ಶುಕ್ರವಾರ, ಅಕ್ಟೋಬರ್ 14, 2011

ಇದೆಂತಹ ಪ್ರಗತಿಪರತೆ?


ಶನಿವಾರ, 8 ಅಕ್ಟೋಬರ್ 2011 ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ, ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಟೀಕಿಸಿದ್ದು ಯಾವ ಪ್ರಗತಿಪರತೆ ಸಿದ್ದಾಂತವೋ ಎಂದು ಜನ ವ್ಯಾಪಕ ರೀತಿ ಯಲ್ಲಿ ಚರ್ಚೆ ಮಾಡುತಿದ್ದಾರೆ. ಬಳಸಿದ ಶಬ್ದಗಳ ಬಗ್ಗೆ ವಿಪರೀತ ಖಂಡನೆ ವ್ಯಕ್ತವಾಗಿದೆ.


ಬಹು ಸೋಜಿಗದ ಸಂಗತಿ ಯೆಂದರೆ, ಮೈಸೂರಿನ ಒಂದು ಪತ್ರಿಕೆಯ ಸಂಪಾದಕರು ಬರೆದ ಅಂಕಣದ ಬಗ್ಗೆ ವಿಪರೀತ ಚರ್ಚೆ ನಡೀತು. ಆದರೆ ಆ ಅಂಕಣಕ್ಕೆ ಅಂತಹ ಮಹತ್ವ ವನ್ನು ಯಾರು ಕೊಡಲಿಲ್ಲ ಕೆಲವರು ಮಾತ್ರ ಬ್ಲಾಗ್ ಬರೆದು ಯಥಾರೀತಿ ಬಲಪಂತೀಯರನ್ನು ಖಂಡಿಸುವುದನ್ನು ಮಾತ್ರ ಮರೆಯಲಿಲ್ಲ. ಭೈರಪ್ಪನವರ ಅಭಿಮಾನಿಗಳಲ್ಲಿ ಹಂಗಾಯಿತು, ಹಿಂಗಾಯಿತು, ಕೆಂಡ ಕಾರಿದ್ರು.  ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಈ ಗಣಪತಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ ಅಂದ್ರು.  ಅಂತ ಏನೇನೋ ಬಡಬಡಾಯಿಸಿದರು.


ಆದರೆ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ ಮಾತುಗಳಿಗೆ ಮಾತ್ರ ಯಾಕೆ ಗಪ್ ಚುಪ್!!! ಮೈಸೂರಿನ ಪತ್ರಿಕೆಯ ಲೇಖನಕ್ಕೆ ಕೊಟ್ಟ ಪ್ರಾಮುಖ್ಯತೆ ಈ ಮಹಾನುಭಾವರ ಮಾತುಗಳಿಗೆ ಯಾಕಿಲ್ಲ? ಆ ಬ್ಲಾಗ್ ನಲ್ಲಿ ಲೇಖನದ ಬಗ್ಗೆ ಯಾವರೀತಿ ಖಂಡಿಸಿದಿರೋ ಅದೇ ರೀತಿ ಈ ಮಾತುಗಳನ್ನು ಸಹ ಯಾಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ? ನೀವು ಹೇಳಬೇಕಾಗಿರುವುದನ್ನು ಅವರು ಹೇಳಿದ್ದಾರೆ ಅಂತ ಇರಬಹುದೇನೋ!




------------------------------------------------------------------------------------------------------------
ಅಂದಿನಿಂದ ಇಂದಿನವರೆಗೆ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾದ ಪರ ವಿರೋಧದ ಲೇಖನಗಳು ಇಲ್ಲಿವೆ,
-------------------------------------------------------------------------------------------






















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ