ಮಂಗಳವಾರ, ಆಗಸ್ಟ್ 30, 2011

ಜಿನ್ ಕಿಕ್ ಹೊಡಿತಾಇಲ್ಲ !!!!.............

ಜಿನ್.........
ಜಿ.ಎನ್.ಮೋಹನ್ ಅವರ ಆಪ್ತರೊಬ್ಬರು ಸಂಭೋಧಿಸುವ ಪ್ರೀತಿಯ ಅಡ್ಡ ಹೆಸರು "ಜಿನ್". ಅವರು ಈಗ ಸಮಯ ಚಾನೆಲ್ ನ ಮುಖ್ಯಸ್ಥ ರಾಗಿ ಕಾರ್ಯನಿರ್ವಹಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದೇ. ಇದಕ್ಕೂ ಮುಂಚೆ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದು ಅಪರೂಪ,  ಸದಾ ಚಟುವಟಿಕೆಯಿಂದ ಕೂಡಿರುವ ಕ್ರಿಯಾಶೀಲ ವ್ಯಕ್ತಿತ್ವದ ಕಣಜ. ಈಗ ವಿಶೇಷ ಸುದ್ದಿ ಸಮಯ ಕಾರ್ಯಕ್ರಮದ ಮುಖಾಂತರ ಜನರಿಗೆ ಮುಖ ದರ್ಶನ ವಾಗುತ್ತಿದೆ. ಚಾನೆಲ್ ನ  ಕಾರ್ಯಕ್ರಮಗಳಲ್ಲಿ ತುಂಬಾ ಬದಲಾವಣೆ ಕಾಣುತ್ತಿದೆ. ಶ್ರೀ ಶಶಿಧರ್ ಭಟ್ ರವರ ನಂತರ ಆ ಸ್ಥಾನ ವನ್ನು ತುಂಬುವುದರಲ್ಲಿ ಯಾವುದೇ ಸಂಶಯ ಕಾಣುತ್ತಿಲ್ಲ. ಅವರು ಮಾಡಿದ ಎಲ್ಲ ಕೆಲಸಗಳಲ್ಲಿ ಯಶಸ್ಸು ಕಂಡಿದ್ದಾರೆ. ಇಲ್ಲೀ ಸಹ ನೀರಿಕ್ಷೆ ಮೂಡಿಸಿದ್ದಾರೆ.

ಆದರೆ ಜಿನ್ ಸ್ವಲ್ಪನೂ ಕಿಕ್ ಹೊಡೀತಾಯಿಲ್ಲ ಅಂತ ಸಾಬೀತಾಗ್ತಯಿದೆ. ನಿರೂಪಕರಿಗೆ ಇರಬೇಕಾದ ಆ ಜೋಶ್ ಅವರಲ್ಲಿ ಕಾಣಿಸ್ತಾಯಿಲ್ಲ. ಸೌಮ್ಯ ಮಾತಿನ, ಆಪ್ತರೊಬ್ಬರು ನಡೆಸುವ ಆತ್ಮೀಯ ಮಾತುಕತೆ ಯಂತಿರುತ್ತೆ ಅವರ ವಿಶೇಷ ಸುದ್ದಿ ಸಮಯ ಕಾರ್ಯಕ್ರಮ. ಮಾತಿನ ಮಲ್ಲ ರಂಗಣ್ಣ ಅಥವ ಶಶಿಧರ್ ಭಟ್ ರವರ ವಾಕ್ಚಾತುರ್ಯ, ವಾದ ಮಂಡಿಸುವ ಪರಿ, ಎದುರಾಳಿಗಳನ್ನು ಪ್ರಶ್ನೆ ಗಳನ್ನು ಕೇಳಿ ದಂಗು ಬಡಿಸುವ ವಿಧಾನ, ಜಸ್ಟ್ ಮಾತ್ ಮಾತಲ್ಲೆ ಕಿಚಾಯಿಸುವ ಪರಿ ಜಿನ್ ರವರಲ್ಲಿ ಇಲ್ಲ ಅಂತ ಗೊತ್ತಾಗ್ತಯಿದೆ. ಒಂದು ಗಂಟೆಯ ಚರ್ಚೆಯ ಅವಧಿಯಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಆ ಕಾರ್ಯಕ್ರಮದ್ದಾಗಿರಬೇಕು, ನೀರಸ ವಾಗಿದ್ದರೆ ಚಾನೆಲ್ ಬದಲಾಯಿಸುವುದು ಖಂಡಿತ. 

ಅಪಾರ ವೀಕ್ಷಕರ ಮನಸೆಳೆಯುವ ಶಕ್ತಿ ವಾಕ್ ಶೈಲಿಗೆ ಇದೆ ಎಂದು ಪ್ರತಿಯೊಬ್ಬ ನಿರೂಪಕರಿಗೂ ಗೊತ್ತಿರಬೇಕು. ಕೆಲವರು ಸುಮ್ಮನೆ ಜೋಶ ನಲ್ಲಿ ಮಾತಾಡ್ತಾಯಿರ್ತಾರೆ, ಬಾಯಿಗೆ ಬಂದದ್ದು ಸುಮ್ಮನೆ ವದರಿದರೆ ಅದು ನಿರೂಪಣೆ ಎನ್ನುವುದಿಲ್ಲ.

ಮೋಹನ್ ರವರು ತೆರೆಮರೆಯಲ್ಲಿ ಮಾಡಿದ ಕೆಲಸಗಳು ಬಹಳ ಜನಪ್ರಿಯವಾಗಿವೆ. ಈಟಿವಿ ಅಗ್ರ ರಾಷ್ಟ್ರೀಯ ವಾರ್ತೆಯಲ್ಲಿ ಅರ್ಧ ಗಂಟೆಯಲ್ಲಿ ಇಡೀ ದೇಶವನ್ನು ಸುತ್ತಿಸಿ ವಿವಿಧ ಸುದ್ದಿಗಳನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿ ಯಾಗಿದ್ದರು. ಇಂದಿಗೂ ಸಹ ಅದರ ಖದರ್ ಈ ಟಿವಿಯಿಂದ ಹೋಗಿಲ್ಲ. ಮಿಕ್ಕೆಲ್ಲ ಸುದ್ದಿ ವಾಹಿನಿಗಳಲ್ಲಿ ಕುಯ್ದಿದ್ದನ್ನೆ ಕುಯ್ತಾಇರ್ತಾರೆ. ನೇರ ಪ್ರಸಾರ ದಲ್ಲಿ ವರದಿಗಾರ ವರದಿ ಒಪ್ಪಿಸುವ ರೀತಿ ಆ ದೇವರಿಗೆ ಪ್ರೀತಿ. ರಾಷ್ಟ್ರೀಯ ವಾಹಿನಿಗಳ ಆ ಚಾಳಿ ನಮ್ಮೆಲ್ಲ ಚಾನೆಲ್ ಗಳಿಗೆ ವಕ್ಕರಿಸಿ ನ್ಯೂಸ್ ನೋಡುವುದು ಬೇಡ ಅನ್ನಿಸುವ ಮಟ್ಟಿಗೆ ಆಗಿದೆ.
ಕೆಲಚಾನೆಲ್ ಗಳು ಪಕ್ಷಪಾತಿ ಯಾಗಿ ಕಾರ್ಯನಿರ್ವಹಿಸಿದರೆ ಸಮಯ ಚಾನೆಲ್ ಅದ್ಯವುದರ ಗೊಡವೆಗೆ ಹೋಗದೆ ಇದ್ದದ್ದನ್ನು ಇದ್ದಂಗೆ ಹೇಳುವ ಚಾತಿಯನ್ನು ರೂಪಿಸಿಕೊಂಡಿದೆ. ಭಟ್ಟರು ಹೇಳುತಿದ್ದ ಒಂದು ಮಾತು" ಇಲ್ಲಿ ಆರೋಗ್ಯಕರ ಚರ್ಚೆ ನಡೆಯುತ್ತೆ, ಉಪದೇಶ ಮಾಡಲ್ಲ" ಎನ್ನುವ ಮಾತು ಜಿ.ಎನ್ ಮೋಹನ್ ರವರ ಮಾತಿನಲ್ಲಿ ಸಹ ನಾವು ಕಾಣಬಹುದು.

ಕೆಲಸಮಾಡುವ ಯಾವುದೇ ಸಂಸ್ಥೆಗಳಲ್ಲಿ ಅವರು ಮೆಚ್ಚಿ ಕೊಂಡ ಎಡಪಂಥದ ಸಿದ್ದಾಂತದ ಬಗ್ಗೆ ವೀಕ್ಷಕರಲ್ಲಿ ಅನವಶ್ಯಕವಾಗಿ ಕೊರೆದದ್ದು ನಾವು ಕಂಡಿಲ್ಲ. ಸಾಮನ್ಯವಾಗಿ ಕೆಲವರು ತಾವು ಒಪ್ಪಿಕೊಂಡ ಸಿದ್ದಾಂತ ಹಾಗೂ ತಾವು ಇಷ್ಟಪಟ್ಟ ವ್ಯಕ್ತಿ ಪಕ್ಷಗಳಬಗ್ಗೆ ಪಕ್ಷಪಾತಿಯಾಗಿ ಮಾತನಾಡಿದ್ದು ಕಂಡಿದ್ದೇವೆ. ಇನ್ನು ಕೆಲವರು ತಮಗೆ ಇಷ್ಟವಾಗದ ವ್ಯಕ್ತಿ ಹಾಗೂ ಪಕ್ಷಗಳ ಬಗ್ಗೆ ತೇಜೋವಧೆ ಮಾಡುವುದನ್ನು ಬೇರೆ ಚಾನೆಲ್ ಗಳಲ್ಲಿ ಇಂದಿಗೂ ಕಾಣುತಿದ್ದೇವೆ. ಉದಾ: ಯಡಿಯೂರಪ್ಪರ ಬಗ್ಗೆ ಕುಂತ್ರೂ ದ್ಯಾನ ನಿಂತ್ರೂ ಧ್ಯಾನ.

ಒಟ್ಟಿನಲ್ಲಿ ಮೋಹನ್ ರವರು ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದರೆ ಚೆನ್ನ ಎನ್ನುವ ಮಾತು ಬಹಳಷ್ಟು ಮಟ್ಟಿಗೆ ನಿಜವಾಗಿದೆ. ಕೆಲವರು ಹೇಳಿದ ಹಾಗೆ ಚಾನೆಲ್ ನಿರ್ವಹಿಸುವುದು ಮೀಡಿಯ ಮಿರ್ಚಿ ಬರೆದ ಹಾಗೆ ಅಲ್ಲ ಅಂತ, ಅಪಾರ ಅನುಭವ ಹಾಗು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವವಿರುವ ಅವರಿಗೆ ಇವೆಲ್ಲ ಗೊತ್ತಿಲ್ಲ ಅಂತ ಏನಿಲ್ಲ, ಆದರೆ ಆ ನಿರೂಪಕ ಸ್ಥಾನಕ್ಕೆ ತಕ್ಕಂತೆ ಅವರ ಶೈಲಿಯನ್ನು ಬದಲಾಯಿಸಿಕೊಂಡು ನಿರೂಪಿಸುತ್ತಾರೆಯೆ ಎನ್ನುವುದು ಪ್ರಶ್ನೆ? ಇನ್ನೂ ಚಾನೆಲ್ ಹೆಡ್ ಸ್ಥಾನದ ವಿಚಾರ ಬಂದರೆ, ಅದರ ಬಗ್ಗೆ ನಾವು ಹೇಳುವುದಕ್ಕಿಂತ ಅವರ ಜತೆಯಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಸ್ನೇಹಿತರ ಮಾತಿನಂತೆ ಅವರೊಬ್ಬ ಮುತ್ತಿನಂತ ಮನುಷ್ಯ. 

ಅದೇನೆ ಇರಲಿ ಸುದ್ದಿ ಮಾಧ್ಯಮ ಒಂದು ಉಧ್ಯಮ ವಾಗಿ ಬೆಳೆದರೆ ಅದರ ಅಪಾಯ ಅಷ್ಟಿಷ್ಟಲ್ಲ ಅಂತ ರುಪೋಕ್ ಮುರ್ಡೋಕ್ ಸಾಬೀತು ಮಾಡಿದ್ದಾನೆ. ಮಾಧ್ಯಮ ಒಂದು ವ್ಯವಹಾರಿಕ ಉಧ್ಯಮವಾಗದೆ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ನೀಡಿ ವೀಕ್ಷಕರನ್ನು ರಂಜಿಸಿ ಹಣಗಳಿಸಿದರೆ ಚೆನ್ನ, ಅಡ್ಡದಾರಿಯಲ್ಲಿ ಹಣ ಸಂಪಾದಿಸಲು ಸುದ್ದಿ ಮಾಧ್ಯಮವೇ ಆಗಬೇಕೆ?

ಕೊನೆ ಗುಟುಕು:
೩೦ ಆಗಸ್ಟ್ ೨೦೧೧ ಸೋಮವಾರದಂದು ನಮ್ಮ ಸುದ್ದಿ ವಾಹಿನಿಗಳು ಸುಮಾರು ೩ ಗಂಟೆಗಳ ಕಾಲ ಯಡ್ಯೂರಪ್ಪ ಕೋರ್ಟ್ ಪ್ರಹಸನ ಕುರಿತಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದವು. ಇನ್ನೂ ಅವರಿಗೆ ಯಡ್ಯೂರಪ್ಪನ ಮೋಹ ಹೋಗಿ ರಲಿಲ್ಲ ಅನ್ನುವುದಕ್ಕೆ ಇದೊಂದು ಒಳ್ಳೆ ನಿದರ್ಶನ.
ಲೋಕಾಯುಕ್ತ ವಿಶೇಷ ಕೋರ್ಟ್‌ ನಲ್ಲಿ ಪೋಲೀಸ್ ಬಿಗಿ ಬಂದೋಬಸ್ತ್, 
೫೦ ಜನ ವಕೀಲರು ನ್ಯಾಯಾಲಯದಲ್ಲಿ ಭಾಗವಹಿಸಿದ್ದಾರೆ, 
೫೦೦ ಜನ ಕೊರ್ಟ್ ಮುಂದೆ ನೆರೆದಿದ್ದಾರೆ
ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಮಾಜಿ ಸಿಎಮ್ ಆಗಮನ
ಕಟಕಟೆಯಲ್ಲಿ ಯಡ್ಯೂರಪ್ಪ, ವಿಜಯೇಂದ್ರ.
ಸೆ.೭ಕ್ಕೆ ವಿಚಾರಣೆ ಮುಂದೂಡಿಕೆ
ನ್ಯಾಯಾಲಯದಿಂದ ಯಡ್ಯೂರಪ್ಪ ನಿರ್ಗಮನ...........
ಅಬ್ಬಾ ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟ ಮಾಜಿ ಸಿಎಮ್...........
ಅಯ್ಯೋ ಕರ್ಮವೇ ರಾಜ್ಯದಲ್ಲಿ ಬೇರೆ ಏನೂ ಸುದ್ದಿನೇ ಇರಲಿಲ್ವ ? ಯಡ್ಯುರಪ್ಪರವರಿಗೆ ಪ್ರಚಾರದ ಹುಚ್ಚು ಜಾಸ್ತಿ ಹೇಳಿದ್ದು ಇವರೇ, ಅದಕ್ಕೆ ತಕ್ಕಂತೆ ಪ್ರಚಾರ ಕೊಡ್ತಾಯಿರೋದು ಇವರೆ. ಎಂತಹ ವೈಪರಿತ್ಯ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ