯದ ಜನರೆ ಕುತೂಹಲದಿಂದ ಕಾಯುವಂತಾಗಿದೆ ಅನ್ನುವ ಹಾಗಿಲ್ಲ. ಮತ್ತೆ ನಮ್ಮ ನಾಡಿಗೆ ಕೆಟ್ಟ ಹೆಸರು ಬರುವಂತಾಯಿತಲ್ಲ ಎಂಬ ಬೇಸರ ವಾಗುತ್ತಿದೆ. ಕರ್ ನಾಟಕ್ ಎಂದು ರಾಷ್ಟ್ರೀಯ ಮಾಧ್ಯಮಗಳು ಮತ್ತೊಮ್ಮೆ ಮೂದಲಿಸಲು ಅವಕಾಶವಾಯಿತು. ಕೆಲವರು ಮತ್ತೆ ರಾಜಕೀಯದ ಆಟ ಶುರು ಮಾಡಿದ್ದಾರೆ. ಬಿಜೆಪಿ ಸರ್ಕಾರವನ್ನು ಬೀಳಿಸಬೇಕು ಅಂತ ಸಾಧ್ಯವಾದಾಗಲೆಲ್ಲ ಬಹಳ ಪ್ರಯತ್ನ ಪಟ್ಟು ಯಶಸ್ವಿಯಾಗದೆ ಸುಮ್ಮನಾಗಿದ್ದವರು ಮತ್ತೆ ಒಂದು ಹೊಸ ಆಟ ಆಡಿಸಲು ಶುರು ಮಾಡಿದ್ದಾರೆ

ಶ್ರೀರಾಮುಲು ರಾಜಿನಾಮೆ ಹಿಂದೆ ಬಹಳಷ್ಟು ರಾಜಕೀಯ ಮೇಲಾಟ ಗಳು ನಡೆದಿವೆ. ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆ ಎಂದು ಕೆಲ ರಾಜಕೀಯ ಮುಖಂಡರುಗಳು ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ಕೊಟ್ಟ ಬೆನ್ನಲ್ಲೆ, ಬಸವನಗೌಡ ಪಾಟೀಲ್ ಯತ್ನಾಳ್ ಶ್ರೀ ರಾಮುಲು ಜೆಡಿಎಸ್ ಸೇರುವುದು ಸೂಕ್ತ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದಾರೆ. ಅವರು ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಸುಮ್ಮನೆ ಇಂತಹ ಹೇಳಿಕೆ ಗಳು ಹೊರಬರುವುದಿಲ್ಲ. ಆ ಹೇಳಿಕೆ ಯನ್ನು ಅವರ ಬಾಯಲ್ಲಿ ಹೇಳಿಸಿರಲೂಬಹುದು.
ಕೆಲ ರಾಜಕೀಯ ಮುಖಂಡರು ಅಂದುಕೊಂಡಂತೆ ನಡೆದರೆ, ಕೊಪ್ಪಳ ಉಪಚುನಾವಣೆ ಇದಕ್ಕೊಂದು ನೆಪ ಮಾತ್ರ. ಸ್ವತಂತ್ರ ಅಭ್ಯರ್ಥಿ ಯಾಗಿ ನಿಲ್ಲಿಸಿ ಪರೋಕ್ಷವಾಗಿ ಜೆಡಿಎಸ್ ಬೆಂಬಲ ಕೊಟ್ಟು ಶ್ರೀರಾಮುಲು ರವರನ್ನು ಜಯಗಳಿಸುವಂತೆ ಮಾಡುವುದು ಮೊದಲ ದಾಳ. ತದನಂತರ, ಕೆಲ ಬಿಜೆಪಿ ಶಾಸಕರು, ಜೆಡಿಎಸ್ ನ ಎಲ್ಲ ಶಾಸಕರು ಮತ್ತು ಕಾಂಗ್ರೆಸ್ಸಿನ ಕೆಲ ಶಾಸಕರನ್ನು ಸೇರಿಸಿಕೊಂಡು ಒಕ್ಕೂಟದ ಮಾದರಿಯಲ್ಲಿ ಸರ್ಕಾರ ರಚನೆ ಮಾಡಬೇಕು ಎನ್ನುವುದು ಅವರ ಯೋಜನೆ. ಹೈಕಮಾಂಡ್ ನ ಅವಕೃಪೆ ಗೆ ಒಳಗಾಗಿರುವ ರೆಡ್ಡಿ ಸಹೋದರರಿಗೆ ಪರೋಕ್ಷವಾಗಿ ಬೆಂಬಲ ಕೊಟ್ಟು ಅಥವ ಪಡೆದು ಸರ್ಕಾರ ರಚನೆ ಮಾಡಿ ಲೋಕಾಯುಕ್ತ ವರದಿಯನ್ನು ಮೂಲೆ ಗುಂಪು ಮಾಡಿದರೆ ರೆಡ್ಡಿ ಸಹೋದರರನ್ನು ಸಮಾಧಾನ ಮಾಡಿದಂತಾಗುತ್ತದೆ ಮತ್ತು ಅಧಿಕಾರನೂ ಸಹ ಸಿಗುತ್ತೆ ಎನ್ನುವುದು ಮಾಸ್ಟರ್ ಪ್ಲಾನ್.
ಲೋಕಾಯುಕ್ತ ವರದಿ, ಅನೇಕ ಭೂ ಹಗರಣ ಮತ್ತು ಭ್ರಷ್ಟಾಚಾರದಿಂದ ಜರ್ಜರಿತವಾಗಿರುವ ಈ ಸಮಯದಲ್ಲಿ ಬಿಜೆಪಿಯನ್ನು ಒಡೆದರೆ ಮತ್ತೆ ಮುಂದೆ ಬಿಜೆಪಿ ಅಧಿಕಾರಕ್ಕೆ ಬರದ ಹಾಗೆ ಮಾಡಬಹುದು ಅನ್ನುವುದು ಸಹ ಲೆಕ್ಕಾಚಾರ.
ಶ್ರೀ ರಾಮುಲು ಮುಖ್ಯಮಂತ್ರಿ ಅಭ್ಯರ್ಥಿ ಯಾಕೆಂದರೆ, ಇದರ ಹಿಂದಿದೆ ಜಾತಿ ಲೆಕ್ಕಾಚಾರ, ಹಿಂದುಳಿದವರ್ಗಗಳ ಬೆಂಬಲ, ಬಳ್ಳಾರಿ ಸುತ್ತಮುತ್ತಲೂ ಅವರಿಗೆ ಇರುವ ಇಮೇಜ್ ಮತ್ತು ರೆಡ್ಡಿಗಳ ಬೆಂಬಲ. ಹಿಂದೆ ರೆಡ್ಡಿಗಳು ಶ್ರೀ ರಾಮುಲು ಮುಖ್ಯಮಂತ್ರಿ ಗಾದಿಗೆ ಸೂಕ್ತ ಅಭ್ಯರ್ಥಿ ಎಂದು ಘೋಷಿಸಿದ್ದರು, ಈಗ ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದಾರೆ. ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನ ಕೊಡಲಿಲ್ಲ ಎಂದು ಬೇಸರಗೊಂಡು ಕೆಲದಿನಗಳ ಹಿಂದೆ ೧೬ ಜನ ಶಾಸಕರು ಇಂಡೋನೇಶಿಯಾ ಪ್ರವಾಸ ಮತ್ತು ಗೋವಾ ಪ್ರವಾಸ ಕೈಗೊಂಡಿದ್ದರು. ಅವರ ಮೂಲ ಉದ್ದೇಶ ಮೊದಲಿನ ಹಾಗೆ ಸರ್ಕಾರದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಬೇಕು ಅಂತ. ಆದರೆ ಹೈಕಮಾಂಡ್ ಮತ್ತು ಸಂಘ ಪರಿವಾರ ಇವರ ಬೇಡಿಕೆಗೆ ಸೊಪ್ಪು ಹಾಕಲಿಲ್ಲವೋ,
ಈ ಸಮಯವನ್ನು ಉಪಯೋಗಿಸಿಕೊಂಡು ಕೆಲ ಪಕ್ಷದ ಮುಖಂಡರು ತಮ್ಮ ಬೇಳೆ ಬೇಯಿಸಲು ಹೊರಟಿದ್ದಾರೆ. ಕೆಲವರ ಸ್ವಪ್ರತಿಷ್ಟೆಗೋಸ್ಕರ ರಾಜ್ಯದ ಮರ್ಯಾದೆಯನ್ನು ಹಾಳು ಮಾಡುತಿದ್ದಾರಲ್ಲ ಇವರಿಗೆ ಏನನ್ನಬೇಕು? ಹೊರರಾಜ್ಯದವರ ಮುಂದೆ ಮತ್ತೆ ಮತ್ತೆ ಅವಮಾನವನ್ನು ಅನುಭವಿಸುವಂತಾಯಿತಲ್ಲ ಅಂತ ಬೇಸರವಾಗುತ್ತಿದೆ.
ಕೊನೆ ಕುಟುಕು: ಸಚಿವ ಸ್ಥಾನ ಪಡೆಯಲು ಒತ್ತಡ ತಂತ್ರ ಅನುಸರಿಸುತ್ತಿರುವ ಮಾಜಿ ಸಚಿವ ಶ್ರೀರಾಮುಲು, ಜನತೆಗೆ ದಿಕ್ಕು ತಪ್ಪಿಸುವ ತಂತ್ರ ಹೂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ. ಈಗ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಅವರಿಗೆ ಗೊತ್ತಿಲ್ಲದ್ದೇನು ಅಲ್ಲ, ಅಂತಹದಕ್ಕೆ ಅವಕಾಶ ಕೊಡಬಾರದು ಎಂದು ಎಲ್ಲರಿಗಿಂತ ಮೊದಲೇ ಕುಟುಕಿದ್ದಾರೆ. ರಾಜಕೀಯದಲ್ಲಿ ಯಾರೂ ಶ್ವಾಶ್ವತ ಶತ್ರುಗಳು ಅಲ್ಲ ಮತ್ತು ಮಿತ್ರರೂ ಅಲ್ಲ. ನೋಡ್ತಾಯಿರೋಣ ಏನಾಗುತ್ತೆ ಅಂತ. 

ಪ್ರತಿಕ್ರಿಯೆಗಳು - ಭ್ರಷ್ಟ ಪತ್ರಕರ್ತರ ನೈತಿಕತೆ

ಈ ಲೇಖನವನ್ನು ನಾನು ಒಬ್ಬ ಓದುಗ ಮಿತ್ರರ ಸಹಾಯದಿಂದ ಗಲ್ಫ್ ಕನ್ನಡಿಗ ವೆಬ್ ಸೈಟ್ ಗೆ ಕಳುಹಿಸಿದ್ದೆ. ಸಂಪಾದಕರಾದ ಬಿ.ಜಿ.ಮೋಹನ್ ದಾಸ್ ಲೇಖನವನ್ನು ಸ್ವೀಕರಿಸಿದ ತಕ್ಷಣ ಪ್ರಕಟಿಸಿದರು. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗು ಸಹಕರಿಸಿದ ಮಿತ್ರರಿಗೂ ವಂದನೆಗಳು.
ಇನ್ನೂ ಕೆಲ ಓದುಗ ಮಿತ್ರರು ಈ ಲೇಖನವನ್ನು ಎಲ್ಲ ಪತ್ರಿಕಾ ಸಂಪಾದಕರಿಗೂ ರವಾನಿಸಿ ಅವರ ಅಭಿಪ್ರಾಯ ಹೇಳುವಂತೆ ದುಂಬಾಲು ಬಿದ್ದಿದ್ದರು. ಮತ್ತೆ ಕೆಲವರು ಕೆಲ ಪತ್ರಕರ್ತರ ಫೇಸ್ ಬುಕ್ಕಿನ ವಾಲ್ ಗೆ ಲಿಂಕ್ ಹಾಕಿ ಅವರ ಗಮನಸೆಳೆದಿದ್ದರು.

ಪತ್ರಕರ್ತರನ್ನು  ಭ್ರಷ್ಟ ರಾಜಕಾರಣಿಗಳ ಹಾಗು ಭ್ರಷ್ಟ ಸರ್ಕಾರಿ ನೌಕರರ ಹಾಗೆ  ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ.
ಗಮನ ಸೆಳೆದ ಕೆಲ ಪ್ರತಿಕ್ರಿಯೆಗಳು, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಪ್ರತಿಸ್ಪಂದನ
vaijanath hiremath, yadgir, karnataka
2011-08-31
ಎಲ್ಲ ಕ್ಷೇತ್ರದಲ್ಲಿರುವಂತೆ ಮಾಧ್ಯಮದಲ್ಲಿಯೂ ಬ್ರಷ್ಟರಿದ್ದಾರೆ ಹಾಗಂತ ಎಲ್ಲ ಪತ್ರಕರ್ತರಿಗೂ ಅದು ಅನ್ವಯವಾಗದು. ಹಾಂ ಕೆಲವರು ಹೇಳಿದಂತೆ ನಮ್ ರಾಜ್ಯದ ದರಲ್ಲೂ ಇದೇ ವಿಸ್ವೆಸ್ವರಬಟ್ಟ ಮತ್ತು ರವಿ ಬೆಳಗ್ಗೆರೆ ಇಬ್ಬರು ಜತೆಗೆ ಡೆಕ್ಕನ್ ಕ್ರಾನಿಕಲ್ ಎಂಬ ಆಂದ್ರದ ಪೇಪರ್, ಜನಶ್ರೀಯ ಮುಖಿಯಾ ಸಂಜಯ್ ಬೆಟಗೇರಿ ಸೇರಿದಂತೆ ಬಹುತೇಕ ಕೆಲ ಭಟ್ಟಂಗಿಗಳು ಸೆ'ಗಣಿ'ಧಣಿಗಳಿಂದ ತಿಂದಿದ್ದಾರೆ. ಅಲ್ಲದೇ ಒಬ್ಬ ಬಹಿರಂಗವಾಗಿಯೇ ಬಿಜೆಪಿ ಬೆಂಬಲಿಸಿದರೆ ಇನ್ನೊಬ್ಬ ಈಗಾಗಲೇ ಒಂದು ಕಡೆಯಿಂದ ಇನ್ನೊಬ್ಬ ಕೇರಳ ಮೂಲದ ರಾಜೀವ ಚಂದ್ರುಶೇಕರ ೆನ್ನವ 'ಎಂಪ್ಟಿ'ಯ ಾಶ್ರಯಕ್ಕೆ ಹೋಗಿಯಾಗಿದೆ.ಅಲ್ಲಿ ೇನೇನು ಮಾಡ್ತಿವಿ ನೋಡ್ತಿರಿ ಅಂತ ಹೇಳುತ್ತಲೇ ಕನ್ನಡಪ್ರಭದಲ್ಲಿ ಇಸ್ಪೀಟ್ ಎಲೆಯನ್ನಾಗಿಸಿ ಮಾಡಿ ರಾಡಿ ಎಬ್ಬಿಸಿ 'ಗಣಿ ಕಪ್ಪೆ'ತಿಂದು ಇನ್ನು ಫಾರೆನ್ ಗೆ ಸ್ಟಡಿಗೆ ಯಾವಾಗ ಹೋಗ್ತಾನೋ ರಾಜೀವ ಯಾವಾಗ ಿವರನ್ನ ಸ್ಟಡಿಗೆ ಕಳಿಸ್ತಾನೋ ಇಲ್ಲವೊ ಕಾದು ನೋಡಬೇಕಿದೆ.
ಇಷ್ಟೆಲ್ಲ ಂದರೂ ಒಂದೆ ಒಂದು ಸ್ಪಷ್ಟನೆಯನ್ನೂ ನೀಡದ ಪತ್ರಕರ್ತರು ನಿಜಕ್ಕೂ ಿನ್ನುಳಿದ ಪತ್ರಕರ್ತರ ಮಾನಹರಾಜು ಹಾಕೋದಂತ ನಿರ್ಧರಿಸಿದಂತಿದೆ. ಛೇ. ಛೀ. ಥೂ..
suresh B V , Gulbarga
2011-08-31
corrupt reporter should be punished. he is not an exception
ರಾಜುವಿನಯ್, ಮೈಸೂರು
2011-08-29
ಛೀ.... ಅನ್ನಿಸುತ್ತೆ. ನಾವು ಆರಾಧಿಸುತ್ತಿದ್ದ ಕೆಲವು ಪತ್ರಕರ್ತರು ಅವರನ್ನೇ ಆದರ್ಶವಾಗಿ ಇಟ್ಟುಕೊಂಡಿದ್ದ ನಮ್ಮಂತಹವರಿಗೆ ನಾಚಿಕೆ ಯಾಗುತ್ತೆ. ಇವರುಗಳು ತಮ್ಮ ನೈತಿಕತೆಯ ಬಗ್ಗೆ ಅರಿತು ನಂತರ ಪತ್ರಕರ್ತರಾಗಲೀ, ಇವರಿಗೆ ದೇಶದ ಬಗ್ಗೆ ಕಾಳಜಿ ಬೇಡ, ತಮ್ಮ ತಮ್ಮ ಆಸ್ತಿಯ ಬಗ್ಗೆ ತಿನ್ನೋಕೆ ಬೇಕಾಗಿರುವುದು ದಿನಕ್ಕೆ ಕಾಲು ಕೇಜಿ ಅನ್ನ. ಅದಕ್ಕೆ ಯಾಕಿಷ್ಟು ವಾಮಮಾರ್ಗಗಳು.ದೇಶಕ್ಕಾಗಿ ಏನಾದರೂ ಮಾಡ್ರಿ, ಈ ರಾಜ್ಯ ನಿಮಗೆ ಬೇಕಾದಷ್ಟನ್ನು ಕೊಟ್ಟಿದೆ. ನೀವು ಏನೂ ಕೊಟ್ಟಿದ್ದೀರಿ. ನಿಮಗೆ ಬೇಕಾದುದನ್ನು ನೀವು ಸ್ವಾರ್ಥಕ್ಕೆ ಪಡೆದುಕೊಂಡಿರಿ. ನೀವು ಹೇಳಿದ್ದು, ಬರೆದದ್ದು, ತೋರಿಸಿದ್ದು ನಾವು ನಂಬಬೇಕು. (ಇದನ್ನು ಫೋನ್ ಮೂಲಕ ಕೇಳಿದಾಗ ನಿಮಗೆ ಇಷ್ಟವಿದ್ದರೆ ಓದಿ, ನೋಡಿ ಇಲ್ಲದಿದ್ದರೆ ಬಿಡಿ ಅನ್ನೋ ಮಾತುಗಳನ್ನು ಕೇಳಿಸಿಕೊಳ್ಳುವಂತಹ ಸಮಯವೂ ಇತ್ತು) ಈಗಲಾದರೂ ಪ್ರಾಮಾಣಿಕತೆ ತೋರಿಸಿ, ನಿಮ್ಮನ್ನು ನಾವು ಜನ ನಂಬಿದ್ದೇವೆ. ನೈತಿಕತೆ ತೋರಿಸಿ, ಮೌಲ್ಯಗಳಿಗೆ ಬೆಲೆ ಕೊಡಿ.
Ashwini Dasare, Dharwad
2011-08-28
2G ಹಗರಣದಿಂದ ಗಣಿ ಹಗರಣದವರೆಗೂ ನಮ್ಮ ಮಾಧ್ಯಮಗಳ ಮತ್ತು ಪತ್ರಕರ್ತರ ಕೊಡುಗೆ ಅಪಾರವಾದದ್ದು!. ಆಚಾರ ಹೇಳಿ ಬದನೆಕಾಯಿ ತಿನ್ನು ಎನ್ನುವ ಗಾದೆಯಂತೆ ಬಹುತೇಕ ಪತ್ರಕರ್ತರೂ ತಮ್ಮ ಹೊಟ್ಟೆ ಪಾಡಿಗಾಗಿ ಜನರ ವಿಶ್ವಾಸ ಮತ್ತು ಅಭಿಮಾನವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜವಾಗಲು ವಿಷಾದದ ಸಂಗತಿ. ಇಷ್ಟಾಗಿಯೂ ನಮಗೇನು ಆಗೇ ಇಲ್ಲವೆಂಬಂತೆ ವರ್ತಿಸುತ್ತಿರುವ ಇವರನ್ನು TV ಪರದೆಯ ಮೇಲೆ ನೋಡಲು ಅಸಹ್ಯವಾಗುತ್ತಿದೆ. ತಮ್ಮ ಹಸ್ತವೆ ಶುದ್ಧ ಇಟ್ಟುಕೊಳ್ಳಲು ಆಗದ ಈ ಮಹಾನುಭಾವರು ಗಂಟೆಗಟ್ಟಲೆ ಅಣ್ಣಾ ಹಜಾರೆ ಅವರ ಬಗ್ಗೆ ಮಾತನಾಡಲು, ಮತ್ತು ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಾಚಿಕೆ ಯಾಗುವದಿಲ್ಲವೇ?. ತಮ್ಮ ಬುಡದಲ್ಲೇ ಬ್ರಹ್ಮಾಂಡ ಬ್ರಷ್ಟತೆಯನ್ನು ಇಟ್ಟುಕೊಂಡು ಬೇರೆಯವರ ನೈತಿಕತೆ ಮಾತನಾಡುವ ಇಂಥ ಕ್ರಿಮಿಗಳನ್ನು ಮಧ್ಯಮಗಳು ಮತ್ತು ಜನರು ಇನ್ನು ಮುಂದೆ ಯಾದರೂ ದೂರ ಇಡುವರೆ? ಕಾದು ನೋಡಬೇಕು. ಮತ್ತು ಇಂಥವರಿಗೆ ಕಟ್ಟಾ ಅಂಥ ರಾಜಕಾರಣಿಗಿಂತ ಘೋರ ಶಿಕ್ಷೆ ವಿಧಿಸಬೇಕು!
K S Rajaram, Tlaguppa - Shimoga
2011-08-28
It is most timely and eye opener, bEliyE eddu hola maidare hEge allave .. ee bageya ecchara indina yuvajanathege bEkE bEku.. baravaNige mundevarisiri namma sahakaara yaavaagaloo labhya.. k s rajaram
ವಿಜಯ್ ಬಾರಕೂರು, ಕತಾರ್
2011-08-28
ಇಂದಿನ ದಿನಗಳಲ್ಲಿ ಮುಖ್ಯವಾಗಿ ಚರ್ಚಿಸಬೇಕಾದ ಅಗತ್ಯದ ವಿಚಾರವನ್ನೇ ಕೈಗೆತ್ತಿಕೊಂಡು ಪ್ರಕಟಿಸಿದುದಕ್ಕೆ Thanks ಸಚಿನ್ ರವರೇ... ಇಂದು ಪತ್ರಿಕೆ ಓದುವುದೆಂದರೆ ಕೇವಲ ಮನರಂಜನೆಗಾಗಿಯೇನೋ ಎನಿಸಿದರೆ ಆಶ್ಚರ್ಯವಾಗದು. ಯಾಕೆಂದರೆ ನಿಜವಾದ ಸತ್ಯ ಸಂಗತಿಯ ಸುದ್ದಿ ಓದುಗರಿಗೆ ಪತ್ರಿಕೆಗಳ ಮೂಲಕ ಲಭಿಸುವುದು ಅಲ್ಲೋ ಇಲ್ಲೋ ಎಂಬಂತೆ ಅಪರೂಪಕ್ಕೆ ಮಾತ್ರ. ಇಂದಿನ ಯಾವುದೇ ಪತ್ರಿಕಾ ಗೋಷ್ಠಿಯಲ್ಲಿ (ನಾನು ಹಿಂದೆಯೂ ಕೆಲವೆಡೆ ಬರೆದಿರುವಂತೆ) ಪ್ರಕಟವಾಗಿಸಬೇಕಾಗಿರುವ ಸುದ್ದಿಯನ್ನೊಳಗೊಂಡ ಕವರ್ ನೊಂದಿಗೆ "ಇನ್ನೊಂದು ಕವರ್" ಕೂಡಾ ಇರುತ್ತದೆ. ಆ ಇನ್ನೊಂದು ಕವರ್ ನ ಭಾರ ಅದೆಷ್ಟಿಸಿರುತ್ತದೆ ಎಂಬುದನ್ನು ಅನುಸರಿಸಿ ಆ ಪತ್ರಿಕಾಗೋಷ್ಠಿಯಲ್ಲಿ ನಡೆದ ವಿಷಯ ಪ್ರಕಟವಾಗುತ್ತದೆ. ಇದು ಸತ್ಯವಿಷಯ. ಅಂದರೆ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಕರ್ತರು ಕೇವಲ ನಾಮಕಾವಸ್ತೆ ಮಾತ್ರ. ಪತ್ರಿಕೆಯಲ್ಲಿ ಏನು ಬರೆಯಬೇಕು ಎಂಬುದನ್ನು ಪತ್ರಿಕಾಗೋಷ್ಠಿ ಏರ್ಪಡಿಸಿರುವವರು ಮೊದಲೇ ನಿರ್ಧರಿಸಿ ಬರೆದು ಕವರಿನಲ್ಲಿ ಹಾಕಿ ಭದ್ರವಾಗಿ ಇಟ್ಟಿರುತ್ತಾರೆ. ಗೋಷ್ಟಿಯ ನಂತರ ಪತ್ರಕರ್ತರುಗಳಿಗೆ ಬಾರ್ ಊಟದೊಂದಿಗೆ ಗುಂಡು ಕಾಗೂ ವಿಶೇಷ ಕವರ್ ದೊರೆತರೆ ಸಾಕು. ಸುದ್ದಿ "ಕವರ್" ಆಗಿಬಿಡುತ್ತದೆ.ನಮಗೆ ತಿಳಿದಿರುವಂತೆ ಕೆಲವು ದೇಶಗಳಲ್ಲಿ ಯಾವುದೇ ಸುದ್ದಿಯನ್ನು ಪ್ರಕಟಿಸಬೇಕಾದರೆ ಏನು ಪ್ರಕಟಿಸಬೇಕು ಏನನ್ನು ಪ್ರಕಟಿಸಬಾರದುಬಾರದು ಎಂಬುದನ್ನು ಅಲ್ಲಿನ ಸರಕಾರವೇ ನಿರ್ಧರಿಸಿ ಸೆನ್ಸಾರ್ ಮಾಡಿದ ನಂತರ ಪತ್ರಿಕೆಗಳಿಗೆ ರಿಲೀಸ್ ಮಾಡುತ್ತದೆ. ಆದರೆ ನಮ್ಮ ದೇಶದಲ್ಲಿ ಪತ್ರಕರ್ತರುಗಳೇ... ಇನ್ನೊಂದರ್ಥದಲ್ಲಿ ಮಾಧ್ಯಮದ ದೊರೆಗಳು ಹಾಗೂ ಪತ್ರಕರ್ತರುಗಳು ತಮಗೆ ಸಿಗುವ ಸಂಭಾವನೆಯ ಆಧಾರದ ಮೇಲೆ ಸುದ್ದಿಯನ್ನು ಸೆನ್ಸಾರ್ ಮಾಡಿ ಪ್ರಕಟಿಸುತ್ತಾರೆ! ಭೇಷ್!
ನಿಜಹೇಳಬೇಕೆಂದರೆ, ಪತ್ರಿಕೆಯೆಂದರೆ ಅದು ಸಂಪೂರ್ಣ ಜನರ ಸ್ವತ್ತು. ಜನರ ನೋವುನಲಿವು ಗಳೆರಡರಲ್ಲೂ ಸಮಾನ ನೆಲೆಯಲ್ಲಿ ಸ್ಪಂಧಿಸಿ ಅವುಗಳಿಗೆ ನುಡಿಯ ರೂಪವನ್ನು ನೀಡುವ ಶುದ್ಧ ಜೀವನದ ಪ್ರತಿಬಿಂಬವಾಗಿ ಅದು ರೂಪಗೊಳ್ಳಬೇಕು. ಅದು ನಿರ್ಧಿಷ್ಟ, ನಿರ್ಧುಷ್ಟ ಮಾತ್ಸರ್ಯರಹಿತ, ನಿಷ್ಪಕ್ಷಪಾತ ಹಾಗೂ ಸ್ವತಂತ್ರವಾಗಿರಬೇಕು. ಸರಕಾರದ ಅಥವಾ ಇನ್ನಾವುದೇ ಶಕ್ತಿಗಳ ಅಂಕೆ ಅದಕ್ಕಿರಲೇ ಬಾರದು. ಇದು ನಿಜವಾದ ಪತ್ರಿಕಾ ಧರ್ಮ. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಪತ್ರಿಕೊಧ್ಯಮಗಳೊಂದಿಗೆ ಹಾಗೂ ಪತ್ರಿಕಾಕರ್ತರುಗಳನ್ನೂ ಭ್ರಷ್ಟಾಚಾರದ ಕುರಿತು ತೀಕ್ಷ್ಣವಾಗಿ ಬಿಸಿ ಎದ್ದಿರುವ ಜನಲೋಕಪಾಲನೆಯ ಮಸೂದೆಯಡಿಗೆ ಎಳೆದು ತರಬೇಕಾದ ಅವಶ್ಯಕತೆ ಖಂಡಿತಾಯಿದೆ ಅನಿಸುವುದಿಲ್ಲವೇ?
Manjunath Parashurampura Matad , Chitradurga
2011-08-28
ಖ೦ಡಿತ ಸತ್ಯ......ಹೆಚ್ಚು ಕಮ್ಮಿ ಇವರು ಹೇಳಿದ ಹಾಗೇ ಸರ್ಕಾರ ನೆಡಿಯುತ್ತಿದೆ ಅ೦ತ ತೊರಿಸುಕೊಳ್ಳುವ ಬುದ್ದಿ ಪತ್ರಕರ್ತರಲ್ಲಿ ಬ೦ದಿದೆ......ಕರ್ನಾಟಕ ಕ೦ಡ ಅತಿ ಭ್ರಷ್ಟ ಮುಖ್ಯಮ೦ತ್ರಿ , ಅ೦ತ ಇದು ವರೆಗೂ ಸಹ ಬಿ೦ಬಿಸುತ್ತಿರುವ ಮತ್ತು ಮಕ್ಕಳೇ ಸಿ.ಎ೦.ಗೆ ಪತ್ರ ಬರೆದಿದ್ದಾರೆ ಅ೦ತ ಪೇಪರ್ ಮಾರುವ೦ತಹ ಮ೦ದಿ ಅತಿಯಾಗಿದ್ದಾರೆ.....ಯಾರನ್ನೇ ಅತಿ ಭ್ರಷ್ಟ ಅನ್ನ್ನೊ ಮೊದಲು ಆ ಪತ್ರಿಕೆಯವರು ತಮ್ಮ ’ಅಡಿ’ ಮತ್ತು’ಮುಡಿ’ ನೋಡಿಕೊಳ್ಳೊದು ಒಳ್ಳೆದೇ ಅಲ್ಲವೇ....ಕರ್ನಾಟಕ ಕ೦ಡ ಅತಿ ಭ್ರಷ್ಟ ’ಸ೦ಪಾದಕ /ಪತ್ರಕರ್ತ ’ ಅನ್ನ್ನೊ ಅವಾರ್ಡಿಗೆ ಪತ್ರಿಕೋದ್ಯಮದಲ್ಲಿ ಪೈಪೋಟಿ ನೆಡಿತಾ ಇರಬೇಕು ಅಲ್ಲವೇ.........!!!!!! ನೋಡ್ತಾ ಇರಿ ನಾವೇನೇನ್ ಮಾಡ್ತೇವೆ......!!!!!!!!
Indresh, Coovercolly
2011-08-27
ಪತ್ರಕರ್ತರೇನೂ ಆಕಾಶದಿಂದ ಇಳಿದುಬಂದವರಲ್ಲ. ಕಳ್ಳ ಪತ್ರಕರ್ತರಿಗೂ ತಕ್ಕ ಶಿಕ್ಷೆ ಆಗಲೇಬೇಕು . ಇವರು ಪತ್ರಿಕೆಗಳ ಹೆಸರು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ.
ರವಿ ಮೂರ್ನಾಡು,, ಕ್ಯಾಮರೂನ್,ಆಫ್ರಿಕಾ
2011-08-27
ಸಮಾಜ ಮತ್ತು ಸರಕಾರದ "ದಲ್ಲಾಳಿ" ಗಳಾಗಿರುವ ಪತ್ರಕರ್ತರು ಇಂದಿನ ಭೃಷ್ಟ ಮಂತ್ರಿಗಳನ್ನು ಹುಟ್ಟು ಹಾಕಿದರು ಅಂತ ನೇರವಾಗಿ ಹೇಳುತ್ತೇನೆ.ಅದೇ ರೀತಿ ಭೃಷ್ಟ ಅಧಿಕಾರಿಗಳು- ಮ0ತ್ರಿಗಳ ಎಂಜಲು ತಿನ್ನುವ ಇಂತಹವರು ಭೃಷ್ಟಾಚಾರದ ಬಗ್ಗೆ ಸೋಲ್ಲೆತ್ತಲು ಏನು ಹಕ್ಕಿದೆ? ಭೃಷ್ಟ ಪತ್ರಕರ್ತರು ಎಂಜಲು ನೆಕ್ಕುವ ನಾಯಿಗಳು ಅಂತ ಇಂದಿನ ಪೀತ ಪತ್ರಿಕಾ ಕ್ಷೇತ್ರಕ್ಕೆ ಭಾಷ್ಯ ಬರೆಯುತ್ತೇನೆ. ಇವರಿಗೆ ಅಣ್ಣಾ ಹಜಾರೆ ಬಗ್ಗೆ ಹೆಸರೇಳಲು ಯಾವ ನೈತಿಕ ಹಕ್ಕಿಲ್ಲ. ಅವರಿಗೆ ಧಿಕ್ಕಾರವಿರಲಿ.
ksraghavendranavada, Horanadu
2011-08-27
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥ೦ಭವಾದ ಸಮೂಹ ಮಾಧ್ಯಮಗಳಿಗೆ ಹಿಡಿದಿರುವ ಇತ್ತೀಚಿನ ರೋಗವೆ೦ದರೆ ಪ್ರಸಾರ ಹೆಚ್ಚಿಸಿಕೊಳ್ಳುವುದು ಹಾಗೂ ದುಡ್ಡು ಮಾಡುವುದು. ನಮ್ಮ ಕಡೆ ಇವತ್ತಿಗೂ ಹೆಚ್ಚಿನ್ನ ಸ್ಥಳೀಯ ಮಾಧ್ಯಮಗಳು ಬದುಕುವುದು ಅವರಿವರನ್ನು ಹೆದರಿಸಿ.. “ ಹೆಚ್ಚಿಗೆ ಗಾ೦ಚಾಲಿ ಮಾಡಿದರೆ ಮು೦ದಿನ ಸ೦ಚಿಕೆಯಲ್ಲಿ ನಿನ್ನ ಬಗ್ಗೆನೇ ಬರೆಯುತ್ತೇನೆ“ ಎ೦ದು ಹೆದರಿಸಿ, ಅವರಿ೦ದ ಅಗ್ಗಾಗ್ಗೆ ದುಡ್ಡು ಕೀಳುತ್ತಾ, ತಾವು ಬಾರ್ ನಲ್ಲಿ ಮಜಾ ಮಾಡುವುದು.. ಇನ್ನೇನು?ಪಾಪಿ-ಪರದೇಶಿಗಳು ಹೆದರಿ ದುಡ್ಡು ಕೊಡ್ತಾರೆ.. ಕೊಡದಿದ್ದವರ ಹೆಸರು ಮಾರನೇ ದಿನದ ಪತ್ರಿಕೆಯಲ್ಲಿ.. ಸಮೂಹ ಮಾಧ್ಯಮಗಳಲ್ಲಿರುವವರಲ್ಲಿ ಇರುವ ಭ್ರಷ್ಟಾಚಾರದ ಬಗ್ಗೆ ಹೇಳಲೇ ನಾಚಿಕೆಯಾಗುತ್ತದೆ.. ಇವರನ್ನೆಲ್ಲಾ ಹಿಡಿದು ಜೈಲಿಗೆ ಹಾಕಬೇಕು.. ಮು೦ದೆ೦ದೂ ಯಾವುದೇ ಪತ್ರಿಕೆಗಳಲ್ಲಿ ಕೆಲಸ ಮಾಡದಿರುವ೦ತೆ ಹಾಗೂ ಪತ್ರಿಕೆಗಳನ್ನು ಸ್ವ೦ತವಾಗಿ ನಡೆಸದಿರುವ೦ತೆ ನಿರ್ಬ೦ಧ ಹೇರಬೇಕು.
ಅದಿರಲಿ.ಈ ಪಟ್ಟಿಯಲ್ಲಿರುವ ವಿ.ಭಟ್ ಎ೦ದರೆ ಯಾರೋ? ನನಗೊ೦ದು ಅನುಮಾನ ಬಹು ಪ್ರಸಿಧ್ಧರಾದ ವಿಜಯ ಕರ್ನಾಟಕದ ಮಾಜಿಗಳೋ? ಹೇಗೆ? ಬಲ್ಲವರು ಗೊತ್ತಿದ್ದರೆ ತಿಳಿಸುವ ಕೃಪೆ ಮಾಡಬೇಕು.
Satyaprakash, Bangalore
2011-08-27
ಹೌದು ಸರ್, ಈ ಪತ್ರಕರ್ತರ ರೀತಿನೇ ಸರಿ ಇಲ್ಲಾ. ಆರು ಕಾಸು ಕೊಟ್ರೆ ಅತ್ತೆ ಕಡೆ, ಮೂರು ಕಾಸು ಕೊಟ್ರೆ ಸೊಸೆ ಕಡೆ ಅನ್ನೋ ಗಾದೆ ತರ.
ತಿಮ್ಮಪ್ಪ ಎಂ. ಎಸ್, ಬೆಂಗಳೂರು
2011-08-27
ನೇರ, ಸ್ಪಷ್ಟ, ನಿಖರ ಮಾತು. ಇದಕ್ಕೆ ಸಂಬಂಧಪಟ್ಟಿರುವವರು ಸಹೃದಯಿಗಳಾಗಿದ್ದರೆ ಮನಕ್ಕೆ ಬಿಸಿತಟ್ಟಿ ಮಾರ್ಪಾಡುಮಾಡುವಂತ ಬರವಣಿಗೆ/ನಿರೂಪಣೆ. ಅಭಿನಂದನೆಗಳು. ಒಳ್ಳೆಯ ಕೆಲಸ ಮಾಡಿದ್ದೀರ.
Manjunatha HT, Bangalore
2011-08-27
ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯ ನಿರ್ವಹಿಸಬೇಕಾದ ಪತ್ರಿಕಾ ಮಾಧ್ಯಮರ೦ಗ ಇ೦ದು ಪೀತ ಪತ್ರಕರ್ತರಿ೦ದ ತು೦ಬಿ ತುಳುಕುತ್ತಿದೆ. ನೈತಿಕವಾಗಿ ದಿವಾಳಿಯಾಗಿರುವ ಇ೦ಥ ಮ೦ದಿ ವಸ್ತುನಿಷ್ಠ ವರದಿಗಳನ್ನು ನೀಡುವ ಬದಲು ಕಾಸು ಕೊಟ್ಟವರ ಪರವಾಗಿಯೇ ಬರೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಗಣಿ ಧಣಿಗಳ ಕಾಲು ನೆಕ್ಕಿ ಅಮೇಧ್ಯವನ್ನು ಆಘ್ರಾಣಿಸಿರುವ ಮಹಾನ್ ಪತ್ರಕರ್ತರಿಗೆ ಶಿಕ್ಷೆಯಾಗಲೇಬೇಕು. ತಮ್ಮ ವೃತ್ತಿ ಧರ್ಮಕ್ಕೆ ಮೋಸ ಮಾಡಿದ್ದಲ್ಲದೆ, ಸಮಾಜದ ಕಣ್ಣಿಗೆ ಮಣ್ಣೆರಚುವ ಇ೦ತಹ ಪತ್ರಕರ್ತರನ್ನು ಸಮಾಜದ ಮು೦ದೆ ಬೆತ್ತಲೆಗೊಳಿಸಬೇಕು.
Komal Kumar , Bangalore
2011-08-27
ಬೇಲಿನೇ ಎದ್ದು ಹೊಲ ಮೇಯ್ದ ಹಾಗೆ. ಭ್ರಷ್ಟ ಪತ್ರಕರ್ತರ ವಿರುದ್ದ ತನಿಖೆಯಾಗಬೇಕು. ಇಲ್ಲದೆ ಹೋದರೆ ಇದು ಮುಂದೆ ಮತ್ತಷ್ಟು ಮಾರಕವಾಗುತ್ತದೆ.