ಶುಕ್ರವಾರ, ಜುಲೈ 29, 2011

ತಣ್ಣಗಾದ ವಿವಾದ


ಸಿಂಗಮ್ ಚಿತ್ರದ ಸಂಭಾಷಣೆ ಯ ವಿವಾದ ಈಗ ಮುಗಿಯುವ ಹಂತಕ್ಕೆ ಬಂದಿದೆ ಅಂತ ಕಾಣಿಸ್ತಾ ಯಿದೆ. ಆ ಸಂಭಾಷಣೆ ಯನ್ನು ಮ್ಯೂಟ್ ಮಾಡಿ ಅಥವ ಕತ್ತರಿ ಪ್ರಯೋಗ ಮಾಡಿ ಪ್ರದರ್ಶನ ಮಾಡುತ್ತೇವೆ ಎಂದು ಚಿತ್ರ ವಿತರಕರು ಹಾಗು ನಿರ್ಮಾಪಕರು  ಭರವಸೆ ಕೊಟ್ಟಿದ್ದಾರೆ. ಸ್ಯಾಟಲೈಟ್ ನಿಂದ ನೇರ ಚಿತ್ರ ಪ್ರದರ್ಶನ ವಾಗುತ್ತಿರುವ ಚಿತ್ರಮಂದಿರ ಗಳಲ್ಲಿ ಈಗಾಗಲೇ ಕತ್ತರಿ ಪ್ರಯೋಗ ನಡೆದಿದೆ ಹಾಗು ರೀಲ್ ಗಳಲ್ಲಿ ಈ ಬದಲಾವಣೆ ಯನ್ನು ಆದಷ್ಟು ಬೇಗ ಮಾಡುತ್ತೇವೆ ಎಂದಿದ್ದಾರೆ.
ಈಗ ಆಗಲೇ ಆಗಬೇಕಾಗಿರುವ ಡ್ಯಾಮೇಜ್ ಆಗಿಯಾಗಿದೆ. ಬಹು ಜನಕ್ಕೆ ಮಾಧ್ಯಮ ಗಳ ಮೂಲಕ ಈ ಸುದ್ದಿ ತಿಳಿದು ಹೊರ ರಾಜ್ಯದ ಜನರಲ್ಲಿ ಒಂದು ತರಹ ಕುತೂಹಲ ಉಂಟಾಗಿದ್ದು ಚಿತ್ರಕ್ಕೆ ಹೆಚ್ಚಿನ ಪ್ರಚಾರ ಲಭ್ಯವಾಗಿದೆ.
ಈಗ ಇರುವ ಪ್ರಶ್ನೆ ಯೆಂದರೆ, ಈ ಕತ್ತರಿ ಪ್ರಯೋಗ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವೇ ಅಥವ ಹೊರರಾಜ್ಯದ ಎಲ್ಲ ಪ್ರಿಂಟ್ ಗಳಲ್ಲಿ ಈ ಕಾರ್ಯ ಮಾಡಲಾಗುತ್ತದೆಯೋ?  ಕತ್ತರಿ ಪ್ರಯೋಗ ಮಾಡಿದರೆ ಎಲ್ಲ ಪ್ರಿಂಟ್ ಗಳಲ್ಲಿ ಮಾಡಲೇ ಬೇಕು.
ಒಂದು ವೇಳೆ ಮ್ಯೂಟ್ ಮಾಡಿದರೆ, ಹೊರ ರಾಜ್ಯದ ಜನರಲ್ಲಿ ಇದನ್ನು ಯಾಕೆ ಮ್ಯೂಟ್ ಮಾಡಿದ್ದಾರೆ ಎನ್ನುವ ಕುತುಹಲ ವಿರುತ್ತೆ, ಹಾಗು ಅದರ ಬಗ್ಗೆ ಗಮನ ವಹಿಸಿದರೆ ಅದರ ವಿಷಯ ಗೊತ್ತಾಗುತ್ತೆ. "ಓಹೋ ಕನ್ನಡಿಗರನ್ನು ನಾಯಿಗಳು ಎಂದು ಬೈದಿದ್ದಾನ ಅಜಯ್ ದೇವಗನ್" ಎಂದು ಬಾಯಿಗೆ ಬಾಯಿಗೆ ಹರಡುತ್ತಾ ಹೋಗುತ್ತೆ. ಹೀಗೆ  ಇನ್ನಷ್ಟು ಡ್ಯಾಮೆಜ್ ಆಗ್ತಾ ಹೋಗುತ್ತೆ. ಇದನ್ನು ತಡೆಯಲು ಸಾಧ್ಯವಿಲ್ಲ.
ಮೊದಲೇ ಶಿವಸೇನೆ, ಎಮ್.ಎನ್.ಎಸ್ ಹಾಗು ಎಮ್.ಇ.ಎಸ್ ಪುಂಡರಿಗೆ ಬೆಳಗಾವಿಯಲ್ಲಿ ನಮ್ಮ ಕನ್ನಡಿಗರನ್ನು ಕೀಟಲೆ ಮಾಡಲು ಇಷ್ಟು ಸಾಕಲ್ವ.
೪ ವರ್ಷಗಳ ಹಿಂದೆ ತಮಿಳಿನಲ್ಲಿ ಅದೆಂತಹದ್ದೋ ಹಿಂಸೈ ಅರಸನ್ ೨೩ ಪುಲಿಕೇಶಿ ಎನ್ನುವ ಸಿನಿಮಾ ಬಂದಿತ್ತು. ಒಬ್ಬ ಹೇಡಿ ಪಾತ್ರ ಕ್ಕೆ  ವೀರ ಕನ್ನಡಿಗ ಪುಲಿಕೇಶಿ ಯ ಹೆಸರಿಟ್ಟು ಅಂದು ತಮಿಳರು ಅವಮಾನ ಮಾಡಿದ್ದರು, ನಮ್ಮ ಹೋರಾಟಗಾರರ ಫಲದಿಂದ ಆ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಯಾಗಲಿಲ್ಲ ಆದರೆ, ಹೊರ ರಾಜ್ಯಗಳಲ್ಲಿ ಆ ಚಿತ್ರ ಅಪಾರ ಹಣ ಮಾಡಿತು, ಕರ್ನಾಟಕದಲ್ಲಿ ಅಂತಹ ನಷ್ಟ ವಾಗಲಿಲ್ಲ. ಇನ್ನು ತಮಿಳು ಹಾಗು ತೆಲುಗು ಚಾನೆಲ್ ಗಳಲ್ಲಿ ಈ ಚಿತ್ರ ಪ್ರಸಾರ ವಾಗುತ್ತಲೆ ಇದೆ. ಆದರೆ ಆ ಹೆಸರಿನಿಂದ ಘಾಸಿ ಯಾಗಿದ್ದು ನಮ್ಮ ಕನ್ನಡದ ಹೃದಯಗಳಿಗೆ, ಅವಮಾನ ವಾಗಿದ್ದು ನಮ್ಮ ಕನ್ನಡ ವೀರನಿಗೆ.
ಅವರ ಪ್ರಕಾರ ಇದೊಂದು ಕಾಲ್ಪನಿಕ ಕಥೆ, ಪುಲಿಕೇಶಿ ಯ ಹೆಸರನ್ನು ತಮಿಳರು ಉಪಯೋಗಿಸುವುದೇ ಇಲ್ಲ  ಅಂತಹ ಹೆಸರಿನ ವ್ಯಕ್ತಿಗಳು ಸಹ ಇಲ್ಲ  ಹಾಗಿದ್ದರೆ ಪುಲಿಕೇಶಿ ಯ ಹೆಸರು ಯಾಕೆ ಬೇಕಾಗಿತ್ತು? ಚೋಳನ್, ವರ್ಮ ನ್, ಪಾಂಡ್ಯನ್ ಮುಂತಾದ ಹೆಸರು ಇರಲಿಲ್ವೆ?
ರಾಜಕೀಯ ನಾಯಕರು ಸಹ ಇದರ ಬಗ್ಗೆ ಯಾವುದೇ ರೀತಿಯ ಸೊಲ್ಲೆತ್ತದೇ ಸುಮ್ಮನಾದರು, ಆದರೆ ಅವಮಾನ ವಾಗಿದ್ದು ನಮಗೆ ಅಲ್ವಾ.
ನಟ ಪ್ರಕಾಶ್ ರೈ ಹೊರ ರಾಜ್ಯದಲ್ಲಿ ಕನ್ನಡದ ಬಗ್ಗೆ ಎಂದಾದರು ಒಳ್ಳೆಯ ಮಾತುಗಳನ್ನು ಆಡಿದ್ದು ಇದುವರೆವಿಗೂ ಕೇಳಿಲ್ಲ. ಬೆಂಗಳೂರಿಗೆ ಬಂದಾಗ ಮಾತ್ರ ಅದು ಇದು ಅಂತ ಕುಯ್ತಾನೆ. ಆದರೆ ಕಾವೇರಿ ಗಲಾಟೆ ಸಂಧರ್ಭದಲ್ಲಿ ನಾನು ಕರ್ನಾಟಕದವನು ನಿಜ ಆದರೆ ನನ್ನ ಮಾತೃ ಭಾಷೆ ತುಳು ಎಂದು ಹೇಳಿ ಹಾಗಾಗಿ ನಾನು ಯಾರಿಗು ಸಪೋರ್ಟ್ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದ. ಹೀಗಿರುವಾಗ ಕನ್ನಡಮ್ಮನ ಸೊಲ್ಲೆತ್ತದ ಇಂತಹವರಿಂದ ಕನ್ನಡದ ಬಗ್ಗೆ ಅಭಿಮಾನ ಹೇಗೆ ಬಯಸುತ್ತೇವೆ?
ಅವರ ಸಮರ್ಥನೆ ಸಹ ಅಸಹ್ಯ ತರಿಸುವಂತಹದ್ದು. ನಾಚಿಕೆ ಯಾಗಬೇಕು ಇಂತಹ ಜನರಿಗೆ. ಕೇವಲ ಹಣ ಹಾಗು ಹೆಸರಿನ ಹಿಂದೆ ಬಿದ್ದಿರುವಾಗ ಅಭಿಮಾನ, ಆಪ್ಯಾಯತೆ, ಪ್ರೀತಿ ವಿಶ್ವಾಸ ಅರಿವೆಲ್ಲಿರುತ್ತೆ.
ಏನೇ ಆಗಲಿ, ಕನ್ನಡಮ್ಮ ನ ಸೇವೆಗೆ ತುಳು, ಕೊಂಕಣಿ, ತೆಲುಗು, ಬ್ಯಾರಿ, ಉರ್ದು ಹಾಗು ಮತ್ತಿತರ ಮಾತೃ ಭಾಷಿಕರು ಕೊಟ್ಟಿರುವ ಕೊಡುಗೆ ಎಂತದ್ದು ಎನ್ನುವುದು ಎಲ್ಲರಿಗೂ ಗೊತ್ತು. ಅವರಿಗಿರುವ ಅಭಿಮಾನ ಈ ನಾಡಿನಲ್ಲಿ ಹುಟ್ಟಿ ಆಡಿ ಬೆಳೆದ ಈ ನಾಡಿನ ಪ್ರತಿಯೊಬ್ಬ ಕಂದಮ್ಮ ಗಳಿಗೆ ಮಾದರಿಯಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ