ಭಾನುವಾರ, ನವೆಂಬರ್ 13, 2011

ಲೋಕಾಯುಕ್ತ: ಭಿನ್ನ ಧ್ವನಿ ಗಳು


ಇಂದಿನ ಕನ್ನಡಪ್ರಭದಲ್ಲಿನ ಮುಖಪುಟದ ಲೇಖನ ದಲ್ಲಿ ಪ್ರಕಟವಾದ ಲೋಕಾಯುಕ್ತದಲ್ಲಿ ಎಸ್ಪಿ ಆಗಿದ್ದ ಶ್ರೀ ಮಧುಕರ ಶೆಟ್ಟಿ ರವರ ಸಂದರ್ಶನ, ಒಂದು ಕಡೆ ಪ್ರಬಲ ಜನಲೋಕಪಾಲ್ ಬಗ್ಗೆ ಅಣ್ಣಾ ಟೀಮ್ ಮತ್ತು ಬಹುತೇಕ ಪ್ರಜೆಗಳು ಒತ್ತಾಯ ಮಾಡ್ತಾಯಿರುವಾಗ ಮಧುಕರ ಶೆಟ್ಟಿಯವರ ಮಾತುಗಳು ಚಿಂತನೆಗೆ ಹಚ್ಚುತ್ತಿವೆ.....

ಬಾಲಕೃಷ್ಣೇಗೌಡರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆಗೆ ಸಿಟ್ಟಿಗೆದ್ದ ದೇವೇಗೌಡರು, ಲೋಕಾಯುಕ್ತ ಎಡಿಜಿಪಿಯಾಗಿದ್ದ ಜೀವನ್ ಕುಮಾರ್ ಗಾಂವ್ಕರ್ ಅವರಿಗೆ ದೂರವಾಣಿ ಕರೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿ, ತನಿಖೆ ಮುಂದುವರಿಸಿದ್ರೆ ಜಾಗ್ರತೆ ಎಂಬುದಾಗಿಯೂ ಬೆದರಿಕೆ ಹಾಕಿದ್ದಾರೆ ಅಂತ ವರದಿಯಾಗಿದೆ.,
ಆದರೆ ಅದಕ್ಕೆ ಸಮಜಾಯಿಷಿ ನೀಡಿದ  ಮಾಜಿ ಪ್ರಧಾನಿ ದೇವೇಗೌಡರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ, ತಾವು ಲೋಕಾಯುಕ್ತ ಎಡಿಜಿಪಿ ಆಗಿದ್ದ ಜೀವನ್ ವಿ ಗಾಂವ್ಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿರುವ ಅವರು ಲೋಕಾಯುಕ್ತ ಹಗೆತನದ ತನಿಖೆ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್ ವಿ.ಗಾಂವಕರ್ ಅವರನ್ನು ಮುಖ್ಯಮಂತ್ರಿ ಸದಾನಂದ ಗೌಡ ವರ್ಗಾಯಿಸಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ. ಗಾಂವಕರ್ ಅವರ ಸ್ಥಾನಕ್ಕೆ ಎಚ್.ಎನ್ ಸತ್ಯನಾರಾಯಣ ರಾವ್ (ಅಪರಾಧ ಮತ್ತು ತಾಂತ್ರಿಕ) ಅವರನ್ನು ನೇಮಕ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಯನ್ನು ಸ್ಥಗಿತಗೊಳಸಿ, ತನಿಖೆಗಳ ಹಾದಿ ತಪ್ಪಿಸಬೇಕೆಂದೇ ಈ ವರ್ಗಾವಣೆ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಈ ಎಲ್ಲ ವರ್ಗಾವಣೆಗಳ ಹಿಂದೆ ಇದೆ ಎಂದು ಹೆಗ್ಡೆಯವರು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಜೀವನ್ ಕುಮಾರ್ ವಿ. ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿ, ಶಿವಮೊಗ್ಗ ಎಸ್ಪಿ ಆಗಿದ್ದ ಅರುಣ್ ಚಕ್ರವರ್ತಿಯವರನ್ನು ಲೋಕಾಯುಕ್ತ ಡಿಐಜಿ ಆಗಿ ವರ್ಗ ಮಾಡಿದ್ದಕ್ಕೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಂಕಿತ ಅರುಣ್ ಚಕ್ರವರ್ತಿ ವಿರುದ್ಧ ಲೋಕಾಯುಕ್ತರಾಗಿದ್ದಾಗ ಸಂತೋಷ್ ಹೆಗ್ಡೆಯವರೇ ತನಿಖೆಗೆ ಆದೇಶಿಸಿದ್ದರು. ಇಂಥವರನ್ನು ಲೋಕಾಯುಕ್ತಕ್ಕೆ ತಂದು ಸಾಧಿಸುವುದಾದರೂ ಏನು ಎಂದು ಅವರು ಕಿಡಿ ಕಾರಿದ್ದಾರೆ. ಪ್ರಸ್ತುತ ಅಧಿಕಾರಿ ಸರಿಯಾಗಿ ಕೆಲಸ ಮಾಡದಿದ್ದಾಗ ವರ್ಗಾವಣೆ ಮಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ, ಘಟಾನುಘಟಿಗಳನ್ನು ಬಲೆಗೆ ಕೆಡವಿದಂಥ ದಕ್ಷ ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ...

(Click on the image to enlarge)


ಶುಕ್ರವಾರ, ನವೆಂಬರ್ 11, 2011

ಬದುಕಿನ ದಾರಿ - 1



ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ಹೇಗೆ ಬದುಕಬೇಕು ಅಂತ ನಮ್ಮ ತಂದೆ ಯಾವತ್ತು ಹೇಳಿಕೊಡಲಿಲ್ಲ, ನಾವು ಈ ಭೂಮಿ ಮೇಲೆ ಹುಟ್ಟಿದೀವಿ, ಯಾರ ಸಹಾಯ ಇಲ್ಲದೆ, ಯಾರೊಬ್ಬರಿಗೆ ತೊಂದರೆ ಕೊಡದೆ ಬದುಕಬೇಕು, ಎಂದು ದುಡಿದ  ಅವರ ಬದುಕೆ ಇಂದು ನಮಗೆ ಮಾರ್ಗದರ್ಶಿ ಯಾಗಿದೆ. ನಮ್ಮ ತಂದೆ ಅಷ್ಟೊಂದು ವಿದ್ಯಾವಂತರಲ್ಲ, ಸ್ವಲ್ಪ ಮಟ್ಟಿಗೆ ಓದಿದವರು. ನಮ್ಮ ಕುಟುಂಬವನ್ನು ಸಾಕಲು ಅವರು ಮಾಡಿದ ಕೆಲಸಗಳು ಒಂದಲ್ಲ, ಹಲವಾರು. ಬೆಂಗಳೂರಿನ ಅವೆನ್ಯು ರಸ್ತೆ ಯಲ್ಲಿ ಬೀದಿ ಬದಿಯಲ್ಲಿ ಪುಸ್ತಕಗಳನ್ನು ಮಾರಿದರು, ಬಳೇಪೇಟೆ,ಚಿಕ್ಕಪೇಟೆ, ಅವೆನ್ಯು ರಸ್ತೆ ಮುಂತಾದ ಕಡೆ ಬಜ್ಜಿ ಬೋಂಡ ಗಳನ್ನು ಮಾರಿದರು, ಚಿಕ್ಕವಯಸ್ಸಿನಲ್ಲಿ ಕೆಲ ಚಿತ್ರಗಳಲ್ಲಿ ಸಹಾಯಕ ನಟ ರಾಗಿ ಕೆಲಸ ಮಾಡಿದರು, ಒಂದು ಸ್ವಲ್ಪ ದಿನ ಮದ್ರಾಸ್ ನಲ್ಲಿ ಸಹ ಹೋಗಿ ಕೆಲಸ ಮಾಡಿ ಬಂದರು. ಮೂರು ಹೆಣ್ಣು ಮಕ್ಕಳು, ನಮ್ಮ ಅಜ್ಜಿ, ನಮ್ಮ ತಾಯಿ, ತಮ್ಮ ಮತ್ತು ನನ್ನನ್ನು ಸಾಕಲು ಮಾಡಿದ ಕೆಲಸಗಳು ಒಂದಲ್ಲ. ಅದೆಲ್ಲ ನೆನಪಿಸಿಕೊಂಡರೆ ಬಹಳ ಬೇಸರ ವಾಗುತ್ತೆ.
ನನಗಂತೂ ಪ್ರತಿಬಾರಿ ರೇಶನ್ ತರುವಾಗ ರೇಶನ್ ಅಂಗಡಿಯವನ ಜತೆ ಜಗಳ, ಸಾಮನುಗಳು ಇದ್ದರೂ ಇಲ್ಲ ಅಂತ ಹೇಳಿ, ಅವನ ಸ್ನೇಹಿತರಿಗೆ ಹಾಗು ಬೇಕಾದವರಿಗೆ ಮೊದಲು ಕೊಟ್ಟು ಉಳಿದದ್ದನ್ನು ಹೆಚ್ಚಿನ ಬೆಲೆಗೆ ಬ್ಲಾಕ್ ನಲ್ಲಿ ಮಾರಿಕೊಳ್ಳುತ್ತಿದ್ದ. ಅವನ ಜತೆ ಈ ತರಹ ಆದರೆ, ಇನ್ನು ದಿನಸಿ ಅಂಗಡಿಯಲ್ಲಿ ಸಾಲ ಕೇಳಿ ತರಬೇಕಾದರೆ ಬಹಳ ಹಿಂಸೆ ಆಗುತಿತ್ತು.
ಮುಂದಿನ ಭಾಗದಲ್ಲಿ ಕೆಲ ಹೇಳಿಕೊಳ್ಳಲೇ ಬೇಕಾದ ಕಥೆಗಳಿವೆ, ಅವನ್ನು ಒಂದೊಂದಾಗಿ ಬರೀತಾ ಹೋಗ್ತೀನಿ.

ಇನ್ನು ಬಡವರಿಗೆ ಸರ್ಕಾರ ಅದನ್ನು ಮಾಡಿಲ್ಲ, ಇದನ್ನು ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ಓದುತ್ತಾಯಿರ್ತೇವೆ, ಟೀವಿಗಳಲ್ಲಿ ನಾವು ಯಾವಗಲು ನೋಡ್ತಾಯಿರ್ತೇವೆ. ಚಿಂತಾಂಜನಕ ದ ಬದುಕು, ಕಣ್ಮುಚ್ಚಿ ಕುಳಿತ ಸರಕಾರ,  ಒಂದು ಒಳ್ಳೆ ಕವರ್ ಸ್ಟೋರಿ ಮಾಡಿ ಅಥವ ಬರೆದು ಬೆನ್ನು ತಟ್ಟಿಸಿಕೊಳ್ಳುವ ಜನ. ಒಂದು ವರದಿ ಮಾಡಿ  ಇವರು ಕಣ್ಮುಚ್ಚಿ ಕುಳಿತುಕೊಳ್ಳೋದನ್ನ ನಾವು ನೋಡ್ತೀವಿ. ಅಷ್ಟರಲ್ಲೇ ಬೇರೆ ಎಲ್ಲೋ ಗಮನ ಹರಿದಿರುತ್ತೆ, ಈ ವರದಿ ಬಗ್ಗೆ ಮತ್ತೆ ಮರೆವು. ಆದರೆ ಸರ್ಕಾರ ವನ್ನು ಧೂಷಿಸುವದರ ಬದಲು ಅವರಿಗೊಂದು ಪರ್ಯಾಯ ವ್ಯವಸ್ಥೆ ಯನ್ನು ಯಾವುದಾದರು ಒಂದು ಸಮಾಜ ಸೇವೆ ಸಂಘ ಸಂಸ್ಥೆ ಯ ಮೂಲಕ ಮಾಡ ಬಹುದಲ್ವ?
ಹಾಗೆ ನೋಡಿದರೆ, ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ ಸುಮಾರು ೪೭ ಕೋಟಿ ಇತ್ತು, ಇಂದು ಆಸು ಪಾಸು ೧೨೦ ಕೋಟಿ ಹತ್ತಿರ ಇದೆ. ೨ ದಶಕಗಳ ಹಿಂದೆ ನಮ್ಮ ರಾಜಕೀಯ ಮುಖಂಡರು ಭಾಷಣ ಮಾಡ್ತ ಇರಬೇಕಾದರೆ, ಮುಕ್ಕೋಟಿ ಕನ್ನಡಿಗರು ಅಂತ ಹೇಳ್ತಾಯಿದ್ದರು, ಇಂದು ಆ ಸಂಖ್ಯೆ ೬ ಕೋಟಿ ಆಗಿದೆ. ಹಾಗೆ ಸಮಸ್ಯೆಗಳು ಸಹ ದುಪ್ಪಟ್ಟಾಗಿವೆ, ಎಲ್ಲವನ್ನು ಸರ್ಕಾರ ನಿಭಾಯಿಸಲಿಕ್ಕೆ ಆಗುತ್ತದೆಯೆ? ದೇಶದ ಪ್ರಜೆಗಳಾಗಿ ಕೆಲ ಜವಬ್ದಾರಿಗಳನ್ನು ನಾವು ಸಹ ಹೊತ್ತು ಕೊಳ್ಳ ಬೇಕಲ್ಲವೆ? ನಮ್ಮ ನಮ್ಮ ಬದುಕನ್ನು ಕಟ್ಟಿಕೊಳ್ಳಲು ನಾವು ಸರಕಾರ ವನ್ನು ಯಾಕೆ ಅವಲಂಬಿಸಬೇಕು? ಶಿಕ್ಷಣ, ವೈದ್ಯಕೀಯ ಸೌಲಭ್ಯ, ರಸ್ತೆ, ನೀರು, ಸಾರಿಗೆ ಸೌಲಭ್ಯ, ವಿದ್ಯುತ್ ಇನ್ನು ಮುಂತಾದ ಸಮಸ್ಯೆಗಳ ಬಗ್ಗೆ ಖಂಡಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಅದು ಸರ್ಕಾರದ ಪ್ರಥಮ ಕರ್ತವ್ಯ.
ಇನ್ನು ಕೆಲವರು ದೇವರು, ಧರ್ಮ ವನ್ನು ದೂಷಣೆ ಮಾಡೋದು ಇತ್ತೀಚಿಗೆ ಫ್ಯಾಶನ್ ಆಗಿದೆ, ಯಾವುದೇ ಧರ್ಮ ಹಾಗು ದೇವರು ನೀನು ಸುಮ್ಮನೆ ನನ್ನ ಧ್ಯಾನ, ನನ್ನ ಪೂಜೆ ಮಾಡ್ತ ಯಿದ್ದರೆ ನಿನ್ನ ಹೊಟ್ಟೆ ತುಂಬಿಸುತ್ತೇನೆ ಎಂದು ಹೇಳಿಲ್ಲ. ಕೆಲ ಯುವಜನತೆ ಧರ್ಮ, ದೇವರನ್ನು ಅರ್ಥ ಮಾಡಿಕೊಳ್ಳದೆ ಎಡಬಿಡಂಗಿಗಳ ಉಪದೇಶಕ್ಕೆ ಮರುಳಾಗಿ ಭಾರತೀಯ ಸಂಸ್ಕೃತಿಯನ್ನು ಹೀಗೆಳೆಯುವುದರಲ್ಲಿ ಮಗ್ನರಾಗಿದ್ದಾರೆ.
ಸ್ನೇಹಿತರು ಚರ್ಚಿಸಿದಂತೆ, ದೇವಸ್ಥಾನಗಳ ಅಗತ್ಯ ದೇವರಿಗಿಲ್ಲ. ಇದ್ದಿದ್ದರೆ ಅಸಂಖ್ಯ ದೇವಸ್ಥಾನಗಳು ಲೂಟಿಕೋರರ ಕೈನಲ್ಲಿ ಪುಡಿಪುಡಿಯಾಗುತ್ತಿರಲಿಲ್ಲ. ದೇವರಿಗೆ ಅವಶ್ಯಕತೆ ಇಲ್ಲ ಮನುಷ್ಯರಿಗೆ"ಅಂತ! ದೇವಸ್ಥಾನಗಳು ಪ್ರಾರ್ಥನೆಗೆ ಒಂದು ಜಾಗ ಮಾತ್ರ ಅದಷ್ಟಕ್ಕೆ ಸೀಮಿತ ಅದನ್ನು ಬಿಟ್ಟು ದೇವರು ಕೇವಲ ಅಲ್ಲಿಯೇ ಇದ್ದಾನೆ ಎನ್ನುವುದು ನಮ್ಮಕಲ್ಪನೆ ಅಷ್ಟೇ.
ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದಕ್ಕೂ ಈ ಸರಕಾರ ಗಳು, ಧರ್ಮಗಳು, ಜಾತಿಗಳು ಏನು ಮಾಡಬೇಕಾಗಿದೆ. ಅವಕಾಶವನ್ನು ನಾವು ಹುಡುಕಿಕೊಂಡು ಹೋಗಬೇಕು, ಅವಕಾಶಗಳಿಗೆ ತಕ್ಕಂತ ವಿಧ್ಯಾಭ್ಯಾಸ, ಬುದ್ಧಿ ಶಕ್ತಿ, ಚಾತುರ್ಯತೆ, ಪ್ರೌಡಿಮೆ ಯನ್ನು ನಾವು ರೂಪಿಸಿ ಕೊಳ್ಳ ಬೇಕು. ನಮ್ಮ ಶಕ್ತಾನುಸಾರವಾಗಿ ನಮಗೆ ಇಷ್ಟವಾದಂತಹ ಕೆಲಸ ಗಳನ್ನು ಮಾಡಿ ಅದರಲ್ಲಿ ಉನ್ನತಿಯನ್ನು ಸಾಧಿಸಿ ತೋರಿಸಬೇಕು.
ಅಸಂಖ್ಯಾತ ಭಾರತೀಯರು ಅಂದು ಇಂದು ವಿದೇಶಗಳಲ್ಲಿ ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾರೆ ಹಾಗು ಹೋಗುತಿದ್ದಾರೆ, ಅದರಲ್ಲಿ ಸಫಲರಾಗಿ ಇಂದು ಲಕ್ಷಾಂತರ ಹಣವನ್ನು ಗಳಿಸಿ ಸುಖವಾಗಿದ್ದಾರೆ. ಇತ್ತೀಚಿಗೆ ಗಲ್ಫ್ ನಲ್ಲಿರುವ ಸ್ನೇಹಿತರ ಜತೆ ಚರ್ಚಿಸುವಾಗ ಬಾಂಗ್ಲಾದೇಶಿಯರ ವಿಚಾರ ಪ್ರಸ್ತಾಪ ವಾಯಿತು. ಶೇ೯೦ ಮುಸ್ಲಿಮರಿರುವ ಬಾಂಗ್ಲದೇಶದ ಜನರಲ್ಲಿ ಬಹುತೇಕ ಜನರು ವಲಸೆ ಹೋಗುತಿದ್ದಾರೆ. ಎರಡೊತ್ತಿನ ಊಟ ಮತ್ತು ಅವರನ್ನು ನಂಬಿಕೊಂಡ ಜನರನ್ನು ಸಾಕುವುದಕ್ಕಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅವರು ಮಾಡದ ಕೆಲಸಗಳಿಲ್ಲ, ರಸ್ತೆ ಕಸ ಗುಡಿಸುವುದರಿಂದ ಹಿಡಿದು ಕಟ್ಟಡ ಕಟ್ಟುವವರೆಗೆ ಎಲ್ಲ ರೀತಿಯ ಕೆಲಸ ಗಳಲ್ಲಿ ಯಾವುದೇ ಚೌಕಟ್ಟು ಗಳನ್ನು ಹಾಕಿ ಕೊಳ್ಳದೆ ದುಡಿಯುತಿದ್ದಾರೆ. ಇನ್ನು ಐರೋಪ್ಯ ರಾಷ್ಟ್ರಗಳಲ್ಲಿ, ಇಂತಹ ಬಹುತೇಕ ಕೆಲಸವನ್ನು ಆ ಬಿಳಿಯರೇ ಮಾಡುತ್ತಾರೆ. ಹೀಗೆ ಎಲ್ಲರೂ ತಮ್ಮ ತಮ್ಮ ಹೊಟ್ಟೆ ಹೊರೆಯಲು ತಮಗೆ ಅವಕಾಶದೊರೆತ ಎಲ್ಲ ಕೆಲಸಗಳನ್ನು ಮಾಡುತ್ತಾರೆ, ಆದರೆ ನಮ್ಮ ರಾಷ್ಟ್ರದಲ್ಲಿ ..............

ಮುಂದುವರಿಯುವುದು
ಚಿತ್ರ ಕೃಪೆ: ಅಂತರ್ಜಾಲ

ಗುರುವಾರ, ನವೆಂಬರ್ 10, 2011

ಭಾರತೀಯ ಸೂರ್ಯದೇವಾಲಯಗಳ ವೈಶಿಷ್ಟ್ಯ




ಭಾರತೀಯ ಸ೦ಪ್ರದಾಯದಲ್ಲಿ ಯುಗಾದಿ ವರ್ಷದ ಮೊದಲನೇಯ ದಿನಚ೦ದ್ರನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ಚಾ೦ದ್ರಮಾನ ಯುಗಾದಿಯೆ೦ದೂ ಸೂರ್ಯನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ವಿಷು ಅಥವಾ ಸೌರಮಾನ ಯುಗಾದಿಯೆ೦ದೂ ಆಚರಿಸುತ್ತಾರೆಯುಗ ಎ೦ದರೆ ನಕ್ಷತ್ರಗಳ ಹೊ೦ದಾಣಿಕೆಆದಿ ಎ೦ದರೆ ಆರ೦ಭಯುಗಾದಿ ಎ೦ದರೆ ಒ೦ದು ಕಾಲದ ಆರ೦ಭವರ್ಷಕ್ಕೊ೦ದು ದಿನ ಭೂಮಿಯ ಮಧ್ಯರೇಖೆಯು ಸೂರ್ಯಚ೦ದ್ರ ಮತ್ತು ಚೈತ್ರರಾಶಿಯ ಸಮರೇಖೆಯಲ್ಲಿ ಬರುವ ಸಮಯವೇ ಯುಗಾದಿಸೌರಮಾನ ಪ೦ಚಾ೦ಗವು ಸೂರ್ಯನ ಚಲನೆಯನ್ನಾಧರಿಸಿದೆಇದರ ಪ್ರಕಾರ ಸೂರ್ಯನು ಭೂಮಧ್ಯ ರೇಖೆ ಅಥವಾ ಇಕ್ವೆನಾಕ್ಸ್ ಮೇಲೆ ಬರುವ ದಿನವೇ ವಿಷು ಅಥವಾ ಸೌರಮಾನ ಯುಗಾದಿಈ ದಿನದಿ೦ದ ಸೂರ್ಯನು ಉತ್ತರ ಗೋಲಾರ್ಧದೆಡೆ ಚಲಿಸಲು ಪ್ರಾರ೦ಭಿಸುತ್ತಾನೆಸೌರಮಾನ ಪ೦ಚಾ೦ಗವನ್ನಾಧರಿಸುವವರಿಗೆ ಇದೇ ವರ್ಷದ ಮೊದಲ ದಿನ.
ಭಾರತದಲ್ಲಿರುವ ಪ್ರಮುಖ ಸೂರ್ಯ ದೇವಾಲಯ ಯಾವುದು ಎ೦ದು ಯಾರನ್ನಾದರೂ ಕೇಳಿದರೆ ತಕ್ಷಣ ಬರುವ ಹೆಸರು ಕೋನಾರ್ಕಆದರೆ ಭಾರತದಾದ್ಯ೦ತ ಸುಮಾರು 30ಕ್ಕೂ ಹೆಚ್ಚು ಪ್ರಸಿದ್ಧ ಸೂರ್ಯ ದೇವಾಲಯಗಳಿವೆಇವು ಅತ್ಯ೦ತ ಪ್ರಾಚೀನವೂ ಅತ್ಯ೦ತ ವಿಶಿಷ್ಟವೂ ಹೌದುಇವುಗಳಲ್ಲಿ ಅತಿ ಹೆಚ್ಚು ಜನಪ್ರಿಯವೆ೦ದರೆ ಕೋನಾರ್ಕ್,ಕು೦ಭಕೋಣ೦ನ ಸೂರ್ಯನಾರ್ ದೇವಾಲಯವಾರಣಾಸಿಯ ದ್ವಾದಶಾದಿತ್ಯ,ಗುಜರಾತಿನ ಮೊದೆರಾ ಮೊದಲಾದವುಕರ್ನಾಟಕದಲ್ಲಿ ಗದಗಿನ ಸಮೀಪದ ಲಕ್ಕು೦ಡಿಯ ಸೂರ್ಯದೇವಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿ ಸೂರ್ಯನಾರಾಯಣ ದೇವಾಲಯವೂ ಬಹುಪ್ರಸಿದ್ಧಿ.
ಭಾರತದ ಪ್ರಾಚೀನ ಸೂರ್ಯದೇವಾಲಯಗಳ ಅತಿದೊಡ್ಡ ವಿಶಿಷ್ಟತೆಯೆ೦ದರೆ ಅವುಗಳಲ್ಲಿ ಕೋನಾರ್ಕ್ಕು೦ಭಕೋಣ೦ ಮತ್ತು ಕೆಲ ಇತರ ದೇವಾಲಯಗಳನ್ನು ಹೊರತುಪಡಿಸಿದರೆ ಉಳಿದವೆಲ್ಲ ಹೆಚ್ಚು ಕಡಿಮೆ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸರಳ ರೇಖೆಯಲ್ಲಿ ಕೇ೦ದ್ರೀಕೃತವಾಗಿವೆನಿಮಗೆ ಗೊತ್ತಿರಬಹುದು23 ಡಿಗ್ರಿ ಎ೦ಬುದುTropic Of Cancerಅಥವಾ ಕರ್ಕಾಟಕ ಸ೦ಕ್ರಾ೦ತಿ ವೃತ್ತಬಹಳ ದಿನಗಳ ಹಿ೦ದೆ ಭಾರತಗ್ಯಾನ್ ಎ೦ಬ ಲೇಖನದಲ್ಲಿ ಇದರ ಬಗ್ಗೆ ಕೆಲವು ವಿಷಯಗಳನ್ನು ಓದಿದ್ದೆಕಳೆದ ವಾರ ದಕ್ಷಿಣ ಭಾರತ ಪ್ರವಾಸದಲ್ಲಿ ಕು೦ಭಕೋಣ೦ಗೆ ಹೋಗಿ ಬ೦ದ ಮೇಲೆ ಈ ವಿಷಯದ ಬಗ್ಗೆ ಆಸಕ್ತಿ ಇನ್ನಷ್ಟು ಜಾಸ್ತಿಯಾಯಿತು.

ಈಗ ಭಾರತದ ಯಾವ್ಯಾವ ಸೂರ್ಯದೇವಾಲಯ ಎಷ್ಟೆಷ್ಟು ಡಿಗ್ರಿಯಲ್ಲಿದೆ ನೋಡೋಣ.
ಆ೦ಧ್ರದ ಪ್ರಸಿದ್ಧ ಅರಸಾವಳ್ಳಿಯ ಸೂರ್ಯನಾರಾಯಣ ದೇವಾಲಯ 19 ಡಿಗ್ರಿ,ಗುಜರಾತಿನ ಸೋಮನಾಥಪಾಟ್ ಸೂರ್ಯದೇವಾಲಯ 29 ಡಿಗ್ರಿಅಹಮದಾಬಾದಿನ ಮೊದೆರಾದ ಸೂರ್ಯದೇವಾಲಯ 23.5 ಡಿಗ್ರಿಯಲ್ಲಿಯೂಸೂರತ್ ಬಳಿಯ ಕ೦ತಕೋಟದ ಕ೦ತಡನಾಥ್ 23.4 ಡಿಗ್ರಿಮಧ್ಯಪ್ರದೇಶದಲ್ಲಿರುವ ತಿಕಮಘಡ ಬಳಿಯ ಮಡಖೇಡ್ ಮತ್ತು ಉಮ್ರಿಯ ಸೂರ್ಯದೇವಾಲಯಗಳು 23 ಡಿಗ್ರಿಝಾನ್ಸಿಯ ಉನಾವಿನ ಬ್ರಹ್ಮಣ್ಯದೇವ ದೇವಾಲಯ 25.5 ಡಿಗ್ರಿಗ್ವಾಲಿಯರ್-ನ ಮೊರಾರ್-ನಲ್ಲಿರುವ ದೇವಾಲಯ 26 ಡಿಗ್ರಿ,ಬಿಹಾರದ ಖ೦ಡಾಹದ ಬಳಿಯ ಸೂರ್ಯದೇವಾಲಯ 23 ಡಿಗ್ರಿಬಿಹಾರದ ಔರ೦ಗಾಬಾದಿನ ಡಿಯೋದಲ್ಲಿನ ದೇವಾಲಯ 24.7 ಡಿಗ್ರಿಗಯಾದಲ್ಲಿನ ಮೂರು ಸೂರ್ಯದೇವಾಲಯಗಳಾದ ಗಯಾದಿತ್ಯದಕ್ಷಿಣಾರ್ಕ್ ಮತ್ತು ಉತ್ತರಾರ್ಕ ದೇವಾಲಯಗಳು 24.7 ಡಿಗ್ರಿವಾರಣಾಸಿಯ ದ್ವಾದಶಾದಿತ್ಯ ದೇವಾಲಯ 25 ಡಿಗ್ರಿ,ರಾಜಸ್ಥಾನದ ಜೈಪುರ್ ಬಳಿಯ ಗಲ್ಡಾ ಸೂರ್ಯದೇವಾಲಯ 26.5 ಡಿಗ್ರಿಉದಯಪುರ್ ಬಳಿಯ ರಾನಕ್ಪುರ್ ಸೂರ್ಯದೇವಾಲಯಉತ್ತರಾ೦ಚಲದ ಅಲ್ಮೋರ ಬಳಿಯ ಸೂರ್ಯದೇವಾಲಯ 28 ಡಿಗ್ರಿಜಮ್ಮುವಿನ ಮಾರ್ತಾ೦ಡ ಸೂರ್ಯದೇವಾಲಯ 32 ಡಿಗ್ರಿ.
ಬರಿ ಭಾರತದಲ್ಲಿ ಮಾತ್ರವಲ್ಲಈಜಿಪ್ಟಿನ ಪ್ರಾಚೀನ ನಾಗರೀಕತೆಯ ಪ್ರಸಿದ್ಧ ಸೂರ್ಯದೇವಾಲಯಗಳಾದ ಅಬು ಸಿ೦ಬೆಲ್ 22.6 ಡಿಗ್ರಿ ಮತ್ತು ಲಕ್ಸರ್ 25 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿವೆ.
ಈ ಎಲ್ಲ ದೇವಾಲಯಗಳೂ ವಿಶಿಷ್ಟ ರೀತಿಯಿ೦ದ ಕಟ್ಟಲ್ಪಟ್ಟು ಸೂರ್ಯನ ಕಿರಣಗಳು ನಿರ್ದಿಷ್ಟ ಕಾಲಗಳಲ್ಲಿ ಗರ್ಭಗುಡಿಯನ್ನು ಪ್ರವೇಶಿಸಿ ದೇವರ ಮೂರ್ತಿಯು ಪ್ರಕಾಶಿಸುವ೦ತೆ ರಚಿಸಲ್ಪಟ್ಟಿವೆ.
ಹೀಗೆ ಹೆಚ್ಚುಕಡಿಮೆ ಬಹುತೇಕ ಎಲ್ಲ ಸೂರ್ಯದೇವಾಲಯಗಳೂ ಒ೦ದೇ ಸರಳರೇಖೆಯಲ್ಲಿ ಅದೂ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸ್ಥಿತವಾಗಿರುವ ಕಾರಣವಾದರೂ ಏನುಅದೂ ಒ೦ದೇ ರೀತಿಯ ವಿನ್ಯಾಸದಲ್ಲಿ ಎನ್ನುವುದು ಮಾತ್ರ ತೀರಾ ಸೋಜಿಗದ ಸ೦ಗತಿಇದರ ಹಿ೦ದೆ ಯಾವುದಾದರೂ ವೈಜ್ಞಾನಿಕ ಮಹತ್ವ ಇದೆಯೇ ಯಾರಾದರೂ ಸ೦ಶೋಧನೆ ಮಾಡಿದವರು ಈ ವಿಷಯದ ಮೇಲೆ ಬೆಳಕು ಚೆಲ್ಲಿದರೆ ಇದರ ಹಿ೦ದಿನ ರಹಸ್ಯವನ್ನು ಬಿಡಿಸಲು ಸಾಧ್ಯ.
ಲೇಖಕರು: ಸಚಿನ್ ಭಟ್, ಗೆಣಸ್ಲೆ ಬ್ಲಾಗ್
ಚಿತ್ರಗಳು: ಅಂತರ್ಜಾಲ

ಶುಕ್ರವಾರ, ಅಕ್ಟೋಬರ್ 28, 2011

ನಟರಾಜ್ ಕಾನ್ಗೋಡ್ ಎನ್ನುವ ಮಹಾನ್ ಗ್ರಂಥಾಲಯ.




ನಟರಾಜ್ ಒಬ್ಬ ಮೇಧಾವಿ, ಅತಿ ಬುದ್ದಿವಂತ, ಅತ್ಯದ್ಬುತ ವಿಚಾರ ಪ್ರತಿಪಾದಕ, ತತ್ವಜ್ನಾನಿ, ಮಹಾನ್ ವೇದಾಂತಿ.... ವರೊಂದು ಧೈತ್ಯ ಪ್ರತಿಭೆ. ಸಿದ್ದಾಂತ, ವೇದಾಂತ ಮತ್ತು ವೈಚಾರಿಕತೆ ಯಲ್ಲಿ ಪ್ರತಿಭಾವಂತರು ಅವರು..... ಅಂತ ಹೇಳಿದರೆ ಉತ್ಪ್ರೇಕ್ಷೆ ಎನಿಸಬಹುದು. ಯಾಕೆಂದರೆ.................

ಬಿರುದು ಬಾವಲಿಗಳು ಪ್ರಶಂಷೆಗಳು ಬರಬೇಕೆಂದೇ ಮಾಡುವುದು!! ಬರೆಯುವುದು!! ಪ್ರಶಸ್ತಿಗಾಗೆ ಸಿನೆಮ ತೆಗೆಯುವುದು!! ಜ್ಞಾನಪೀಠಕ್ಕಾಗೆ ಬರೆಯುವುದು!! ಇವುಗಳು ಅಂತಂಕಕಾರಿ ಬೆಳವಣಿಗೆ!! ಹಾಗೆ ಮಾದದಿದ್ದವರನ್ನು ಎಲೆಮರೆಯ ಕಾಯಿ ಎಂದು ವರ್ಣಿಸುವುದು!! ಯಾರಿಗೋ ಸಿಗಬೇಕಾಗಿತ್ತು ಎಂದು ದೊಂಬಿ ಮಾಡುವುದೂ!!ಮಾಡಿಸುವುದು!!ಯಾವುದೋ ಆಸೆ ಆಮಿಷ್ಕ್ಕಾಗಿ ತಮ್ಮಗೆ ಇರದಿರುವ ವಿಷಯಜ್ನಾನವನ್ನು ಬೇರೆಯವರಿಂದ ಕದ್ದು ಅದನ್ನು ಕೇವಲ ತಮ್ಮ ಹೆಸರಿನಲ್ಲಿ ಪ್ರತಿಷ್ಟೇಗೊಸ್ಕರವೇ ಪ್ರಕಟಿಸಿಕೊಳ್ಳುವುದು!!ಇವೆಲ್ಲ ಒಳ್ಳೆ ಆರೋಗ್ಯಕರ ಮನಸ್ಸಿನ ಲಕ್ಷಣಗಳಲ್ಲ!!ಒಂದು ವೇಳೆ ಅದು ಒಳ್ಳೆಯ ಬರವಣಿಗೆಯೇ ಆಗಿದ್ದರೆ!! ವಿಚಾರಗಳೇ ಆಗಿದ್ದರೆ!! ಅದರಲ್ಲಿ ಯಾವುದಾದರೂ ಒಳ್ಳೆಯ ಪ್ರಯೋಜಕ ಅಂಶಗಳು ಇದ್ದರೆ!! ಅದು ಸಂಪಿಗೆ ಹೂವಿನಂತೆ ಪಾರಿಜಾತದ ಹೂವಿನಂತೆ ಅದು ಎಲೆ ಮರೆಯಲ್ಲಿ ಇದ್ದರೂ ಅದರ ಪರಿಮಳ ಎಲ್ಲೆಡೆಯೂ ಹರಡಿ ಅದು ಎಲ್ಲಿಗೆ ತಲುಪಬೇಕೋ ಅದು ತಲುಪಿಯೇ ತೀರುತ್ತದೆ!! ಹಾಗು ಅದಕ್ಕೆ ಯಾವ ಮನ್ನಣೆ ಸಿಗಬೇಕೋ ಅದು ಸಿಕ್ಕಿಯೇ ತೀರುತ್ತದೆ!!ಅದನ್ನು ಬರಹಗಾರರಾಗಲೀ ಅಥವ ಯಾರೇ ಆಗಲೀ ನಿರೀಕ್ಷಿಸಿದ ಮಾತ್ರಕ್ಕೆ ಅದು ಜನಮನ್ನಣೆಯದೂ ಆಗಿರುವುದಿಲ್ಲ!!
................ಅಂತ ಅವರೇ ಪೋಸ್ಟ್ ಮಾಡಿದ್ದಾರೆ.


ನಟರಾಜ್ ಅಫ್ಗಾನಿಸ್ಥಾನ್ ನ ಕಾಬೂಲ್ ನಲ್ಲಿ AFGHANTV ಯಲ್ಲಿ ಕೆಲಸ ಮಾಡುತಿದ್ದಾರೆ. ಇರಾಕ್ ಮತ್ತು ಅಫ್ಗಾನಿಸ್ಥಾನ್ ನಲ್ಲಿ ಕೆಲಸ ಮಾಡುವುದಕ್ಕೆ ಬಹಳ ಜನ ಹೆದರುತ್ತಾರೆ. ಆದರೆ ಯಾವುದೇ ಭಯವಿಲ್ಲ ದೆ ನಮ್ಮ ಕನ್ನಡಿಗರೊಬ್ಬರು Cheif Operating Officer ಆಗಿ ಕೆಲಸ ಮಾಡುತಿದ್ದಾರೆ ಎನ್ನುವುದು ಬಹಳ ಸಂತೋಷದ ವಿಚಾರ.
ಇವರ ವೃತ್ತಿ ಜೀವನದ ಅನುಭವಗಳ ಬಗ್ಗೆ ಅವರ ಕೈಯಿಂದಲೇ ಒಂದು ಬ್ಲಾಗ್ ಬರೆಸುವ ಆಲೋಚನೆ ಮಾಡಿದ್ದೀನಿ, ಅವರ ಅನುಭವಗಳನ್ನು ಬರೆದರೆ ಅದೊಂದು ರೋಚಕ ಕಥಾನಕವಾಗುವುದು ಅಂತ ಅನ್ನಿಸುತ್ತೆ.


ಕಳೆದ ತಿಂಗಳು ನಾನು ಹೀಗೆ ಟಿವಿ ನೋಡುತ್ತಿರಬೇಕಾದರೆ  ಕಾಬೂಲಿನಲ್ಲಿ ಬಾಂಬ್ ಸ್ಪೋಟ ದ ವರದಿ ಯಾಯಿತು, ನನಗೆ ತಕ್ಷಣ ನೆನಪಾದವರು ನಟರಾಜ್, ಅಯ್ಯೊ ಯಾಕೆ ಇವರು ಅಂತಹ ದೇಶದಲ್ಲಿ ಹೋಗಿ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿ ಮಾಡಿ ಕೊಂಡಿದ್ದಾರೆ, ಈ ನಮ್ಮ ಭಾರತ ದೇಶದಲ್ಲಿ ಅವರಿಗೊಂದು ಕೆಲಸ ಸಿಗಲಾರದೆ. ಅಥವ ಪಕ್ಕದ ಶಾಂತಿಯುತ ಅರಬ್ ರಾಷ್ಟ್ರ ಗಳಲ್ಲಿ ಸಹ ಕೆಲಸ ಸಿಗದೆ? ಎಂದು ಮನಸ್ಸು ಚಡಪಡಿಸುತಿತ್ತು..  ಕೆಲ ಘಂಟೆಗಳ ನಂತರ ಫೇಸ್ ಬುಕ್ಕಿನಲ್ಲಿ ಅವರ ಒಂದು ಪೋಸ್ಟ್ ನೋಡಿದೆ.
"ಸ್ನೇಹಿತರೆ, ನಾವಿರುವ ಕಟ್ಟದ ಸಮೀಪದಲ್ಲೆ ಬಾಂಬ್ ಸ್ಪೋಟವಾಯಿತು, ನಾನು ಇಂತಹ ಘಟನೆಗಳ ಕುರಿತು ನೋಡಿದ್ದೆ ಮತ್ತು ಕೇಳಿದ್ದೆ ಆದರೆ ಈಗ ಖುದ್ದು ನೋಡುವ ಅನುಭವ ವಾಯಿತು, ಅದೄಷ್ಟವಶಾತ್ ನಮಗೇನು ಆಗಿಲ್ಲ ಅಂತ ತಣ್ಣಗೆ ಹೇಳಿದಾಗ ನನಗೆ ಸಣ್ಣಗೆ ಕಂಪಿಸಿದ ಅನುಭವವಾಯಿತು.
ಅಲ್ಲ ಮಾರಾಯ ಬಾಂಬ್ ಅಂತ ಕೇಳಿದರೆ ನಾವು ಬೆಚ್ಚಿ ಬೀಳ್ತೀವಿ, ಈ ಮನುಷ್ಯ "ಅನುಭವವಾಯ್ತು" ಅಂತ ಎಷ್ಟು ಕೂಲಾಗೆ ಹೇಳ್ತಾಯಿದಾನಲ್ಲಾ... ಅಂತ ಮನಸ್ಸಿನಲ್ಲಿ ಅಂದ್ಕೊಂಡೆ.

ಒಂದು ಕಡೆ ಹೀಗೆ ಬರೆಯುತ್ತಾರೆ
ಯಾವುದೇ ವಿಚಾರವನ್ನು ಬರೆದವನಿಗಾಲೀ ಯಾವುದೇ ಸಂಶೋಧನೆ ಮಾಡಿದವರಿಗಾಗಲೀ ಜ್ಞಾನ ಎಲ್ಲಿಂದಾ ಬಂತೂ ಎಂದು ಯೋಚಿಸಿ ಮೂಲಕ್ಕೆ ಹೋದರೆ ಮೂಲದಲ್ಲಿ ಅದನ್ನು ಯಾರು ಹೇಳಿದರೂ?!!ಅದು ಹೊರಗಡೆಯಿಂದ ಬಂದ ಜ್ನಾನವಾಗಿರುವುದಿಲ್ಲ!!ಅದರ ಮೂಲ ನಮ್ಮ ಮೂಲದಲ್ಲೇ ಇರುತ್ತದೆ!!ಅದಿರು ಲೋಹ ಎಲ್ಲಿಂದಲೋ ಬರುವುದಿಲ್ಲ ಅದು ಭೂಮಿಯಲ್ಲೇ ಹುದುಗಿರುತ್ತದೆ!!!ಬೆಣ್ಣೆ ಎಲ್ಲಿಂದಲೋ ಬರುವುದಿಲ್ಲ ಹಾಲಿನಲ್ಲೇ ಕಾಣದಂತೆ ಬೆರೆತಿರುತ್ತದೆ!!!

ನೋಡಿದ್ರಾ,  ಎಲ್ಲ ವಿಷಯಗಳು ನಮಗೆ ತಿಳಿದಿರುವಂತಹದ್ದೆ. ಆದರೆ ನಾವು ಅಂತಹ ವಿಚಾರ ಮಾಡುವುದೇ ಇಲ್ಲ, ಇವರ ಸಂಗ್ರಹದಲ್ಲಿರುವ ಎಲ್ಲ ಮುತ್ತುಗಳು ನಾವು ಎಲ್ಲೋ ಒಂದು ಕಡೆ ಓದಿರುವಂತಹದ್ದೆ ಮತ್ತು ಹಿರಿಯರು ನಮಗೆ ಹೇಳಿರುವುದೇ. ಆದರೆ ಅದನ್ನೆಲ್ಲ ತಮ್ಮ ಸಾಹಿತ್ಯ ಭಂಡಾರದಿಂದ ಹೊರತೆಗೆದು ಇಂದಿನ ಆಧುನಿಕ ಯುಗದಲ್ಲಿ ನಮ್ಮ ಕೆಲಸ ಕಾರ್ಯಗಳ ಮಧ್ಯದಲ್ಲಿ ಹೊಸ ಚೈತನ್ಯ ತುಂಬಿ ನಮ್ಮ ಮುಂದಿನ ಕಾರ್ಯಗಳಿಗೆ ಅಣಿಯಾಗುವಂತೆ ಮಾಡುತ್ತಿರುವ ನಟರಾಜ್ ರವರಿಗೆ ವಂದನೆಗಳು.
ಮನಸ್ಸಿಗೆ ಬೇಸರವಾದಾಗ, ಅಥವ ಕೆಲಸದ ಒತ್ತಡದಿಂದ ದಣಿವಾದಾಗ  ಫೇಸ್ ಬುಕ್ ತೆಗೆದರೆ ಅಲ್ಲೊಂದು ಎನರ್ಜಿ ಟಾನಿಕ್ ಸಿಗುತ್ತೆ, ಯಾವಗಲು ಬೇರೊಬ್ಬರನ್ನು ಹಳಿಯುತ್ತ, ಅವನು ಹೀಗೆ ಇವನು ಹೀಗೆ, ಸರ್ಕಾರ ಹಿಂಗಾಯಿತು ಅದು ಇದು ಎನ್ನುವುದರ ಮಧ್ಯೆ ನಟರಾಜ್ ರವರ ಗುಂಪುಗಳಲ್ಲಿನ ಪೋಸ್ಟಗಳು ನಮಗೆ ತಂಗಾಳಿ ಬೀಸುತ್ತವೆ.

ನಾವು ಯಾವಗಲೂ ಈ ಸರ್ಕಾರ ಮತ್ತು ಸಮಾಜ ವನ್ನು ದೂಷಿಸಿತ್ತಾ ಇರುತ್ತೇವೆ, ಸರ್ಕಾರ ಆ ಸೌಲಭ್ಯ ಕೊಡಲಿಲ್ಲ ಇದನ್ನು ಮಾಡಲಿಲ್ಲ , ಕೆಲವರಂತೂ ಈ ಹರಾಮಿ ದೇಶ, ದರಿದ್ರ ದೇಶ ಅಂತ ಹಾಗೆ ಹೀಗೆ  ಬೈಯುತ್ತಾ ಇರುತ್ತಾರೆ, ಈ ಕೆಳಗಿನ ವಿಚಾರ ಧಾರೆ ಗಮನಿಸಿ.
ಸರಕಾರ ಅಂದರೆ ಏನು!!ಅದಕ್ಕೆ ಕಪಾಳಿಗೆ ಹೊದಿಬೇಕಾದವರು ಯಾರು?? ಅದನ್ನು ತಿದ್ದಬೇಕಾದವರು ಯಾರು?? ನಮ್ಮಲ್ಲಿ ಎಲ್ಲಾರೂ ಒಂದಾಗಿ ತಿದ್ದಬೇಕು!!! ಅದಕ್ಕೆ ನಾವಲ್ಲ ಒಂದೇ ಅನ್ನೋ ಮೊನೋಭಾವನೆ ಬರಬೇಕು!!! ಅದಕ್ಕೆ ಸರಿಯಾದ ಮಾರ್ಗದರ್ಶಿ ಬೇಕು!! ಯೋಚನೆಯನ್ನು ತುಂಬುವವರು ಬೇಕು!! ನಾವೆಲ್ಲ ಸಮಾಜದ ಅಂಗಗಳು ಅವಯವಗಳು ಎಂಬ ಸಂದೇಶ ರವಾನೆಯಾಗಬೇಕು!! ಆಗ ತನ್ನಿಂದ ತಾನೇ ದ್ವೇಷ ಅಸೂಯೆ ಮೇಲು ಕೀಳು ಎಂಬ ಭಾವನೆ ಹೋಗುತ್ತದೆ!! ಅದಕ್ಕೆ ಸ್ವಲ್ಪ ಕಾಲ ಬೇಕು!! ಆದರೆ ಇಂದೆಲ್ಲ ನಾಳೆ ಅದು ಆಗೇ ಆಗುತ್ತದೆ!! ದೇಹದಲ್ಲಿ ಎಲ್ಲಾ ಅಂಗಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ!! ಹಾಗೆಯೇ ಸಮಾಜದ ಅಂಗಗಳಾದ ನಾವು ಒಟ್ಟಿಗೆ ಇರ್ಬೇಕು ಎಂಬ ಭಾವನೆ ಎಲ್ಲರಿಗೂ ಬರಬೇಕು!! ಅದು ಬರುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ!! ಎಲ್ಲರೂ ಅಡಿಕೆ ತೋಟವನ್ನು ಮಾಡುತ್ತಾರೆ!! ಆದ್ರೆ ಯೆಷ್ಟುಜನಕ್ಕೆ ಮರಹತ್ತಿ ಕೊನೆಕೊಯ್ಯಲು ಬರುತ್ತದೆ?? ಅದಕ್ಕೆ ಅದನ್ನು ಬಲ್ಲವರು ಬೇಕೇ ಬೇಕಲ್ಲವೇ !!!ಹಾಗೆ ಎಲ್ಲಾ ಕೆಲಸಗಳೂ ಕೂಡ ಟೀಂ ವರ್ಕ್!!ಒಬ್ಬರಿಂದಾ ಒಂದು ಜನಾಂಗದಿಂದ ಒಂದು ಮತ ಧರ್ಮದಿಂದ ಒಂದು ಜಾತಿಯಿಂದಾ ಆಗುವುದಿಲ್ಲ!! ಯಾರೂ ಕಡಿಮೆಯಲ್ಲ ಎಂಬ ಭಾವನೆ ಮೂಡುವ ಮೂಡಿಸುವ ಅವಶ್ಯಕತೆ ಇದೆ!! ಅದು ಬಂದ ದಿನ ಸರಕಾರವೂ ಬದಲಾಗುತ್ತದೆ!!!


! ನಾನು ಎಂಬುದು ಸಮಾಜಕ್ಕಿಂತ ಬೇರೆಯಾಗಿಲ್ಲ!! ಅಥವ ಸಮಾಜ ಎಂಬುದು ನನಗಿಂತಾ ಬೇರೆಯದಲ್ಲ!! ಅನ್ನೋ ಭಾವನೆ ಯಾವುದು ಶಾಶ್ವತ ಎಂಬುದಕ್ಕಿಂತ ನನ್ನ ತಪ್ಪು ಒಪ್ಪುಗಳು ಸಮಾಜದ ಮೇಲೆ ಹಾಗೂ ಸಮಾಜದ ತಪ್ಪು ಒಪ್ಪುಗಳು ನನ್ನಮೇಲೆ ಪರಿಣಾಮ ಬೀರುತ್ತವೆ ಅನ್ನುವ ಪ್ರಜ್ಞೆ ಮುಖ್ಯ!!

ಕೆಲವರು ಸಮಸ್ಯೆಗಳ ಪಟ್ಟಿ ಮಾಡಿ ಜನರೆದುರಿಗೆ ಹಾಗು ಸರ್ಕಾರದೆದುರಿಗೆ ತೆರೆದಿಡುತ್ತಾರೆ, ಮತ್ತೆ ಆಮೇಲೆ........ ಮರೆತು ಹೋಗ್ತಾರೆ, ಏನಾದರು ಘಟನೆ ಸಂಭವಿಸಿದಾಗ ಮಾತ್ರ,. ನಾವು ಈ ಬಗ್ಗೆ ವರದಿ ಮಾಡಿದ್ದೆವು, ಈ ಬಗ್ಗೆ ಮುಂಚೇನೆ ಬರೆದಿದ್ದೆವು .. ಈ ಗ ನಡೆಯಬಾರದ ಘಟನೆ ನಡೆದು ಹೋಗಿದೆ ಅಂತ ಬರೆದು ಯಥಾ ಪ್ರಕಾರ ಬೇರೊಂದು ಸಮಸ್ಯೆಬಗ್ಗೆ ದೃಷ್ಟಿ ಇಟ್ಟು ಧೈನಂದಿನ ಕೆಲಸದಲ್ಲಿ ನಿರತರಾಗಿರುತ್ತರೆ.. ಆದರೆ ಹಳೆಯ ಸಮಸ್ಯೆಗಳ ಬಗ್ಗೆ ಅದರ ಪರಿಹಾರ ಬಗ್ಗೆ.............? ಅದು ಪ್ರಶ್ನೆ ಯಾಗಿಯೆ ಉಳಿಯುತ್ತೆ.

ನಟರಾಜ ರ ಪರಿಚಯ ವಾದದ್ದು ಫೇಸ್ ಬುಕ್ಕಿನಿಂದ, ಆದರೆ ಇದುವರೆವಿಗೂ ನಾನು ಅವರ ಜತೆ ಯಾವುದೇ ಸಂವಾದ ನಡೆಸಿಲ್ಲ. ಅವರ ವಿಚಾರ ಧಾರೆಗಳನ್ನು ಗಮನಿಸುತ್ತಾ ಬಂದಿದ್ದೀನಿ, ಅವರ group ಗಳಾದ
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!! ಮತ್ತು "ಭಾವನೆಗಳು"FEELINGS
ಅಲ್ಲಿ ಅಧ್ಬುತ ವಿಚಾರಧಾರೆಗಳು ಹರಿದಾಡುತ್ತಿವೆ.
ಎಲ್ಲವನ್ನು ಕೂಡಿ ಹಾಕಿ ಒಂದು ಪುಸ್ತಕಮಾಡಿದರೆ ಅದೊಂದು ಜನಪ್ರಿಯ ಪುಸ್ತಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಪೂರಕವೆಂಬಂತೆ  ಗುಂಪಿನ ಸದಸ್ಯರು ಅವರ ಕೈ ಜೋಡಿಸಿ ಅವರ ಉದ್ದೇಶವನ್ನು ಸಾರ್ಥಕ ಗೊಳಿಸುತಿದ್ದಾರೆ
ಭಾವನೆಗಳ ಗುಂಪಿನ ಉದ್ದ್ದೇಶ "ಭಾವನೆಗಳು!! ಎಲ್ಲಾ ರೀತಿಯ ಎಲ್ಲದರ ಬಗ್ಗೆಯ ಭಾವನೆಗಳು!! ಒಂದು ಕ್ಷಣವೂ ನಿಲ್ಲದ ಮಹಾಪೂರದಂತೆ ಹರಿಯುತ್ತಿರುವ ಒಂದೇ ವಿಷಯ ವಸ್ತುವಿನ ಬಗ್ಗೆ ಸಾವಿರ ಮನಸ್ಸಿನ ಸಾವಿರಾರು ಭಾವನೆಗಳು!! ""ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ ಕರೆಯುವೆ ಕೈಬೀಸಿ""ಎಂಬ ಕವಿಯ ಕರೆಯಂತೆ ಬನ್ನಿ ಭಾವಗಳೇ!! ನವಿರಾಗಿರಿ!! ಮ್ರುದುವಾಗಿರಿ!!ಮುದವಾಗಿರಿ!!!"

ಎಂತಹ ಸುಮಧುರವಾದ ಸಾಲುಗಳು, ಮನಸ್ಸಿಗೆ ಬೇಸರವಾದಾಗ ಒಂದು ಸುತ್ತು ಹಾಕಿ ಬಂದರೆ ಮನಸ್ಸು ಚೇತೋಹಾರಿ ಆಗುವುದು. ಹೊಸ ಚೈತನ್ಯ ತುಂಭಿ ಮತ್ತೆ ನಾವು ಕ್ರಿಯಾಶೀಲ ರಾಗುತ್ತೇವೆ. ಅದರ್ಲ್ಲಿ ಪೋಸ್ಟ್ ಮಾಡುವ ಎಲ್ಲರೂ ಮನಸ್ಸಿನ ತಾಕಲಾಟಗಳನ್ನು ಒಂದು ಕಡೆ ಹಾಕಿ ಭಾವನೆಗಳ ಜತೆ ಗುದ್ದಾಡಿ ಜಗ್ಗಾಡಿ ದೇಹ ಮತ್ತು ಮನಸ್ಸು ಗಳ ನ್ನು ಹಗುರವಾಗಿಸುತ್ತವೆ.

ಒಂದು ಕಡೆ ಹೀಗೆ ಪೋಸ್ಟ್ ಮಾಡುತ್ತಾರೆ..................

----------------
ದ್ವಂದ್ವ ಗಳು ಹೇಗಿರುತ್ತವೆ ನೋಡಿ!! ನಾವು ನಮ್ಮ ದಿನ ನಿತ್ಯದ ಬದುಕಿನಲ್ಲಿ ಬೇಕಾದಷ್ಟು ಜೀವಿಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹತ್ಯೆ ಮಾಡುತ್ತಲೇ ಇರುತ್ತೇವೆ!! ಉದಾಹರಣೆಗೆ ಒಂದು ಸೊಳ್ಳೆ ನಮ್ಮನ್ನು ಕಚ್ಚಿದ ಒಂದೇ ಕಾರಣಕ್ಕಾಗಿ ಮರಣ ಹೊಂದಬೇಕಾಗಿತ್ತದೆ!!ಇನ್ನು ಸೂಕ್ಷ್ಮಾಣುಗಳಾದ ಬ್ಯಾಕ್ಟೀರಿಯಗಳನ್ನೂ ರೋಗ ನಿರೋಧಕ ಮಾತ್ರೆಗಳ ಅಥವ ಚುಚ್ಚುಮದ್ದುಗಳ ಮೂಲಕ ಸಾಯಿಸುತ್ತೇವೆ!!ಮನೆಯಲ್ಲಿ ಇಲಿಯ ಕಾಟ ಜಾಸ್ತಿಯಾಗಿದೆಯೆಂದು ಅದಕ್ಕೆ ವಿಷ ನೀಡಿ ಸಾಯಿಸುತ್ತೇವೆ!!ಮುಘ್ಧವಾಗಿ ತನಗೆ ಏನೋ ಆಹಾರ ಸಿಕ್ಕೆದೆ ಎಂದು ತಿಳಿದು ಅದು ತನ್ನನ್ನು ಸಾಯಿಸಲು ಇಟ್ಟಿರುವ ವಿಷ ಎಂದು ತಿಳಿಯದೆ ಬದುಕಲಿಕ್ಕಾಗಿ ತಿನ್ನುತ್ತದೆ ಸಾಯುತ್ತದೆ!! ಅದನ್ನು ನಿರ್ದಯವಾಗಿ ಆಹಾರ ಪರಬ್ರಹ್ಮ ವಸ್ತು ಎಂದು ಹೇಳುವ ನಾವು ಆ ಪರಬ್ರಹ್ಮ ವಸ್ತುವಿನಿಂದಲೇ ಮೋಸ ಹೋಗಿ ಸಾಯುವಂತೆ ಮಾಡುತ್ತೇವೆ!! ಇವೆಲ್ಲ ಕೇವಲ ನಾವು ಬದುಕಲಿಕ್ಕಾಗಿ!!ಯಾವುದೇ ಜೀವಿಯಾದರೂ ಅದನ್ನು ಶ್ರುಷ್ಟಿಸಿದ್ದು ಪರಮಾತ್ಮನೇ ಅದಕ್ಕೂ ನಮ್ಮಂತೆ ಬದುಕುವ ಹಕ್ಕು ಇದೆ ಎನ್ನುವುದನ್ನು ಮರೆಯುತ್ತೇವೆ!!ಆದರೆ ನಮ್ಮನ್ನು ನಾವು ಕಾಪಾಡಿಕೊಳ್ಳುವ ಸಲುವಾಗಿ ನಿರ್ದಯಿಗಳಾಗುತ್ತೇವೆ!!ಸಂಬಂಧಿಕರೋ ಸ್ನೇಹಿತರೋ ಮರಣ ಹೊಂದಿದಾಗ ದುಃಖ ಉಕ್ಕಿ ಬರುತ್ತದೆ!!ನಮ್ಮನು ನಾವು ಪ್ರಶ್ನಿಸುತ್ತ ಹೋದಲ್ಲಿ ಒಂದು ದೊಡ್ಡ ಪ್ರಪಂಚವೇ ನಮ್ಮೊಳಗೇ ಗೋಚರಿಸುತ್ತದೆ!!ಮತ್ತೆ ಮಾನವೀಯತೆಯ ಬಗ್ಗೆ ಮಾತಾಡಲು ಎಂದೂ ಮರೆಯುವುದಿಲ್ಲ!!ಕಾಡನ್ನು ಕಡಿದು ನಾಡನ್ನು ಮಾಡಿ ಅಲ್ಲಿಯ ಜೀವಸಂಕುಲದ ಅವನತಿಗೆ ಕಾರಣರಾಗುತ್ತೇವೆ!!ಅವು ಅಲ್ಲಿ ತಿನ್ನಲು ಏನೂ ಸಿಗದೇ ನಾವು ಬೆಳೆದಿರುವ ಬೆಳೆಯನ್ನು ತಿನ್ನಲು ನಾಡಿಗೆ ಬಂದರೆ ನಿರ್ಧಾಕ್ಷಿಣ್ಯವಾಗಿ ಹೊಸಕಿ ಹಾಕುತ್ತೇವೆ!!ಮೋಕ್ಷ ಮುಕ್ತಿ ಪಾಪ ಪುಣ್ಯ ಧರ್ಮ ಅಧರ್ಮ ಎಂದು ಏನೇನೊ ಹೇಳುತ್ತೇವೆ!!ಸಕಲ ಚರಚರಗಳಲ್ಲೂ ಭಗವಂತನಿದ್ದಾನೆ ಎಂದು ಭಾಷಣ ಬಿಗಿಯುತ್ತೇವೆ!!ಮಾನವ ಜನ್ಮ ಅತಿ ಶ್ರೇಷ್ಥ ಎಂದು ಕೊಚ್ಚಿ ಕೊಚ್ಚಿ ಇಳಿಸುತ್ತೇವೆ!!ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತೇವೆ!! ಯಾವ ವನ್ಯ ಮ್ರುಗಗಳೂ ಪ್ರಕೃತಿ ಯನ್ನು ಹಾಳು ಮಾಡುವುದಿಲ್ಲ!! ಅಂಥ ಘನ ಘೋರ ಕೃತ್ಯ ಎಸುಗುತ್ತೇವೆ !!ಛಿ ಛೀ !!ಇದೂ ಒಂದು ಜನ್ಮ ವೆ?!!
----------------


ಭಾವನೆಗಳು ಹರಿಯುವ ನೀರಿನ ಹಾಗೆ!! ಒಂದುಕಡೆ ನಿಂತುಕೊಳ್ಳುವುದಿಲ್ಲ ಹರಿಯುತ್ತಲೇ ಇರುತ್ತದೆ!! ಒಮ್ಮೊಮ್ಮೆ ನೀರು ನದಿ ಏನೆಲ್ಲ ಮಾಡುತ್ತದೆಯೋ ಅದನ್ನೆಲ್ಲಾ ಭಾವನೆಗಳೂ ಮಾಡುತ್ತವೆ!! ಇದನ್ನು ಹೆಚ್ಚು ಹೇಳುವುದು ಬೇಡ!! ಆದರೆ ನೀರನ್ನು ಯಾವುದೇ ಪಾತ್ರೆಯಲ್ಲಿ ಹಾಕಿದರೂ ಅದರ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ!!ಅಂದರೆ ಭಾವನೆಗಳು ಬದಲಾಗುತ್ತಲೇ ಇರುತ್ತವೆ!! ಕಾಲ ದೇಶ ವರ್ತಮಾನ ಪರಿಸ್ಥಿತಿ ಇವುಗಳಿಗೆ ಅನುಗುಣವಾಗಿ ಇದೆಲ್ಲವೂ ಹಿಂದೆ ಹೇಳಿರುವುದೇ ಯೆಲ್ಲಾರೀಗೂ ಗೊತ್ತಿರುವುದೇ!!!ಭಾವನೆಗಳು ಹರಿಯುವ ನೀರಿನಂತೆ ಎಂದಮೇಲೆ ಅದು ತಿರುಗಿ ಹರಿಯುವುದಿಲ್ಲ ಅದರ ಹರಿವು ಏಕಮುಖ!!ಅಂದರೆ ಅದು ಇಳಿಮುಖ ವಾಗಿಯೇ ಇರುತ್ತದೆ!!ಅಂದರೆ ಗುರುತ್ವಾಕರ್ಷಣೆಗೆ ಒಳಗಾಗಿ ಮೆಲಿನಿಂದಾ ಕೆಳಗೆ!!ಅಂದರೆ ಎಳೆಯಲ್ಪದುತ್ತದೆ ಆಕರ್ಷಣೆ ಇದ್ದಲ್ಲಿಗೆ!!!ಇದೂ ಕೂಡ ಅಂಥಹ ವಿಶೇಷವೇನೂ ಅಲ್ಲ!!!ಆದರೆ ಭಾವನೆಗಳು ನೀರಿನ ರೂಪದಿಂದಾ ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವಂತೆ ಆದರೆ??!! ಒಂದುವೇಳೆ ಅದು ದ್ರುವಪ್ರದೇಶ ಆಗಿ ಅಲ್ಲಿ ಯಾವಾಗಲೂ ಅದು ನೀರಿನ ರೂಪಕ್ಕೆ ಬರದೆ ಹೆಪ್ಪುಗಟ್ಟಿ ಹಿಮಾಲಯದಂತೆ ನಿಂತುಬಿಟ್ಟರೆ???!!!ಹೌದು ಆಗ ಪ್ರತ್ಯಕ್ಷ ಕಲ್ಲಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಇರುವ ನೀರೆಂಬ ಕಲ್ಲು ಎಷ್ಟು ಕಠಿಣ ಅಲ್ಲವೇ ??!!ಹಾಗೆ ಆಗಲು ಕಾರಣ ಅತಿಶೈತ್ಯ ವೆಂಬ ಸುತ್ತಲಿನ ಪ್ರತಿಕೂಲತೆ!!ಚೈತನ್ಯವೆಂಬ ಬಿಸಿಯ ಕೊರತೆ!!ಉತ್ತೇಜನ ಎಂಬ ಶಾಖದ ಕೊರತೆ!!ಆದರೂ ನೋಡಲು ಸುಂದರವಾದ ಹಿಮ (ನೀರ್ಗಲ್ಲು)ತನ್ನಲ್ಲಿ ಎಷ್ಟು ಕೊರತೆಯನ್ನು ಹೊಂದಿರಬಹುದು ಎಂಬ ಕಲ್ಪನೆಯೂ ಕೂಡ ಅದನ್ನು ನೋಡಿ ಸಂತೋಷ ಪಡುವವರಿಗೆ ಇರುವುದಿಲ್ಲಾ!!ಎಂಥಹ ವಿಪರ್ಯಾಸ ಅಲ್ಲವೇ!!!,,,,,,,,
----------------


" ನನ್ನ ಸ್ನೇಹಿತರು ಒಬ್ಬರು ಹೇಳಿದರು ಯಾಕೋ ಮನಸ್ಸಿಗೆ ಒಳ್ಳೆಯ ವಿಚಾರ ಬರುತ್ತಿಲ್ಲ ಎಂದು!!ಭಾವನೆಗಳೇ ಹಾಗೆ ಸಮುದ್ರದ ಅಲೆಗಳಂತೆ!! ಒಂದೊಂದು ಸಾರಿ ಭಾರೀ ಅಲೆಗಳ ಅಬ್ಬರ!! ಮತ್ತೊಮ್ಮೆ ಶಾಂತ!! ಉಬ್ಬರ ಇಳಿತಗಳು!! ಕೆಲವೊಮ್ಮೆ ಸುನಾಮಿ!! ಹೀಗೆ ನಮ್ಮ ಭಾವನೆಗಳೂ !!!ಆದರೆ ನನಗೆ ಒಳ್ಳೆಯ ವಿಚಾರಗಳು ಮೂಡುತ್ತಿಲ್ಲ ಎಂದು ಅವರಿಗೆ ಅನ್ನಿಸುತ್ತಿದೆ ಅಂದಮೇಲೆ ಅವರ ಪ್ರಜ್ಞೆ ಮನಸ್ಸನ್ನು ಅವರಿಗೆ ಗೊತ್ತಿಲ್ಲದೇ ಗಮನಿಸುತ್ತಿದೆ ಎಂದು ಅರ್ಥ!!! ಅದೇ ಸಂಸ್ಕಾರ ಎಂದು ನಾನು ಹೇಳಿದೆ!!ನಾವು ಏನು ಯೋಚನೆ ಮಾಡುತ್ತಿದ್ದೇವೆ?? ಯಾವ ಭಾವನೆಗಳು ಮೂಡುತ್ತಿವೆ?? ಎಂಬ ಗಮನಿಸುವಿಕೆಯೇ ನಮ್ಮ ಮನಸ್ಸನ್ನೂ ಭಾವನೆಗಳನ್ನೂ ಶುದ್ಧಗೊಳಿಸುತ್ತಾ ಹೋಗುತ್ತದೆ!!ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ!! ಹಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಪರಿವೆ ಇರುವುದಿಲ್ಲ!!! ಅದಕ್ಕೆ ಕಾರಣ ಅವರು ತಮ್ಮ ಮನಸ್ಸನ್ನು ಗಮನಿಸಿರುವುದಿಲ್ಲ!!"
-------------------------
ನನ್ನನ್ನು ಒಬ್ಬ ನೀವೇಕೆ ಕ್ರಿಶ್ಚಿಯನ್ ಆಗಬಾರಾದೂ ಎಂದು ಕೇಳಿದ ಅದಕ್ಕೆ ನಾನು ಹೇಳಿದೆ ನೀವು ಕ್ರಿಶ್ಚಿಯನ್ ಎಂದು ಯಾರು ಹೇಳಿದರೂ ಎಂದು!!ಯೋಚಿಸಲು ತೊಡಗಿದ ನಾನು ಹೇಳಿದೆ ಎಂದೂ ಜೀಸಸ್ ತಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡಿರಲಿಲ್ಲ ಅವರನ್ನು ಹಿಂಬಾಲಿಸಿದ ನೀವು ಒಂದು ಪಂಥವನ್ನು ಕಟ್ಟಿಕೊಂಡಿರಿ ಅಷ್ಟೇ ಎಂದೇ!!ಜೊತೆಗೆ ಒಂದು ವಿಚಿತ್ರವಾದ ಸಂಗತಿಯನ್ನು ಹೇಳಿದೆ "ನೋಡಿ ನಮ್ಮ ಧರ್ಮ ಗ್ರಂಥವೊಂದರಲ್ಲಿ ರಾತ್ರಿ "೦"ಘಂಟೆಯಲ್ಲಿ ನಾನು ಜನ್ಮ ತೆಗೆದುಕೊಳ್ಳುತ್ತೇನೆ ಎಂದು ಪರಮಾತ್ಮ ಹೇಳಿರುತ್ತಾನೆ!! ಒಂದು ಸೆಕೆಂಡ್ ಕೂಡ ಹೆಚ್ಚು ಕಡಿಮೆ ಇಲ್ಲದಂತೆ ೧೨ ಘಂಟೆಗೆ ಮಧ್ಯರಾತ್ರಿ ಯಾರೂ ಹುಟ್ಟುವುದಿಲ್ಲ ಅದು ಪರಮಾತ್ಮನ ಜನ್ಮ ಸಮಯ ಹಾಗಾಗಿ ನಿಮ್ಮ ಜೀಸಸ್ ಹುಟ್ಟಿದ್ದು ಆ ಸಮಯದಲ್ಲಿ ನಾನು ಅವರನ್ನು ಪರಮಾತ್ಮನ ಒಂದು ಅವತಾರ ಎಂದು ಪರಿಗಣಿಸುತ್ತೇನೆ ಏಕೆಂದರೆ ಆತ ಯುಗಪುರುಷ ಹೌದು!!ಹಾಗೆಂದು ನನಗೆ ಕ್ರಿಶ್ಚಿಯಾನಿಟಿಗಾಗಲೀ ಅಥವಾ ಯಾವುದೇ ಪಂಥಕ್ಕಾಗಲೀ ಸೇರುವ ಅವಶ್ಯಕತೆ ಇಲ್ಲ!!ಎಲ್ಲಾ ಮತ ಧರ್ಮಗಳ ಸಾರವನ್ನು ತಿಳಿದು ಅದಕ್ಕಿಂತ ಮೇಲಿನದನ್ನು ತಿಳಿಯಲು ಪ್ರಯತ್ನಿಸಬೇಕೇ ಹೊರೆತು ಧರ್ಮ ಮತಗಳಿಗೆ ಜೋತು ಬಿದ್ದು ಒದ್ದಾಡಬಾರದೂ!!ಎಂದೆ ಒಪ್ಪಿಕೊಂಡ!!!
---------------------------
ನನ್ನನ್ನು ನೀವು ಭ್ರಾಮ್ಮಣ ದ್ವೆಷಿಯೇ ಎಂದು ಬಹಳ ಜನ ಕೇಳಿದ್ದರು!! ನಾನು ಭ್ರಾಮ್ಮಣ ಎನ್ನುವುದನ್ನು ಏನೂ ತಿಳಿಯದವರು ಅದನ್ನು ಒಂದು ಜಾತಿ ಎಂದು ತಿಳಿದು ನಾವೇ ಶ್ರೇಷ್ಟರು ಎಂದು ತಿಳಿದುಕೊಂಡಿದ್ದರೆ ಖಂಡಿತಾ ನಾನು ಅದರ ದ್ವೇಷಿ ಹೌದು ಎಂದಿದ್ದೆ!!!ಆದರೆ "ಭ್ರಾಮ್ಮಣ"ಎನ್ನುವುದು ಒಂದು ಜಾತಿಯಲ್ಲ ಅದು ಒಂದು ತತ್ವ "ಭ್ರಾಮ್ಮಣತ್ವ"ಎನ್ನುವುದು ಒಂದು ಪದವಿ!! ಅದನ್ನು ಕ್ಷತ್ರಿಯ ನಾಗಿದ್ದ ವಿಶ್ವಾಮಿತ್ರ ಪಡೆದುಕೊಂಡು ಮಹಾ "ಭ್ರಾಮ್ಮಣ"ಎಂಬುದಾಗಿ ಮಹಾನ್ ತಪಿಸ್ವಿಗಳಾದ ವಸಿಷ್ಟರಿಂದಲೇ ಕರೆಯಲ್ಪಟ್ಟ ಏಕೆಂದರೆ ಅದು ಭುದ್ಧಿ ಪಕ್ವತೆಯಿಂದ ಸಾಧಿಸಲ್ಪಡುವ ಒಂದು ಪದವಿ ಅಥವ ಭುದ್ದಿ ಸ್ತರ!!!ಯಾರು ಬೇಕಾದರೂ ಆ ಮಟ್ಟ ತಲುಪಬಹುದು ಎನ್ನುವುದಕ್ಕೆ ಇದಕ್ಕಿಂತಾ ಒಳ್ಳೆಯ ಉದಾಹರಣೆ ಏನು ಬೇಕು??!!!ಅದನ್ನು ಒಂದು ಜಾತಿಯನ್ನಾಗಿ ಮಾಡಿ ಬೇರೆಯವರನ್ನೆಲ್ಲಾ ಕೀಳು ಎಂಬ ದ್ರುಷ್ಟಿಯಿಂದಾ ನೋಡುವುದಕ್ಕೆ ನನ್ನ ಧಿಕ್ಕಾರವಿದೆ!!
----------------------
ಹೆಂಗಸರನ್ನು ಬಿಟ್ಟು ಏನಾದರೂ ಇದೆಯೇ ಈ ಪ್ರಪಂಚದಲ್ಲಿ??!!ಯಾವುದನ್ನೇ ಮಾಡುವುದಿದ್ದರೂ ಕೂಡ ಅದರ ಹಿಂದೆ ಮಹಿಳೆಯರು ಇರಲೇ ಬೇಕು!! ಅವರಿಲ್ಲದೆ ಮನೆಯಾಗುವುದಿಲ್ಲ!! ಅವರಿಲ್ಲದೆ ಸಮಾಜ ದೇಶ ಯಾವುದೂ ನಿರ್ಮಾಣವಾಗುವುದಿಲ್ಲ!! ಅವರಿಲ್ಲದಿದ್ದರೆ ಸಂಸ್ಕಾರ ಸಂಸ್ಕೃತಿ ಬೆಳೆಯುವುದಿಲ್ಲ!! ಅಷ್ಟೇಕೆ ಅವರಿಲ್ಲದಿದ್ದರೆ ಒಬ್ಬನನ್ನ ಸಮಾಜ ಸಂಸಾರಿ ಎಂದು ಕರೆಯುವುದೇ ಇಲ್ಲ!!ಅಂದಮೇಲೆ ಅವರೇ ಎಲ್ಲವೂ ತಾನೇ??!!ಹೌದು ಪ್ರಕೃತಿ ಸಹಜವಾಗಿ ಕೆಲವು ಇತಿಮಿತಿಗಳು ಮಹಿಳೆಗೆ ಇರಬಹುದು!! ಆದರೆ ಒಂದು ಮನೆಯಿಂದ ಒಂದು ದೇಶದವರೆಗೆ ಬೆಂಗಾವಲಾಗಿ ಇರುವವಳೇ ಹೆಣ್ಣು!!! ಪುರುಷ ಪ್ರಧಾನ ಎನ್ನುವುದು ಹೆಸರಿಗೆ ಮಾತ್ರಾ !!ಎಲ್ಲಾ ಸುoದರವಾದ ಪವಿತ್ರವಾದ ಅಷ್ಟೇಕೆ ಬದುಕುವ ಭೂಮಿ ಜೀವನಾಡಿಯಾದ ನೀರನ್ನು ಕೂಡ ನಾವು ಮಹಿಳೆಯರ ದೃಷ್ಟಿಯಲ್ಲಿ ಪವಿತ್ರವಾಗಿ!! ನೋಡುತ್ತೇವೆ ಯಾರದೇ ಮನೆಗೆ ಹೋದರು ಬರುವಾಗ ಪುರುಷರಿಗೆ ಬರೀ ಕೈ ಬೀಸಿ ಹೋಗಿಬನ್ನಿ ಎಂದರೆ ಮಹಿಳೆಯರಿಗೆ ಹೂ ಕುಂಕುಮ ಕೊಟ್ಟು ಗೌರವವಾಗಿ ಕಳಿಸಿಕೊಡುತ್ತಾರೆ!! ಈಗ ಹೇಳಿ ಇದು ಪುರುಷ ಪ್ರಧಾನವೋ ಸ್ತ್ರೀ ಪ್ರಧಾನವೋ??ಖಂಡಿತ ಮಳೆಯರು ಮೀಸಲಾತಿಗಾಗಿ ಹೋರಾಡುವುದು ಬೇಡ!! ಇಡೀ ದೇಶವೇ ನಿಮ್ಮದು ಅದನ್ನು ನೀವು ತೆಗೆದುಕೊಳ್ಳಬೇಕು ಅಷ್ಟೇ!! ಇಡೀ ಪುರುಷ ಸಮುದಾಯವೇ ನಿಮ್ಮ ಮುಷ್ಟಿಯಲ್ಲಿದೆ!!!ಅಷ್ಟೇಕೆ ಪುರುಷರು ಮಾಡುವ ಎಲ್ಲಾ ಸಾಧನೆ ಸಂಪಾದನೆ ಸ್ಥಾನ ಮಾನ ಪ್ರತಿಷ್ಠೆ ಯಾರಿಗಾಗಿ??!! ಯುದ್ಧಗಳು ನಡೆಯುವುದು ಯಾರಿಗಾಗಿ??!! ಎಲ್ಲವೂ ನಿಮಗಾಗಿ ನೀವೇ ಎಲ್ಲವೂ ಆಗಿದ್ದೀರಿ!!
----------------------------


ಈ ಮೇಲಿನವು ಗಳು ಕೆಲ ಸ್ಯಾಂಪಲ್ ಗಳು ಮಾತ್ರ, ಆ ಗುಂಪಿಗೆ ಸದಸ್ಯರಾದರೆ ಅಲ್ಲಿ ಇನ್ನು ರಸದೌತಣವನ್ನು ಸವಿಯಬಹುದು.
ಇನ್ನು
 ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!
ಯ ವಿಚಾರಕ್ಕೆ ಬಂದರೆ ಆ ಗುಂಪಿನ ಉದ್ದೇಶ ಇಷ್ಟು ಸರಳ "ಸ್ನೇಹಿತರೆ ಬನ್ನಿ ವಿಚಾರ ಮಾಡೋಣ ಕಲಿಯೋಣ ಕಲಿಸೋಣ!!!"
ಖಂಡಿತ ಅಷ್ಟು ಸರಳವಿಲ್ಲ ಅಲ್ಲಿರುವ ಪೋಸ್ಟ್ ಗಳನ್ನು ನೋಡಿದರೆ....... ಗುಂಪಿನ ಸದಸ್ಯರು ಅವರ ಕೈ ಜೋಡಿಸಿ ಅವರ ಉದ್ದೇಶವನ್ನು ಸಾರ್ಥಕ ಗೊಳಿಸುತಿದ್ದಾರೆ

ಯಾರಾದರೂ ದೇಹವನ್ನು ತ್ಯಾಗಮಾಡಿದಾಗ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಹಾರೈಸುತ್ತಾರೆ!!!ಇದು ಎಂಥ ಅಪಭ್ರಂಶ!!ಆತ್ಮ ಎಂದೆಂದಿಗೂ ಶಾಂತವೇ ಅದು ಎಂದಿಗೂ ಅಶಾಂತ ಗೊಳ್ಳಲು ಸಾಧ್ಯವೇ ಇಲ್ಲ!!ಅಶಾಂತಿ ಗೊಳ್ಳುವುದು ಮನಸ್ಸು,ಬುದ್ಧಿ!! ಅದು ದೇಹದ ಅಂಗಗಳ ಮುಖಾಂತರವಾಗಿ ವ್ಯಕ್ತವಾಗುವ ಅಂಶಗಳೇ ಹೊರೆತು ಅದಕ್ಕೂ ಆತ್ಮಕ್ಕೂ ಸಂಬಂಧ ಇಲ್ಲ!!!ಆತ್ಮ ದೇಹವನ್ನು ಬಿಟ್ಟಾಗ ಮನಸ್ಸು,ಬುದ್ಧಿ, ಹೊರೆತು ಪಡಿಸಲ್ಪಟ್ಟಿರುತ್ತದೇ!!ಬುದ್ಧಿ ಮನಸ್ಸು ಇವೆಲ್ಲವೂ ಆತ್ಮದ ಶಕ್ತಿ ಇಂದ್ರಿಯಗಳಲ್ಲಿ ಹರಿದಾಗ ಉಂಟಾಗುವ ಅನುಭೂತಿಗಳು!!! ಹಾಗಾಗಿ ಆತ್ಮಕ್ಕೆ ಯಾರೂ ಶಾಂತಿ ಕೋರುವ ಮೂರ್ಖತನ ಮಾಡಬೇಡಿ!!!!
----------------------------
"ಧರ್ಮ ಶಾಸ್ತ್ರಗಳ ಉದ್ದೇಶ"
ಆತ್ಮ ಸರ್ವ ಜ್ಞಾನಿಯೂ ಸರ್ವ ವ್ಯಾಪಿಯೂ ಆಗಿರುತ್ತದೆ!! ಅದಕ್ಕೆ ಶಾಂತಿ ಸುಖ ದುಃಖ ದ್ವೇಷ ದುಮ್ಮಾನ ಕೋಪ ತಾಪ ಸಹನೆ!! ಎಂಬಾ ಯಾವುದೇ ಕಲ್ಮಶಗಳೂ ಇರದ ಪರಿಶುದ್ಧವಾಗಿರುವ ಒಂದು ಚೇತನ!! ನಾವು ಹೇಳುವ ಅರಿಷ್ದ್ ವೈರಿಗಳ ಯಾವುದೇ ಸೋಂಕು ಅದಕ್ಕೆ ಇರುವುದಿಲ್ಲ!! ಆದ್ದರಿಂದಲೇ ಅದನ್ನು ಅರ್ಥ ಮಾಡಿಕೊಳ್ಳುವುದೇ ಅದರ ಜ್ಞಾನ ವಾಗುವುದೇ ಪರಮ ಗುರಿ ಎಂದು ಎಲ್ಲಾ ಧರ್ಮಗಳೂ ಸಾರುತ್ತವೆ!!ಆದ್ದರಿಂದಲೇ ಆತ್ಮ ಸಾಕ್ಷಾತ್ಕಾರ ಎನ್ನುವುದಕ್ಕೆ ಮಹತ್ವ ಇದೆ ಆತ್ಮಸಾಕ್ಷಾತ್ಕಾರದ ಹೊರೆತಾಗಿ ಯಾವುದೇ ಕರ್ತವ್ಯವೂ ಇಲ್ಲ ಎಂಬುದಾಗಿ ಹೇಳಲ್ಪಟ್ಟಿದೆ!!!ಮುಕ್ತಿಯೇ ಆತ್ಮ ಸಾಕ್ಷಾತ್ಕಾರ!!!ಅಂದರೆ ನಮ್ಮ ಹುಡುಕುವಿಕೆ ಕೊನೆಯಲ್ಲಿ ಅಲ್ಲಿಯೇ ಪರ್ಯಾವಸಾನ ವಾಗುತ್ತದೆ!! ಅದೇ ಮೊದಲ ಹಾಗೂ ಕೊನೆಯ ಮಾರ್ಗವಾಗಿದೆ!! ಯಾರು ಏನೆ ಮಾಡಿದರೂ ಅದೇ ದಾರಿಯಲ್ಲಿಯಲ್ಲಿಯೇ ಅದಕ್ಕಾಗಿಯೇ ಮಾಡುತ್ತಿರುತ್ತಾರೆ!! ಕೊಲೆ ಸುಲಿಗೆ ದರೋಡೆ ದುಡ್ಡು ಐಶಾರಮಿ ಜೀವನ ಯಾವುದನ್ನೇ ಮಾಡುವವರೂ ಕೂಡ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದನ್ನೇ ಹುಡುಕುತ್ತಿರುತ್ತಾರೆ!!ಜ್ನಾನಿಯಾದವನು!!ಅದನ್ನು ಬಹಳ ಸುಲಭವಾದ ಮತ್ತು ಅತಿ ಹತ್ತಿರದ ಮಾರ್ಗದಿಂದಾ ಅದನ್ನು ಹುಡುಕಿ ಬಹಳ ಬೇಗ ಸೇರುತ್ತಾನೆ!! ಅಂಕುಡೊಂಕುಇಲ್ಲದ ನೇರವಾಗಿ ಹರಿಯುವ ನದಿಯಂತೆ!! ಉಳಿದವರು ಹಲವಾರು ತಿರುವುಗಳನ್ನು ಒಮ್ಮೊಮ್ಮೆ ಕೆರೆಯಾಗಿ ಯುಗಗಟ್ಟಲೇ ನಿಂತು ಅಲ್ಲಿಂದಲೂ ಆವಿಯಾಗಿ ಮತ್ತೆ ನದಿಯಾಗಿ ಹರಿದು ಸೇರಬೇಕಾಗುತ್ತದೆ!!!ಆದರೆ ಎಲ್ಲಾರ ದಾರಿಯೂ ಗುರಿಯೂ ಒಂದೇ ಆಗಿರುತ್ತದೆ ಕಲ್ಮಶಗಳನ್ನೂ ಹೊತ್ತು ಕೆಟ್ಟ ಕೆಲಸಗಳನ್ನು ಮಾಡಿ ಮತ್ತೆ ಮತ್ತೆ ಹುಟ್ಟಿ ಬವಣೆ ಪಡದೆ ಇರಲಿ ಎಂದೇ ಧರ್ಮ ಶಾಸ್ತ್ರಗಳು ಒಳ್ಳೆಯ ಮಾರ್ಗಗಳನ್ನು ಉಪದೆಶಿಸುತ್ತೇವೆ ಅಷ್ಟೇ!!!! ಇದೇ "ಧರ್ಮ ಶಾಸ್ತ್ರಗಳ ಉದ್ದೇಶ" !!!
-----------------------
‎= ಪ್ರಾಣಿಬಲಿ =


ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ, ಇದು ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸವೆನಿಸುತ್ತದೆ.
ಹಲವು ವಿಪರ್ಯಾಸಗಳ ನಡುವೆ ನಾವು ಇರುವುದೂ ಯೋಚನೆ ಮಾಡುವುದೇ ಜೀವನ!!!ಜೀವನ ಶೈಲಿ ಅನ್ನುವುದು ಕಾಲ ದೇಶ ವರ್ತಮಾನಕ್ಕೆ ಭೂಮಿಯ ವಾತಾವರಣದ ಗುಣಧರ್ಮದ ಮೇಲೆ ಬೇರೆ ಬೇರೆ ಯಾಗಿರುತ್ತದೆ!!!
-------------
ವೇದಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ!! ವೇದ ಮಂತ್ರಗಳಲ್ಲಿ ಎಲ್ಲೂ ದೇವರ ಪೂಜಾವಿಧಾನವನ್ನು ಹೇಳಿರುವುದಿಲ್ಲ!! ಕೆಲವು ದೇವತೆಗಳ ಹೆಸರುಗಳನ್ನೂ ಋಷಿಮುನಿಗಳು ಕಲ್ಪಿಸಿಕೊಂಡು ಮಾಡಿದ ತಪಸ್ಸಿನಿಂದಾ ಈ ಮಂತ್ರವನ್ನು ಕಾಣಲಾಯಿತು ಎಂದು ನಮೂದಿಸಲ್ಪಟ್ಟಿದೆಯೇ ಹೊರೆತು ವೇದ ಮಂತ್ರಗಳು ಪೂಜಾ ವಿಧಾನವನ್ನಾಗಲೀ ಅಥವಾ ದೇವರ ಬಗ್ಗೆ ಯಾವುದೇ ರೂಪದ ಕಲ್ಪನೆಯನ್ನಾಗಲೀ ಕೊಟ್ಟಿಲ್ಲ!! ಅಲ್ಲಿ ಕೇವಲ ಕೆಲವು ಮಂತ್ರಗಳು ಕಾಣಲ್ಪಟ್ಟಿವೆ(ಅವುಗಳು ಯಾರಿಂದಲೂ ಬರೆಯಲ್ಪಟ್ಟಿಲ್ಲ)ಹಾಗೂ ಆ ಮತ್ರಗಳನ್ನು ಕಂಡವರಿಗೂ(ಯಾರ ಬಾಯಿಂದ ಬಂದಿದೆಯೋ)ಅವರಿಗೂ ಕೂಡ ಅದರ ಅರಿವು ಇರುತ್ತಿರಲಿಲ್ಲ!! ಅಂಥಹ ಸ್ಥಿತಿಗೆ ಅವರು ಹೋದಾಗಲೇ ಅವು ಅವರ ಬಾಯಿಂದಾ ಬರುತ್ತಿದ್ದವು(ಸಮಾಧಿ ಸ್ತಿತಿ)!!ಅದನ್ನ ಮತ್ತೊಬ್ಬರು ತಿಳಿದು ಬರೆದುಕೊಳ್ಳಬೇಕಾಗಿತ್ತು!!ಅಂತ ಒಂದು ಕಾಲವೇ ವೇದ ಕಾಲವಾಗಿತ್ತು!!ಯಾವ ಸಂಕಲ್ಪ ಅಥವ ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೋ ಅದರ ಬಗ್ಗೆ ಸಂಕಲ್ಪ ಮಾಡಿ ಧ್ಯಾನದ ಸ್ಥಿತಿಯಲ್ಲಿ ಕುಳಿತಾಗ ಅವರು ಸಮಾಧಿ ಸ್ತಿತಿಗೆ ಹೋದಾಗ ಅವರ ಬಾಯಿಯಿಂದಾ ಬಂದಂತಹುದೇ ವೇದ ಮಂತ್ರ!!! ಅದು ಈ ನಮ್ಮ ಸಂಸ್ಕೃತದ ಅರ್ಥಕ್ಕೆ ಕೂಡ ಸಿಗುವುದಿಲ್ಲ!! ಅದನ್ನು ನಮಗೆ ಈಗ ಗೊತ್ತಿರುವ ಸಂಸ್ಕೃತದಿಂದ ವೇದ ಮಂತ್ರದ ಅರ್ಥ ಇಷ್ಟೇ ಹೀಗೆ ಎಂದು ಹೇಳಲು ಆಗುವುದಿಲ್ಲ!!ಅದನ್ನು ಜಪಿಸಿಯೇ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕಾಗುತ್ತದೆ!!ಹಾಗೆ ಅದನ್ನು ಜಪಿಸಿ ತಿಳಿದುಕೊಂಡವರು ಮಾತ್ರಾ ಈ ಮಂತ್ರ ಇದಕ್ಕಾಗಿ ಎಂದು ಹೇಳಲು ಸಾಧ್ಯ !!ನಮ್ಮಲ್ಲಿಯ ಯಾವ ವಿಧ್ವಾಂಸರಿಗೂ ಅದನ್ನು ಅರ್ಥೈಸಲು ಆಗುವುದಿಲ್ಲ!!ನಮ್ಮಲ್ಲಿಯ ಕೆಲವು ಕರ್ಮಠ ಬ್ರಾಹ್ಮಣರು ತಮ್ಮ ಉನ್ನತ ಸ್ಥಾನಕ್ಕಾಗಿ ಅದನ್ನು ಉಳಿಸಿಕೊಳ್ಳುವ ಸಲುವಾಗಿ ತಾವು ವೇದ ಬಲ್ಲವರೂ ಎಂಬುದಾಗಿ ಹೇಳಿಕೊಳ್ಳುತ್ತಾರೆ!!ಅದನ್ನು ಬಾಯಿಪಾಠ ಮಾಡಿದ ಮಾತ್ರಕ್ಕೆ ಯಾರೂ ಬ್ರಹ್ಮ್ಮಜ್ನಾನಿ ಯಾಗುವುದಿಲ್ಲ!!ಹೌದು ಅದರ ಶುದ್ಧವಾದ ಹಾಗೂ ನಿರಂತರ ಪಟನೆ ಯಿಂದಾ ಸಿದ್ಧಿಯನ್ನು ಹೊಂದಬಹುದಾಗಿದೆ ಅಷ್ಟೇ!!ಆದರೆ ಅದರ ಹೆಸರಿನಲ್ಲಿ ಬೇರೆ ಕೆಲಸವನ್ನು ಮಾಡುತ್ತಿರುವುದೆಲ್ಲವೂ ಅವರ ಸ್ವಾರ್ಥಕ್ಕಾಗಿಯೇ ಹೊರೆತು ಬೇರೆ ಇನ್ನೇನೂ ಅಲ್ಲ ವೇದದ ಹೆಸರನ್ನು ಹೇಳಿ ದಾರಿತಪ್ಪಿಸುತ್ತಿರುವುದೇ ನಮ್ಮ ಅರ್ಚಕರ ಕರ್ಮಖಾಂಡ!!!ಇದನ್ನು ಎದುರಿಸುವ ಹಾಗು ಸುಳ್ಳು ಎಂದು ಸಮಥಿಸುವ ಎದೆಗಾರಿಕೆ ಯಾವುದಾದರೂ ವಿಧ್ವಾಮ್ಸರಿಗೆ ಇದ್ದರೆ ನನಗೆ ಆಹ್ವಾನ ನೀಡಬಹುದು ಎದುರಿಸಲು ಸಿದ್ಧ!!!
--------------------
ದೇವರು ಜ್ಯೋತಿಷ್ಯ ಶಾಸ್ತ್ರ ಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೊಳ್ಳುವುದು ಒಂದು ಹಿರಿಮೆ ಒಂದು ದೊಡ್ಡಸ್ತಿಕೆ ಎಂದು ನಾನೂ ತಿಳಿದುಕೊಂಡಿದ್ದೆ!! ಹಾಗೆ ಸ್ವಲ್ಪ ಗಡ್ಡ ಬಿಟ್ಟು ಒಂದು ಜೋಳಿಗೆ ಹಾಕಿ ಅರ್ಥವಾಗದ ಶಬ್ಧಗಳಲ್ಲಿ(ಅಂದು ಸುಜಾತ ರವರು ಹೇಳಿದಂತೆ)ಒಬ್ಬ ಸಾಹಿತಿ ಬರೆದಿದ್ದನ್ನು ಮತ್ತೊಬ್ಬ ಸಾಹಿತಿ ಕೆದರುವಂತೆ(ಒಂದು ಎಮ್ಮೆ ಹಾಕಿದ ಸಗಣಿಯಲ್ಲಿಯ ಹುಳುಗಳಿಗಾಗಿ ಕೋಳಿ ಆ ಸಗಣಿಯನ್ನು ಕೆದರುವಂತೆ)ಮಾಡಿ ಅದನ್ನೇ ಒಂದು ದೊಡ್ಡ ವಿಮರ್ಶೆ ನಾವು ಸಮಾಜವನ್ನು ವುದ್ಧರಿಸಿದಂತೆ (ಅವರವರೆ ಒಬ್ಬರನ್ನೊಬ್ಬರು ಹೊಗಳಿಕೊಂಡು ಒಂದು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ತಾವೇ ಸಮಾಜ ವುದ್ದಾರಮಾಡಿದಂತೆ ಕನಸು ಕಂಡು)ಪೋಸು ಬಿಗಿದುಕೊಂಡರೆ !!!ಒಂದು ದೊಡ್ಡ ಪ್ರಶಸ್ತಿ ಪಡೆದುಕೊಂಡರೆ ಬುದ್ದಿಜೀವಿ!!ಎಂದು ಎಲ್ಲಾರೂ ಕರೆಯುತ್ತಾರೆ ಎಂದು ನಾನೂ ತಿಳಿದುಕೊಂಡಿದ್ದೆ ಆದರೆ ಏನು ಮಾಡುವುದೂ!!!ಯಾವುದೂ ಆಗಲಿಲ್ಲ!!!ಈಗ ಅದು ಆಗದಿದ್ದಿದ್ದಕ್ಕಾಗಿ ಪಶ್ಚಾತ್ತಾಪವಿಲ್ಲ ಹೆಮ್ಮೆ ಪಡುತ್ತೇನೆ!!!
--------------------
ಈ ಪ್ರಪಂಚಕ್ಕೆ ಶಾಶ್ವತವಾದ ಉಪಕಾರವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದು ವಿವೇಕಾನಂದರು ಹೇಳಿದ್ದರು!!ಏಕೆಂದರೆ ಯಾವುದನ್ನೇ ಮಾಡಿದರೂ ಕಾಲಕ್ರಮೇಣ ಬದಲಾಗುವುದೇ ಪ್ರಪಂಚದ ನಿಯಮ ಎಂಬ ಅರ್ಥದಿಂದಾ!!ಅದು ಸಾರ್ವತ್ರಿಕವಾಗಿ ಎಂದೆಂದಿಗೂ ಸ್ವೀಕರಿಸಲ್ಪಟ್ಟಿತು!! ಏಕೆಂದರೆ ಅವರ ನುಡಿ ಎಂದಿಗೂ ವಿವಾದಾತ್ಮಕವಾಗಿ ಆಗಲೇ ಇಲ್ಲ ಅದಕ್ಕೆ ಕಾರಣ ಅವರ ಆಧ್ಯಾತ್ಮಿಕ ನಿಲುವು!! ಗಾಂಧೀಜಿ ಕೂಡ ಮಹಾತ್ಮರೇ ಅವರು ಸತ್ಯ,ನಿಷ್ಠೆ,ಪ್ರಾಮಾಣಿಕತೆ,ಸರಳತೆ,ನಿರಪೇಕ್ಷತೆ ಯಿಂದಾ ಯೋಗಿಯಾದವರೂ!!ಆದರೆ ಕೆಲವರ ದೃಷ್ಟಿಯಲ್ಲಿ ಅವರು ಇಂದಿಗೂ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ!! ಏಕೆಂದರೆ ಅವರು ರಾಜಕೀಯ ಎಂಬ ಅಮೆಧ್ಯವನ್ನು ಅವರಿಗೆ ಗೊತ್ತಾಗದಂತೆ ತುಳಿದುಬಿಟ್ಟಿದ್ದರು!!!ಅಥವ ಅದು ಅವರಕಾಲಿಗೆ ಮೆತ್ತಿಕೊಂಡು ಬಿಟ್ಟಿತ್ತು!!!ಎಷ್ಟೇ ಮಹಾತ್ಮರು ರಾಜಕೀಯ ಮಾಡಿದರೂ ಅಲ್ಲಿ ಪರ ವಿರೋಧ ಎಂಬುದು ಇರುವುದೇ ಅದಕ್ಕೆ ಕಾರಣ!!!
--------------------
ಪರಿಹಾರವಿಲ್ಲದ ಸಮಸ್ಯೆಗಳು ಎಂಬುದು ಇಲ್ಲ ದೇವರು ಯಾವುದಾದರೂ ಒಂದು ದಾರಿಯನ್ನು ಇಟ್ಟೇ ಇಟ್ಟಿರುತ್ತಾನೆ!!ಆದರೆ ಮನಸ್ಸಿನ ದುಗುಡದಲ್ಲಿ ಅದು ಕಾಣುವುದಿಲ್ಲ!!ತಾಳ್ಮೆಯಿಂದಾ ಹುಡುಕಬೇಕಾಗುತ್ತದೆ!!ಆದರೆ ಯಾವುದೇ ಬಾಗಿಲನ್ನೂ ಯಾವುದೇ ಬೇರೆ ದಾರಿಯನ್ನೂ ಇಡದೆ ಇರುವುದು ಸಾವಿನ ಸಮಯದಲ್ಲಿ ಮಾತ್ರಾ !!
----------------------
ಏಕಾಗ್ರತೆ ಅನ್ನುವುದೇ ಒಂದು ಅತಿ ಸೂಕ್ಷ್ಮವಾದ ವಿಚಾರ!!!ಏಕೆಂದರೆ ಯಾವುದೋ ಒಂದು ವಸ್ತುವಿನಲ್ಲಿ ಅಥವಾ ವಿಷಯದಲ್ಲಿ ನಾವು ಗಮನವಿಡಲು ಪ್ರಾರಂಭಿಸಿದ ಕೂಡಲೇ ಅದನ್ನು ನಮ್ಮ ನನಸ್ಸು ಸಹಿಸುವುದಿಲ್ಲ!!ಯಾವುದೇ ವಿಷಯದಲ್ಲಿಯೂ ಕೂಡ ಹೀಗೆ ಆಗುತ್ತದೆ!!ಏಕೆಂದರೆ ಮನಸ್ಸು ಇಂದ್ರಿಯಾಧೀನ ಇಂದ್ರಿಯಗಳು ಮನಸ್ಸಿನ ಅಧೀನ!!ಇಲ್ಲಿ ಮನಸ್ಸು ಬೇರೆ ಬೇರೆ ಇಂದ್ರಿಯಗಳ ಮೂಲಕ ಬೇರೆ ಬೇರೆ ಅನುಭವಗಳನ್ನು ಪಡೆಯುತ್ತಲೇ ಇರುತ್ತದೆ ದೃಶ್ಯ ಸ್ಪರ್ಶ ವಾಸನೆ ರುಚಿ ಶಭ್ದ ಹೀಗೆ!!ನಮ್ಮ ಬುದ್ಧಿಯಿಂದಾ ಯಾವುದೇ ವಿಷಯದಲ್ಲಿ ಏಕಾಗ್ರತೆ ವಹಿಸಲು ಪ್ರಯತ್ನಿಸಿದರೆ ಆಗ ಇಂದ್ರಿಯಗಳಲ್ಲಿಯ ಮನಸ್ಸಿನ ಶಕ್ತಿಯ ಪ್ರವಾಹ ವಿರುದ್ಧ ದಿಕ್ಕಿನಲ್ಲಿ ಅಥವ ಅಂತರ್ಮುಖಿ ಯಾಗತೊಡಗಿದಾಗ ಮನಸ್ಸಿನ ಹರಿಯುವಿಕೆ ತಡೆಯಲ್ಪಟ್ಟು ಆಣೆಕಟ್ಟು ಹಾಕಿ ನಿಲ್ಲಿಸಿದ ನೀರಿನಂತೆ ಆಗಿ ಇಂದ್ರಿಯಗಳ ಅಥವ ಬುದ್ಧಿಯ ಮೇಲೆ ಒತ್ತಡ ಹಾಕಲ್ಪಡುತ್ತದೆ!!ಆ ಒತ್ತಡದಿಂದಾ ಮತ್ತೆ ಏಕಾಗ್ರತೆ ಭಂಗಗೊಂಡು ಚಂಚಲತೆ ಏರ್ಪಡುತ್ತದೆ!!ಅದನ್ನು ಕಟ್ಟಿಹಾಕಲು ನಿಗ್ರಹಿಸಲು ಬಹಳ ಅಭ್ಯಾಸ ಬೇಕು ಒಮ್ಮೆಲೇ ಕಟ್ಟಿಹಾಕಲು ಕಷ್ಟ ವಾಗುತ್ತದೆ!!!
----------------------
ಕಲ್ಲು ಮುಳ್ಳುಗಳ ಹಾದಿ!!ಏಳು ಬೀಳುಗಳ ಹಾದಿ!!ಕಷ್ಟ ಸುಖಗಳ ಹಾದಿ!!ಈದರಲ್ಲಿ ಜೊತೆಯಾಗಿ ಧೀರ್ಘವಾದ ಹಾದಿಯಲ್ಲಿ ಒಬ್ಬರಿಗಿಬ್ಬರು ಸಹಾಯ ಮಾಡುತ್ತಾ ಸಾಗಿದಾಗ ಪ್ರಯಾಣದ ಕೊನೆಯ ಘಟ್ಟ ತಲುಪಿದಾಗ ಅಲ್ಲಿ ಬರೀ ಕಣ್ಣಿನ ನೋಟಗಳೆ ಭಾಷೆಗಿನ್ತಾ ಜಾಸ್ತಿ ಸುಖವೆನ್ನಿಸುತ್ತದೆ!!ಭಾಷೆಯೂ ಬೇಕೆನಿಸುವುದಿಲ್ಲ!!ಮೌನವೇ ಹಿತವಾದ ಭಾಷೆಯಾಗಿರುತ್ತದೆ!!ಬಿಟ್ಟಿರಲಾರದಷ್ಟು ಅದೇನೋ ಆತ್ಮೀಯತೆ!!ಕಷ್ಟಗಳ ದಾರಿಯಲ್ಲಿ ನಡೆಸಿಕೊಂಡು ಬಂದೆನಲ್ಲ!! ಎಂದು ಒಬ್ಬರಿಗೊಬ್ಬರು ಯೋಚಿಸುತ್ತಲೇ ಇರುತ್ತಾರೆ!!ಸಂಭಂದ ಗೌರವವಾಗಿ ಮಾರ್ಪಡುತ್ತದೆ!! ಹೇಳಲಾರದಾ ತಾಳಲಾರದ ವೆದನೆಯಾದರೂ ಸಿಹಿಯಾಗಿರುತ್ತದೆ!!ಶುದ್ಧವಾದ ನಿಷ್ಕಳಂಕ ನಿರಪೆಕ್ಷಿತ ಪ್ರೇಮ ವಾಗಿ ಮಾರ್ಪಡುತ್ತದೆ!!ಸುಧೀರ್ಘವಾದ ಕಷ್ಟಗಳ ಹಾದಿಯ ಪ್ರಯಾಣದ ನೆನಪು ವಿಶಾದವಾಗಿದ್ದರೂ ಜೊತೆಯಲ್ಲಿ ಸಂಗಾತಿ ಇದ್ದಾರೆ ಎಂಬ ನೆನಪೇ ಒಂದು ಅಹ್ಲ್ಲಾದಕರ ಅನುಭವ ಶಾಂತಿ ತಂದು ಜನ್ಮಜನ್ಮದಲ್ಲೂ ಜೊತೆಯಾಗಿ ಎಷ್ಟೇ ಕಷ್ಟ ಬಂದರೂ ಜೊತೆಯಾಗಿರಬೇಕು ಅನ್ನಿಸುತ್ತದೆ!! ಸೆಳೆತ ಮೂಡುತ್ತದೆ!! ಆದರೆ ಸ್ವಲ್ಪ ಸಮಯದಲ್ಲೇ ವಿಧಿ ಸಂಗಾತಿಯನ್ನು ತನ್ನ ತಕ್ಕೆಗೆ ತೆಗೆದುಕೊಂಡಾಗ!!ಕಲ್ಲುಮುಳ್ಳುಗಳ ದಾರಿಯಲ್ಲಿ ಕಷ್ಟಪಟ್ಟು ಸವೆಸಿದ ದಾರಿಯ ನೆನಪಿನಲ್ಲೇ ಉಳಿದ ಬದುಕು ಕಳೆಯುವುವ ಮನಸ್ಸು ಆಗ ಸುಖದ ಸುಪ್ಪತ್ತಿಗೆ ಸಿಕ್ಕರೂ ಅದರಬಗ್ಗೆ ವೈರಾಗ್ಯ ಹೊಂದುತ್ತದೆ!! ಸಂಗಾತಿಯ ಜೋತೆಯಾಗಿರುವಿಕೆಯ ನೆನಪೇ ಒಂದು ಧೀರ್ಘ ನಿಟ್ಟುಸಿರಾಗಿ ಹೊರಬರುತ್ತದೆ!! ಅದೇ ಸಾಕು ಅದೇ ಅಪ್ಪ್ಯಾಯಮಾನವಾಗಿ ಅನ್ನಿಸುತ್ತದೆ!! ಅಂತರ್ಮುಖಿಯಾಗುತ್ತೇವೆ!!!ಎಲ್ಲಾದರೂ ಒಮ್ಮೊಮ್ಮೆ ಕಣ್ಣು ತೇವವಾಗುವ ನೆನಪಿನೊಂದಿಗೆ!!ನಿರ್ಲಿಪ್ತತೆಯೇ ಸುಖ ಕೊಡುತ್ತದೆ!!!
-----------------
ರಕ್ತವನ್ನು ಪರಿಚಲನೆ ಮಾಡುವ ಅಂದವಾದ ಹೃದಯಕ್ಕೆ ಭಾವನೆಗಳನ್ನು ಅದರ ಉಗಮ ಹೃದಯ ವೆಂದು ಕರೆಯಲು ಕಾರಣವೇನು??!! ಪ್ರೀತಿ ಆತ್ಮೀಯತೆ ಹ್ರುದಯಪೂರ್ವಕವಾಗಿರಬೇಕೆಂದು ಯಾವದ್ರುಷ್ಟಿಯಿಂದಾ ಹೇಳುತ್ತಾರೆ??!! "ನಾನು" ಎಂದು ಹೇಳಿಕೊಳ್ಳುವಾಗ ಹೃದಯದ ಭಾಗವನ್ನು ಯಾಕೆ ಮುಟ್ಟಿ ತೋರಿಸುತ್ತಾರೆ??!! "ಹೃದಯಕ್ಕೆ ನೋವಾಗಿದೆ" ಎಂದು ಯಾಕೆ ಹೇಳುತ್ತಾರೆ??೧! ಆಘಾತವಾದಾಗ ಮೆದುಳು ಯಾಕೆ ನಿಲ್ಲದೆ ಹೃದಯಕ್ಕೆ ನೇರವಾಗಿ ತಟ್ಟುತ್ತದೆ??!!ಹೃದಯವನ್ನು ಭಾವಾನಾತ್ಮಕ ಸಂಧಗಳಿಗೆ ಏಕೆ ಜೋಡಿಸುತ್ತಾರೆ!!??ಉಳಿದ ಅಂಗಗಳಾದ ಕಿಡ್ನಿಗೋ ಮೂತ್ರಪಿನ್ದಕ್ಕೋ ಅಥವ ಯೆಕ್ರುತ್ತಿಗೋ ಮೆದುಳಿಗೋ ಅವುಗಳೊಂದಿಗೆ ಯಾಕೆ ಜೋಡಿಸುವುದಿಲ್ಲ ಕಲೆ ಸಾಹಿತ್ಯ ಸಂಗೀತ ಪ್ರೀತಿ ಪ್ರಣಯ ಇವೆಲ್ಲವುದರಲ್ಲೂ ಹೃದಯಕ್ಕೆ ಏಕೆ ಪ್ರಾಧಾನ್ಯತೆ ಕೊಡಲಾಗಿದೆ!!!???ಯಾರಾದರೂ ಇದರ ಬಗ್ಗೆ ಆಳವಾಗಿ ಯೋಚಿಸಿದ್ದೀರಾ?? ಚಿಂತನೆ ನಡೆಸಿದ್ದೀರ??ಹಾಗಾದರೆ ಅದರ ಬಗ್ಗೆ ನಾವು ಹೃದಯವನ್ನು ಕೆಡಿಸಿಕೊಳ್ಳದೆ,,,,,ತಲೆ ಕೆಡಿಸಿಕೊಳ್ಳೋಣವೇ???????!!!,,,,,,,,,
------------------------
ಸಾವಿರಾರು ಪುಸ್ತಕಗಳ ಅಧ್ಯಯನ ಕೂಡ ಓದುಗನನ್ನು ವಿಧ್ವಾಂಸನನ್ನಾಗಿ ಮಾಡಲಾರವೂ!!ಏಕೆಂದರೆ ಅಧ್ಯನದಿಂದ ದ್ವಂದ್ವ ಹೆಚ್ಚುತ್ತದೆ!!ತಾರ್ಕಿಕತೆ ಹೆಚ್ಚುತ್ತದೆ!!ಅದರಿಂದ ಮನಸ್ಸಿನ ಏಕಾಗ್ರತೆಗೆ ಭಂಗ ಉಂಟಾಗಿ ವಿಷಯಜ್ಞಾನ ಬರೀ ವೈಚಾರಿಕತೆಯಲ್ಲಿ ಸಿಲುಕಿ ಮತ್ತೆ ಚಂಚಲ ವಾಗುತ್ತದೆ!!ಮೂಲವನ್ನು ತಿಳಿಯುವ ಇಚ್ಛೆ ಇಲ್ಲದೆ ನೂರಾರು ಶಾಸ್ತ್ರಗ್ರಂಥಗಳನ್ನೂ ಅಭ್ಯಾಸ ಮಾಡುತ್ತಿದ್ದರೂ ಸಹ ಅಂತಹ ವ್ಯಾಸಂಗಕಾರನಿಗೆ ದೇವರ ನಿಜವಾದ ಅರಿವು ಉಂಟಾಗುವುದಿಲ್ಲ!!
----------------------
ನಾವು ಯಾವುದನ್ನು ವಾಸ್ತವಿಕತೆ ಎಂದುಕೊಂಡಿರುತ್ತೆವೋ ಅದೂ ಕೂಡ ಭ್ರಮೆಯೇ!!ಉದಾಹರಣೆಗೆ ನಾವು ಕನಸಿನಲ್ಲಿ ಅದನ್ನು ಕಾಣುವಷ್ಟು ಕಾಲ ಹೊರ ಪ್ರಪಂಚದ ಅರಿವು ಇರುದಿಲ್ಲ!! ಆ ಸಮಯದಲ್ಲಿ ಅದು ನಮಗೆ ವಾಸ್ತವವೇ!!ಕನಸಿನಲ್ಲಿ ಬಾಯಾರಿಕೆಯಾದರೆ ಕಲ್ಪನೆಯ ನೀರನ್ನು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತೇವೆ!!ಎಚ್ಚರಿಕೆಯಾದಾಗ ಮಾತ್ರವೇ ಅದು ಕನಸು ಎಂಬ ಅರಿವು ಆಗುತ್ತದೆ!! ಹಾಗೆಯೇ ನಿದ್ರೆ ಮಾಡಿರುವಾಗ ಹೊರಗಿನ ಪ್ರಪಂಚ ಯಾಕೆ ಗೋಚರಿಸುವುದಿಲ್ಲ??ಏಕೆಂದರೆ ಅಲ್ಲಿ ಎಚ್ಚರ ಎಂಬ ಭ್ರಮೆಯಿಂದ ನಾವು ನಿದ್ರೆ ಎಂಬ ಬ್ರಮೆಗೆ ಜಾರಿರುತ್ತೇವೆ!! ಪ್ರಪಂಚ ಸತ್ಯವಾದುದಾಗಿದ್ದರೆ ಅದು ಕನಸಿನಲ್ಲೂ ಇರುತ್ತಿತ್ತಲ್ಲವೇ!!ಹಾಗಾಗಿ ಮನಸ್ಸು ಯೆನ್ನುವುದರಿಂದಾ ಯಾವುದು ಅನುಭವಕ್ಕೆ ಬರುವುದೋ ಅವ್ಯಾವುದೂ ವಾಸ್ತವ ಅಲ್ಲ!!ಮನಸ್ಸು ಎನ್ನುವುದು ಚಂದ್ರನ ಬೆಳಕಿನಂತೆ ಅರಿವಿನ ಪ್ರತಿಫಲನ ಅದು ಸ್ವಯಂ ಪ್ರಭೆಯುಳ್ಳದ್ದಲ್ಲ!!!
---------------------
ಸಾವು ಎನ್ನುವುದು ಬಿಡುಗಡೆ ಈ ದೇಹದಿಂದಾ ಮತ್ತು ಅದು ಕೊನೆಯ ಅನುಭವ!ವಿದಾಯದಲ್ಲಿ ವಿದಾಯ ಹೇಳುವವರಿಗೆ ಇನೂ ಕೆಲವುದಿನ ನಮ್ಮಜೊತೆ ಇದ್ದಿದ್ದರೆ ಚೆನ್ನ ಎಂಬ ಆಸೆ ಸಹಜ ಆದರೆ!ಬಿಡುಗಡೆಯನ್ನು ಹೊದುವಂಥ ವ್ಯಕ್ತಿಯ ದೃಷ್ಟಿಯಲ್ಲಿ ಅದು ಸಂಪೂರ್ಣ ಸ್ವಾತಂತ್ರ!,,
-------------------------
ಸಂತೆಯೊಳಗೊಂದು ಮನೆ ಮಾಡಿ ಶಭ್ದಕ್ಕೆ ನಾಚಿದೊಡೆಂತಯ್ಯ ಎಂದು ಹೇಳಿರುವುದೂ ಅದಕ್ಕೆ!! 
ಮೊದಲು ಇದನ್ನೆಲ್ಲಾ ತಿಳಿದುಕೊಳ್ಳಲು ಸನ್ಯಾಸಿ ಆಗಬೇಕೆಂದು ಅನ್ನಿಸುತ್ತದೆ!! ಮನೆಯನ್ನು ಬಿಟ್ಟು ಕಾಡಿಗೆ ಅಥವ ಪ್ರಶಾಂತವಾದ ವಾತಾವರಣಕ್ಕೆ ಹೋಗಬೇಕೆನ್ನಿಸುತ್ತದೆ!! ಆದರೆ ಅದರಲ್ಲಿ ಆಗುವ ವ್ಯತ್ಯಾಸ ವೇನು? ಮನೆಯನ್ನು ಬಿಟ್ಟು ಕಾಡಿಗೆ ಹೋದರೆ ಮನೆಯ ಆವರಣದ ಬದಲಿಗೆ ಕಾಡಿನ ಆವರಣ ಇದೆ ಎನ್ನಿಸುತ್ತದೆ!! ಗೃಹಸ್ಥಾಶ್ರಮ ಬಿಟ್ಟು ಸನ್ಯಾಸಿಆದರೆ ಈಗ ನಾನು ಸನ್ಯಾಸಿಯೆನ್ನುವ ಹೊಸ ಭ್ರಮೆ ಆವರಿಸುತ್ತದೆ!! ಅಷ್ಟೇ ಅಲ್ಲವೇ?? ಇಲ್ಲಿ ಮನಸ್ಸೇ ತಡೆ ಆಗಿರುವುದು!! ಎಲ್ಲಿದ್ದರೂ ನಾನು ಎನ್ನುವುದು ಒಳಗಿನ ಆತ್ಮ ಎಂಬ ಅರಿವಿನೊಂದಿಗೆ! ಲೌಕಿಕವಾದ ಕೆಲಸಗಳನ್ನು ಮಾಡುತ್ತಲೇ ಇದಕ್ಕಾಗಿ ನನ್ನು ನಿಯೋಜಿಸಲ್ಪತ್ತಿದ್ದೇನೆ!! ಇದು ನನ್ನಿಂದ ಮಾಡಿಸಲ್ಪದುತ್ತಿದೆ!! ಎಂದು ಅದನ್ನು ದೇವರಿಗೆ ಬಿಟ್ಟು ನಿರಹಂಕಾರದಿಂದಾ ಇದ್ದರೆ ಎಲ್ಲವೂ ಸಿದ್ಧಿಸುತ್ತದೆ!!!
------------------------------







ಅರಿವು ಎಲ್ಲಿ ಇರುತ್ತದೋ ಅಲ್ಲಿ ಅಹಂಕಾರವಿರುದಿಲ್ಲ!!ಅಜ್ಞಾನ ಇರುವಲ್ಲಿ ಮಾತ್ರ ಅಹಂಕಾರವಿರುತ್ತೆ !!ಅಹಂಕಾರ ಇನ್ನೊದು ಅರ್ಥದಲ್ಲಿ ಲೌಕಿಕ ಅನುಭೂತಿ ಎಂತಲೂ ಆಗುತ್ತದೆ ಅದರಲ್ಲೇ ಮುಳುಗಿ ಅದೇ ಸತ್ಯವೆಂಬ ತೀವ್ರವಾದ ನಂಬಿಕೆಯೇ ಅಹಂಕಾರ ಯೆನ್ನಲ್ಪಡುವುವುದು!!ಅಲ್ಲಿ ಯಾವುದೇ ಬೇರೆಯ ಅಸ್ತಿತ್ವದ ಬಗ್ಗೆ ವಿಚಾರವಿಲ್ಲದಂತೆ ಕಡಿವಾಣ ಹಾಕಲಾಗಿರುವುದು!!ತಾನು ನಂಬಿರುವುದೇ ಸತ್ಯ ಎಂಬ ಪ್ರಭಲವಾದ ನಂಬಿಕೆಯೇ ಅಹಂಕಾರ ಎಂದು ಕರೆಯಲ್ಪಟ್ಟಿದೆ!!!
------------------------------
ದೇವರಲ್ಲಿ ನಿಮ್ಮ ಮನಸ್ಸಿನಿಂದ ನಡೆದ ತಪ್ಪಿಗೆ ಕ್ಷಮಾಪಣೆ ಒಂದನ್ನು ಬಿಟ್ಟು ಏನೂ ಬೇಡಲು ಆಗುವುದಿಲ್ಲ!!! ಏಕೆಂದರೆ ಅವನು ಏನು ಕೊಡಬೇಕೋ ಅದನ್ನೆಲ್ಲ ಕೊಟ್ಟಿರುತ್ತಾನೆ ತನ್ನಹತ್ತಿರ ಏನೂ ಉಳಿಸಿಕೊಂಡಿರುವುದಿಲ್ಲ!! ಅತ್ತಾಗೆಲ್ಲಾ ಕೊಡಲು ಅದೇನು ಚಾಕಲೆಟ ???!!!
-------------------------
ನೀವು ಹುಟ್ಟುವಾಗಲೇ ತಾಯಿಯ ಎದೆಯಲ್ಲಿ ಹಾಲನ್ನೂ ಕೂಡ ನಿಮಗಾಗಿ ತಯಾರುಮಾಡಿ ಇಟ್ಟಿರುವ ಭಗವಂತ ಎಂದಿಗೂ ನಮ್ಮನ್ನ ಮರೆಯುವುದಿಲ್ಲ!!ನಾವೇ ನಮಗೆ ಬೇಕಾದಾಗ ನೆನಸಿಕೊಳ್ಳುವವರು!!ಸಂಕಟಬಂದಾಗ ವೆಂಕಟರಮಣ!!!!
------------------------
ಜಗತ್ತಿಗೆ ಸೂರ್ಯನಿರುವಂತೆ ಶರೀರಕ್ಕೆ ಹೃದಯವಿರುತ್ತದೆ(ಆತ್ಮ)(ಸತ್ಯ)!!ಜಗತ್ತಿಗೆ ಚಂದ್ರ ಬಿಂಬವಿರುವಂತೆ ಮನಸ್ಸು ಇರುತ್ತದೆ(ಸುಳ್ಳು)(ಭ್ರಮೆ)!!ಸೂರ್ಯನು ಚಂದ್ರನಿಗೆ ಬೆಳಕನ್ನು ನೀಡುವಂತೆ ಹೃದಯದಿಂದ ಮನಸ್ಸಿಗೆ ಚೈತನ್ಯವು ಸಿಗುವುದು!!ಏಕೆಂದರೆ ಮನಸ್ಸು ಸ್ವಯಂ ಪ್ರಕಾಶಿತವಲ್ಲ!!ಅದು ಹೃದಯದಿಂದ(ಆತ್ಮ)ವೆಂಬ ಸೂರ್ಯನ ಪ್ರಕಾಶದಿಂದ ಪ್ರತಿಫಲಿಸುತ್ತದೆ!!ಯಾರು ಮನಸ್ಸೇ ನಿಜವಾದ ಬೆಳಕು ಎಂದು ಭ್ರಮಿಸುತ್ತಾರೋ ಅವರಿಗೆ ಹೃದಯದ ಸ್ವಯಂ ಪ್ರಕಾಶ ಅರಿವಾಗುವುದಿಲ್ಲ!!(ಚಂದ್ರೋ ಮನಸೋ ಜಾತಹ)!!ಯಾರು ಮನಸ್ಸೆಂಬ ಭ್ರಮೆಯನ್ನು ತಳ್ಳಿಹಾಕಿ,ಧಿಕ್ಕರಿಸಿ!!ಸತ್ಯದ ಕಡೆಗೆ (ಹೃದಯ)(ಆತ್ಮಸಾಕ್ಷಿ)ಕಡೆಗೆ ತಮ್ಮ ವಿವೇಚನೆ,ವಿಚಾರದಿಂದಾ ಹೋಗುತ್ತಾರೋ ಅವರಿಗೆ ಮಾತ್ರ!!ಸ್ವಯಂಪ್ರಭೆ (ಆತ್ಮ) (ಸತ್ಯ)ದರ್ಶನ ವಾಗುತ್ತದೆ!!!
--------------------------
ನಾವು ದಿನವೂ ಪ್ರತಿಕ್ಷಣವೂ ಯಾವುದೋ ಒಂದಕ್ಕಾಗಿ ಪರಿತಪಿಸುತ್ತಿರುತ್ತೇವೆ!!ಏನನ್ನೋ ಹುಡುಕುತ್ತಿರುತ್ತೇವೆ!!ನಮ್ಮಲ್ಲೇ ನಾನು ಪ್ರಶ್ನೆಗಳನ್ನ ಹಾಕಿಕೊಳ್ಳುತ್ತಿರುತ್ತೇವೆ!!ಸಮಾಧಾನ ಸಂತೋಷ ನೆಮ್ಮದಿಗಾಗಿ ಏನಾದರೊಂದನ್ನು ಮಾಡುತ್ತಲೇ ಇರುತ್ತೇವೆ ಇವೆಲ್ಲವೂ ನಮ್ಮ ಸುತ್ತ ಮುತ್ತ ಇರುವ ವಸ್ತುಗಳಿಂದಾ ಬರುತ್ತವೆ ಎಂದು ಅದನ್ನು ಕೂಡಿಹಾಕಲು ಪ್ರಯತ್ನಿಸುತ್ತೇವೆ ಅದಕ್ಕಾಗಿ ಹಣಗಳಿಸಲು ಹೊರಡುತ್ತೇವೆ!!ಕೊನೆಯಲ್ಲಿ ಭ್ರಮನಿರಸನ ಹತಾಶೆ ಗೋಳ್ಳುತ್ತೇವೆ!!!ಯಾವುದನ್ನೇ ಕಷ್ಟಪಟ್ಟು ಮಾಡಿದರೂ ಇದಲ್ಲ!! ಇದಲ್ಲ!!! ಇದಕ್ಕಿಂತಾ ಬೇರೇನೋ ಇದೆ ಎಂದು ಮತ್ತೆ ಹುಡುಕಾಡುತ್ತೇವೆ!!ಅತ್ರುಪ್ತಿಯಿಂದಾ ಕುದಿಯತ್ತೇವೆ ಇದಲ್ಲ!! ಇದಕ್ಕಾಗಿ ಜೀವಾಮಾನವೇ ಹಾಳಾಯಿತು!!ಎಂದು ಧುಖಿಸುತ್ತೇವೆ!!ಹೋದರೆ ಹೋಗಲಿ ನಾವು ಮಾಡಲಾರದ್ದನ್ನು ಮಕ್ಕಳಿಂದಾ ಕಾಣಲು ಬಯಸುತ್ತೇವೆ ಮುಂದಿನ ಜನ್ಮಾ ಎಂದಿದ್ದರೆ ತಾನು ಹಾಗಾಗಬೇಕು ಹೀಗಾಗಬೇಕು ಎಂದು ಅಂದುಕೊಂಡು ಅತ್ರುಪ್ತಿಯಿಂದಾ ಕೊನೆಯುಸಿರು ಯೆಳೆಯುತ್ತೇವೆ!!ಇದೆ ಅಲ್ಲವೇ ಜೀವನ!!!ಹಾಗಾದರೆ ಇಸ್ಟೆಯೇ ಜೀವನ??!!ಇಲ್ಲಾ !!ಸಾರ್ಥಕವಾಗಿಸಬಹುದು!!ಯೋಚಿಸಿನೋಡಿ!!!!!!!!!!!!!!!!!...........
-----------------------------

ನಟರಾಜರಿಗೆ  ನನ್ನ ಕೋರಿಕೆ ಏನೆಂದರೆ, ತಾವು ಒಂದು ಬ್ಲಾಗ್ ಮಾಡಿ ಎಲ್ಲವನ್ನು ಒಂದು ಕಡೆ ಗುಡ್ಡೆ ಹಾಕಿದರೆ ಬಹಳಷ್ಟು ಜನರಿಗೆ ಸಹಾಯವಾಗುವುದರಲ್ಲಿ ಸಂಶಯವಿಲ್ಲ.


ಫೇಸ್ ಬುಕ್ಕಿನಲ್ಲಿ ನಟರಾಜ್: ನಟರಾಜ್
ಅವರ ಗುಂಪುಗಳು:
"ಭಾವನೆಗಳು"FEELINGS"
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!

ಮಂಗಳವಾರ, ಅಕ್ಟೋಬರ್ 25, 2011

ಕನ್ನ್ಡಡ ವಾಹಿನಿಗಳ ಪರಭಾಷ ವ್ಯಾಮೋಹ



ಇಂದು ಸಮಯ ವಾಹಿನಿ ಯಲ್ಲಿ ಸಾಯಂಕಾಲ ೬:೩೦ ರ ಸಮಯದಲ್ಲಿ "ಸಕತ್ ಕಾಮಿಡಿ" ಎನ್ನುವ ಕಾರ್ಯಕ್ರಮದಡಿಯಲ್ಲಿ ತೆಲುಗು ಕಾಮಿಡಿ ನಟರ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ಪ್ರಸಾರ ವಾಯಿತು, ಆ ನಟರು ನಟಿಸಿದ ಕೆಲ ಚಿತ್ರದ ತುಣುಕುಗಳು ಮತ್ತು ಅವರ ಬಗ್ಗೆ ಕೆಲ ಮಾತುಗಳು ಆ ಕಾರ್ಯಕ್ರಮದಲ್ಲಿ ಮೂಡಿ ಬಂತು. ಅದಕ್ಕೂ ಮುಂಚೆ ಒಂದು ದಿನ  "7 sense" ತಮಿಳು ಚಿತ್ರದ ಕುರಿತು ಪ್ರಸಾರ ಮಾಡಿದರು. ಇಷ್ಟರಲ್ಲೇ ಭಾಗ-೨ ರ ಪ್ರಸಾರವೂ ಇದೆ.
ಅದು ಅಲ್ಲದೆ ಪ್ರತಿದಿನಾಲು ಒಂದಲ್ಲ ಒಂದು ಪರಭಾಷೆ ಚಿತ್ರದ ಕುರಿತು ಯಾವುದಾದರೊಂದು ಕಾರ್ಯಕ್ರಮದಲ್ಲಿ ಪ್ರಸಾರ ಮಾಡುತ್ತ ಇರುತ್ತಾರೆ.  ಅದೇ ರೀತಿ ಕನ್ನಡದ ಬಹುತೇಕ ವಾಹಿನಿಗಳಲ್ಲಿ ಪರಭಾಷ ಚಿತ್ರದ ಕುರಿತು ಒಂದಲ್ಲ ಒಂದು ಕಾರ್ಯಕ್ರಮ ಪ್ರಸಾರ ವಾಗುತ್ತಿರುವುದನ್ನು ನಾವೆಲ್ಲರು ಕಂಡಿದ್ದೇವೆ.

ಬೇರೆ ಭಾಷೆ ಯ ಚಿತ್ರಗಳು, ಆ ಭಾಷಾ ನಟ ನಟಿಯರ ಕುರಿತಾದ ಕಾರ್ಯಕ್ರಮ ನಮಗ್ಯಾಕೆ ಬೇಕು? ಪರಭಾಷ ಚಲನಚಿತ್ರಗಳ ಕುರಿತಾದ ಕಾರ್ಯಕ್ರಮ ಗಳನ್ನು ನಮಗೇಕೆ ಉಣ ಬಡಿಸುತಿದ್ದೀರ? ಇದು ವೀಕ್ಷಕರ ಕೋರಿಕೆಯೇ? ಯಾಕೆ ಈ ವಾಹಿನಿಗಳು ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿಕೊಂಡು ಬರುತಿದ್ದಾರೆ? ಹಲವಾರು ವರ್ಷಗಳಿಂದ ಈ ಬಗ್ಗೆ  ವಾಹಿನಿಗಳ ಗಮನಕ್ಕೆ ತಂದರೂ ಕಿವಿಗೊಡದೆ ಈ ಚಾಳಿಯನ್ನು ಮುಂದುವರೆಸಿದ್ದಾರೆ? ಬೇರೆ ಭಾಷಿಕರು ಅವರ ಭಾಷೆಗೆ ಸಂಭಂದಿಸಿದ ಚಲನಚಿತ್ರಗಳ ಕುರಿತಾದ ಕಾರ್ಯಕ್ರಮಗಳನ್ನು ಅವರ ವಾಹಿನಿಗಳಲ್ಲಿ ನೋಡಬೇಕಾದರೆ ಇವರಿಗೇಕೆ ಪರಭಾಷಾ ವ್ಯಾಮೋಹ?
ರೋಬೋ, ದೂಕೂಡು, ಮಗದೀರ, ೭ ಅರಿವು,  ಹೀಗೆ ಒಂದಲ್ಲ ಒಂದು ಸಿನಿಮಾ ಕುರಿತಾದ ಕಾರ್ಯಕ್ರಮಗಳು ಯಾರಿಗೋಸ್ಕರ ಪ್ರಸಾರ ಮಾಡ್ತಾಯಿದಾರೆ?

ಇದೇ ರೀತಿ ಬೇರೆ ಭಾಷೆಯ ಚಾನೆಲ್ ನಲ್ಲಿಯೂ ಸಹ ನಮ್ಮ ಕನ್ನಡ ಚಿತ್ರಗಳ ಕುರಿತಾದ ಕಾರ್ಯಕ್ರಮ ವೇನಾದರು ಪ್ರಸಾರ ವಾಗುತ್ತ ಅಂತ ಬೇರೆ ಎಲ್ಲ ಚಾನೆಲ್ ಗಳ ಮನರಂಜನಾ ಕಾರ್ಯಕ್ರಮ ಗಳಲ್ಲಿ ತಡಕಾಡಿದ್ದಾಯಿತು ಆದರೆ ಒಂದೇ ಒಂದು ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮ ನನಗೆ ಕಾಣಲಿಲ್ಲ. ನನ್ನ ಕೆಲ ಬೇರೆ ಭಾಷೆಯ ಸ್ನೇಹಿತರ ಕೆಲವರೊಂದಿಗೆ ಈ ಬಗ್ಗೆ ಮಾತನಾಡಿ ದ್ದ್ದಾಗ  ಅವರು ಸಹ ಅಂತಹ ಕಾರ್ಯಕ್ರಮ ಅವರ ಭಾಷೆ ಯಲ್ಲಿ ಇದುವರೆಗೂ ಪ್ರಸಾರ ಮಾಡಿಲ್ಲ ಅಂತ ಅಂದರು.

ಮತ್ತೆ ನಮ್ಮ ಮಾಧ್ಯಮಗಳಿಗೇಕೆ ಬೇರೆ ಭಾಷೆ ಚಿತ್ರಗಳ ಪ್ರಮೋಟ್ ಮಾಡುವ ಆಸೆ? ಬೇರೆಯವರಿಗಿಲ್ಲದ ಅಭಿಮಾನ ನಮ್ಮ ವಾಹಿನಿಗಳಿಗೇಕೆ?  ಏನು ಬೇಕಾದರು ತೋರಿಸ್ತೀವಿ, ನೋಡೋ ಕರ್ಮ ನಿಮ್ಮದು ವೀಕ್ಷಕರೇ ಅನ್ನೋ ಭಾವನೆಯಾ?
ಈ ತರಹ ಕಾರ್ಯಕ್ರಮಗಳಿಂದ ಲಾಭವಾಗುವುದು ಯಾರಿಗೆಂದರೆ ಆ ಚಲನ ಚಿತ್ರಗಳನ್ನು ವಿತರಣೆ ಮಾಡುವ ನಮ್ಮ ವಿತರಕರು ಮತ್ತು ಪ್ರದರ್ಶಕರಿಗೆ ಅಲ್ಲವೆ. ಪ್ರೈಮ್ ಟೈಮ್ ನಲ್ಲಿ ಪರಭಾಷ ಚಿತ್ರಗಳನ್ನು ಸುಮ್ಮನೆ ಯಾರು ಪ್ರಮೋಟ್ ಮಾಡೋದಿಲ್ಲ, ಅಲ್ಲಿ ಕಾಸಿನ ಸಂತರ್ಪಣೆ ಆಗಿರಬೇಕು ಇಲ್ಲದೆ ಇದ್ದರೆ ಆ ವಾಹಿನಿಯವರಿಗೆ ವಿಪರೀತ ವಾದ ಪರಭಾಷ ವ್ಯಾಮೋಹ ವಿರಬೇಕು.

ಕನ್ನಡಿಗರಿಗೆ ಪರಭಾಷೆ ಚಿತ್ರಗಳ ವೀಕ್ಷಣೆಗೆ ರತ್ನಗಂಬಳಿ ಹಾಸಿಕೊಡುತ್ತಿರುವ ಈ ಕಾರ್ಯಕ್ರಮಗಳು ನಮಗಂತು ಬೇಡ, ನಮ್ಮತನ ವನ್ನು ಮಾರಿಕೊಂಡು ಬದುಕುವ ಮುನ್ನುಡಿ ಬರೆಯುತ್ತಿರುವ ನಮ್ಮ ವಾಹಿನಿಗಳು ಮತ್ತು ಇದನ್ನು ಪ್ರಾಯೋಜಿಸುತ್ತಿರುವ  ಮಂದಿ ಎಚ್ಚೆತ್ತು ಕೊಳ್ಳದಿದ್ದರೆ, ಕನ್ನಡ ಚಿತ್ರಗಳನ್ನು ನೋಡಲು ಜನರೆ ಬರದಂತಾಗುವ ಕಾಲ ದೂರವಿಲ್ಲ.

ಒಂದು ಕಾಲದಲ್ಲಿ ಕನ್ನಡ ವಾಹಿನಿಗಳಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಕುರಿತಾದ ಒಂದೇ ಒಂದು ದೃಶ್ಯ ಅಪ್ಪಿ ತಪ್ಪಿಯೂ ಪ್ರಸಾರ ಮಾಡುತ್ತ ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಅದು ಸಾಮನ್ಯ ಎನ್ನುವ ಮಟ್ಟಿಗೆ ಆಗಿ ಹೋಗಿದೆ.

ವಾರ್ತ ಪ್ರಸಾರ ಸಮಯದಲ್ಲಿ ಅಥವ ಕೆಲ ಸಂದರ್ಶನಗಳಲ್ಲಿ ಕೆಲವೊಮ್ಮೆ ಬೇರೆ ಭಾಶೆ ಯ ವ್ಯಕ್ತಿ  ಯ ಮಾತುಗಳು ಪ್ರಸಾರ ವಾಗುವ ಸಂಧರ್ಭ ಬಂದರೆ ಕೆಳಗಡೆ ಆ ಮಾತುಗಳನ್ನು  ಅನುವಾದಿಸಿ  ಪ್ರಸಾರ ಮಾಡುತಿದ್ದರು. ಈಗ ಅದು ಕಡಿಮೆ ಯಾಗಿದೆ. ಆದರೆ ತಮಿಳು ಮತ್ತು ತೆಲುಗು ವಾಹಿನಿಗಳಲ್ಲಿ ಅದನ್ನು ಅನುವಾದಿಸಿಯೆ ಪ್ರಕಟಿಸುತ್ತಾರೆ. ಒಂದೆರೆಡು ನಿಮಿಷ ತಡವಾದರು ಚಿಂತೆಯಿಲ್ಲ ಅವರಿಗೆ, ಆ ಗುಣಮಟ್ಟವನ್ನು ಅವರು ಬಹುತೇಕ ಕಾಪಾಡಿಕೊಳ್ಳುತ್ತಾರೆ.


**********
ಇನ್ನು ಪರಭಾಷೆ ಚಿತ್ರ ಗಳ ಮಿತಿಮೀರಿದ ಹಾವಳಿ ನಮ್ಮ ಚಿತ್ರಮಂದಿರಗಳಲ್ಲಿ ಬೇರೆ ಕಾಡ್ತ ಇದೆ, ನಮ್ಮ ಚಿತ್ರೋಧ್ಯಮ ತಾನು ಮಾಡಿದ ನಿಯಮಾವಳಿಗಳ ಪ್ರಕಾರ, ಕನ್ನಡ ಹೊರತುಪಡಿಸಿದ ಯಾವುದೇ ಭಾಷೆಯ ಚಿತ್ರ ಕರ್ನಾಟಕದಲ್ಲಿ 25ಕ್ಕಿಂತ ಹೆಚ್ಚು ಫ್ರಿಂಟ್‌ಗಳನ್ನು ಪ್ರದರ್ಶಿಸಬಾರದು. ಅಲ್ಲದೆ, ಪರಭಾಷಾ ಚಿತ್ರ ತನಗೆ ಸಂಬಂಧಪಟ್ಟ ರಾಜ್ಯದಲ್ಲಿ ಬಿಡುಗಡೆಯಾದ ಆರು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು ಎನ್ನುವ ನಿಭಂದನೆ ಹಾಕಿ ಕೊಂಡಿದೆ ಆದರೆ ಇತ್ತೀಚಿಗೆ ಅಂತಹ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಹೆಚ್ಚು ಪರಭಾಷ ಚಿತ್ರಗಳನ್ನು ಪ್ರದರ್ಶನ ಮಾಡುತಿದ್ದಾರೆ, ಆದರೆ ನಮ್ಮ ಮಂಡಳಿ ಪರಭಾಷಾ ಚಿತ್ರಗಳ ನಿರ್ಮಾಪಕರನ್ನು, ವಿತರಕರನ್ನು ನಿಯಂತ್ರಿಸುವ ಗೋಜಿಗೆ ಹೋಗದೆ ತನ್ನ ಪಾಡಿಗೆ ತಾನು ಕುಳಿತಿದೆ.
ನಮ್ಮ ಕನ್ನಡ ಅಭಿಮಾನಿಗಳು ಮಾತ್ರ ಇಂತಹ ಎಡವಟ್ಟುಗಳನ್ನು ಸಹಿಸಿಕೊಳ್ಳಲಾರದೆ ಇವರಿಗೆಲ್ಲ ಛೀಮಾರಿ ಹಾಕುತಿದ್ದಾರೆ. ನಮ್ಮ ಚಿತ್ರರಂಗದ ಉಧ್ಯಮಿಗಳೇ ಪರಭಾಶಾ ಚಿತ್ರಗಳನ್ನು ನೋಡಿ ಅಂತ ಪ್ರೋತ್ಸಾಹಿಸುತ್ತಿರ ಬೇಕಾದರೆ ಇನ್ನೇನ್ ಮಾಡಬೇಕು? ಇವರಿಗೆ ಬೇಕಾದಾಗ ಕನ್ನಡ ವನ್ನು ಉಳಿಸಿ ಕನ್ನಡ ಚಿತ್ರರಂಗವನ್ನು ಉಳಿಸಿ ಅಂತ ಗೋಳಿಡ್ತಾರೆ, ಜತೆಗೆ  ಆಚಾರ ಹೇಳಿ ಬದನೆ ಕಾಯಿತಿನ್ನುವ ನಮ್ಮ್ ಸಿನಿಮಾ ಮಂದಿ ಪರಭಾಷ ಚಿತ್ರಗಳ ವಿತರಣೆ ಹಕ್ಕನ್ನು ಪಡೆದು ಹಣ ಮಾಡುವ ಸಮಯದಲ್ಲಿ ಮಾತ್ರ ಕನ್ನಡ ಅಂದರೆ ಎನ್ನಡ ಎಕ್ಕಡ ಎನ್ನುವ ಇವರ ದ್ವಂದ್ವ ನಿಲುವು ಗಳಿಗೆ ಮಾತ್ರ ಛೀಮಾರಿ ಹಾಕಬೇಕು.