ಮಂಗಳವಾರ, ಆಗಸ್ಟ್ 9, 2011

ಕಾಂಗ್ರೆಸ್ಸ್ ಮತ್ತು ದೇವರು



ಯುಪಿಎ ಒಕ್ಕೂಟದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆದ ಶ್ರೀಮತಿ ಸೋನಿಯ ಗಾಂಧಿ ಸರ್ವೈಕಲ್ ಕ್ಯಾನ್ಸರ್ ನಿಂದ ಬಳಲುತಿದ್ದು ಅಮೆರಿಕದ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದು. ಅವರು ಬೇಗ ಗುಣಮುಖರಾಗಲಿ ಎಂದು ದೇಶದ ಬಹುತೇಕ ಜನರು ದೇವರಲ್ಲಿ ಪ್ರಾರ್ಥಿಸುತಿದ್ದಾರೆ. ನಾವು ಸಹ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇವೆ.
ಇಂದು ಮತ್ತು ಮೊನ್ನೆಯ ಕೆಲ ಮುಖ್ಯ ಘಟನೆಗಳನ್ನು ನಾನು ಇಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ.

ಬಳ್ಳಾರಿಯಲ್ಲಿ ಪ್ರತಿಪಕ್ಷದ ಮುಖಂಡರಾದ ಶ್ರೀ ಸಿದ್ದರಾಮಯ್ಯ ನವರು ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ೧೦೧ ತೆಂಗಿನಕಾಯಿ ಹೊಡೆದು ಮೇಡಂ ಬೇಗ ಗುಣಮುಖರಾಗಲಿ ಎಂದು ಪೂಜೆ ಸಲ್ಲಿಸಿದರು.

ಶ್ರೀ ರಂಗಪಟ್ಟಣದ ಗಂಜಾಂ ನಲ್ಲಿ ಕುಟುಂಬ ಸಮೇತರಾಗಿ ಶ್ರೀ ಆರ್.ವಿ.ದೇಶಪಾಂಡೆ ಸಾಹೇಬರು ಶ್ರೀ ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿ ಹೋಮ ಹವನ ಮಾಡಿದರು.

ನಿನ್ನೆ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಉರುಳು ಸೇವೆ ಕಾರ್ಯಕ್ರಮ ನಡೆಸಿದರು.
ಮೊನ್ನೆ ಮಂಗಳೂರಿನಲ್ಲಿ ಶ್ರೀ ಜನಾರ್ಧನ ಪೂಜಾರಿ ಉರುಳು ಸೇವೆ ಸಲ್ಲಿಸಿದರು.

ಮತ್ತು ನಿನ್ನೆ ನಡೆದ ಒಂದು ಸಭೆ ಯಲ್ಲಿ ಭಾಷಣ ಮಾಡುತಿದ್ದ ಶ್ರೀಮತಿ ಮೋಟಮ್ಮನವರು ಗದ್ಗದಿತರಾಗಿ ಕಣ್ಣೀರಿಟ್ಟರು.


ಆಶ್ಚರ್ಯದ ಸಂಗತಿ ಎಂದರೆ, ಕೈ ಪಕ್ಷದ ಮುಖಂಡರುಗಳಿಗೆ ಹಿಂದು ಮತ್ತು ದೇವರುಗಳು ಅಂದರೆ ಅಲರ್ಜಿ, ಅದರಲ್ಲಿ ಬಿಜೆಪಿ ಮುಖಂಡರುಗಳು ಬಹಿರಂಗ ವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದರೆ ಇವರೆಲ್ಲ ಆಡದ ಮಾತುಗಳಿಲ್ಲ ಮಾಡದ ಟೀಕೆ ಗಳಿಲ್ಲ. ಅದರಲ್ಲೂ ಪ್ರಗತಿಪರ, ಚಿಂತಕರು, ಜಾತ್ಯಾತೀತವಾದಿ ಮುಖಂಡರು ಗಳು ಕೊಡದ ಹೇಳಿಗೆ ಗಳಿಲ್ಲ.

ಇರಲಿ ಬಿಡಿ ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಮುಖಂಡರುಗಳು ಹಿಂದೆ ಆಡಿದ ಮಾತುಗಳು, ಇವರೇ ಮಾಡಿದ ಟೀಕೆಗಳು, ಜಾತ್ಯಾತೀತ ನಿಲುವುಗಳು ಮತ್ತು ಅವರ ಪಕ್ಷದ ಹಿಂದೂ ವಿರೋಧಿ ಸಿದ್ಧಾಂತ ಇವೆಲ್ಲ ಏನು? ಅವರ ನಂಬಿಕೊಂಡ ಮತದಾರರುಗಳಿಗೆ ಕೊಡುವ ಸಂದೇಶ ಏನು? ಅಂದರೆ ಇವರ ನಿಲುವು ಗಳು ಎಲ್ಲ ಸಮಯಸಾಧಕತನವೇ? ಎಲ್ಲ ಡೋಂಗಿ ಸಿದ್ಧಾಂತವೇ? ಕೆಲವರನ್ನು ಮೆಚ್ಚಿಸಲು ಮಾಡುವ ಸೋಗಲಾಡಿತನವೇ?
ಸಮಯಸಂಧರ್ಭಕ್ಕೆ ತಕ್ಕಂತೆ ನಡೆದು ಕೊಳ್ಳುವ ಇವರ ನಡೆ ಏನನ್ನು ಸೂಚಿಸುತ್ತೆ?
ವಿಧಾನಸೌಧ ಮುಖ್ಯಮಂತ್ರಿಯವರ ಕೊಠಡಿ ವಾಸ್ತು ಪ್ರಕಾರ ಬದಲಾಯಿಸಿ ಕೊಂಡರೆ ಅದಕ್ಕೆ ಟೀಕೆ,
ಮುಖ್ಯಮಂತ್ರಿ ಮತ್ತು ಮಂತ್ರಿ ಗಳು ದೇವಸ್ಥಾನ ಗಳಿಗೆ ತೆರಳಿದರೆ ಅದಕ್ಕೂ ಸಹ ಟೀಕೆ,
ಹೋಮ ಹವನ ಕಾರ್ಯಕ್ರಮ ಮಾಡಿದರೆ ಅದಕ್ಕೆ ಟೀಕೆ,
ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವ ಕಾರ್ಯಕ್ಕೆ ಟೀಕೆ,
ಕಾಲೇಜು ವಿಧ್ಯಾರ್ಥಿಗಳಿಗೆ ದೇಶಭಕ್ತಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೆ ಟೀಕೆ,
ಕೆಲ ವಿಚಾರ ವಾದಿಗಳು ಎಂತೆಂಥ ಹೇಳಿಕೆ ಗಳನ್ನು ಕೊಟ್ಟರು ಎಂದು ಜ್ನಾಪಿಸಿಕೊಳ್ಳಿ, ಶ್ರೀ ಸಾಯಿಬಾಬ ರವರ ಮರಣಕ್ಕೂ ಮುಂಚೆ, ಹಲವಾರು ಕಾಯಿಲೆಗಳಿಂದ ನರಳುತ್ತಿರುವ ತನ್ನನ್ನು ತಾನು ಗುಣಪಡಿಸಿಕೊಳ್ಳದ ಈ ಡೋಂಗೀ ಬಾಬ ಭಕ್ತರನ್ನು ಕಾಪಾಡುತ್ತಾನೆಯೆ? ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನದೊಳಗೆ ನೆರೆ ನೀರು ನುಗ್ಗಿದಾಗ, ಭಕ್ತರನ್ನು ರಕ್ಷಿಸುವುದು ಇರಲಿ ತನ್ನ ದೇವಸ್ಥಾನವನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಲಿಲ್ಲವಲ್ಲ. ಅತಿವೃಷ್ಟಿ ಯಿಂದ ನೆರೆ ಸಂತ್ರಸ್ತರಾದ ಜನರನ್ನು ಯಾವ ದೇವರು ಕಾಪಾಡಿದ? ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಟೀಕೆ ಮಾಡಿದ ಜನ ಇಂದು ಕಾಂಗ್ರೆಸ್ ಮುಖಂಡರ ಈ ನಡೆ ಏನಂತ ಉತ್ತರಿಸುವರು?
ಬಿಜೇಪಿ ಪಕ್ಷ ಮತ್ತು ಸರ್ಕಾರ ಏನೇ ಕಾರ್ಯಕ್ರಮ ನಡೆಸಿದರೂ ಹೀಗೆ ಎಲ್ಲ ವಿಷಯಗಳಲ್ಲಿ ಟೀಕೆ ಮಾಡಿ,  ಇವರ ವೋಟ್ ಬ್ಯಾಂಕ್ ನ ಮತದಾರರ ಮನ ಮೆಚ್ಚಿಸುವ ಈ ಜನ ಇಂದು ಮಾಡುತ್ತಿರುವುದೇನು.
ಯಾವುದೇ ಪಕ್ಷ ಕ್ಕೂ ಸಹ ಒಟ್ಟಿನಲ್ಲಿ ಎಲ್ಲರಿಗೂ ದೇವರು ಬೇಕು ಮತ್ತು ನಂಬಿಕೆಗೆ ಬೆಲೆ ಕೊಡ್ತಾರೆ ಅಂತ ಗೊತ್ತು. ಗೊತ್ತಿದ್ದರೂ ಯಾಕೆ ಒಂದು ವರ್ಗದ ಜನರನ್ನು ಮೆಚ್ಚಿಸಲು ಬೇರೆ ಯವರನ್ನು ಯಾಕೆ ಟೀಕೆ ಮಾಡಬೇಕು. ಇದು ಸಮಯಸಾಧಕತನವಲ್ಲದೆ ಬೇರೆ ಇನ್ನೇನು?
ಪ್ರತಿಯೊಬ್ಬರಿಗೂ ನಂಬಿಕೆ ಅನ್ನುವುದು ಇರುತ್ತೆ, ಆ ನಂಬಿಕೆ ಕೆಲವರನ್ನು ಕಾಪಾಡುತ್ತೆ. ಆ ನಂಬಿಕೆ ಮತ್ತು ಅಶಾವಾದ ದಿಂದ ಕೆಲವರು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಗೆಲುವು ಸಾಧಿಸುತ್ತಾರೆ. ಆದ್ದರಿಂದ ಆ ನಂಬಿಕೆಗಳಿಗೆ ಪ್ರಶ್ನೆ ಸಲ್ಲದಲ್ವೆ.
ಏನೇ ಆಗಲಿ ಸೋನಿಯ ಗಾಂಧಿ ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

ಭಾನುವಾರ, ಆಗಸ್ಟ್ 7, 2011

ಮದನಾರಿ ಬೇಕಾ?



ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ "ಮದನಾರಿ", ಚಿತ್ರರಂಗದ ಭಾಷೆಯಲ್ಲಿ ಹೇಳಬೇಕಾದರೆ ಇದೊಂದು ಮಸಾಲ ಕಾರ್ಯಕ್ರಮ, ಇದರ ಮುಖ್ಯ ಆಕರ್ಷಣೆ ಎಂದರೆ ಐಟಮ್ ಗರ್ಲ್ ಗಳ ಬಗ್ಗೆ ಸಂಪೂರ್ಣ ವಾದ ವಿವರ ಅವರ ಜೀವನದ ಏಳು ಬೀಳುಗಳ ಬಗ್ಗೆ ವಿವರ, ಅವರಿಗಿರುವ ಬಾಯ್ ಫ್ರೆಂಡ್ ಗಳು ಜತೆಯಲ್ಲಿ ಇರುವವರ ಹಾಗು ಕೈ ಕೊಟ್ಟವರ ಬಗ್ಗೆ ಮಾತು. ಹಾಗು ಚಿತ್ರ ರಂಗಕ್ಕೆ ಪ್ರವೇಶ ಅದರ ಹಿನ್ನೆಲೆ, ಇನ್ನು ಮುಂತಾದ ಚಿತ್ರ ವಿಚಿತ್ರ ಸಂಗತಿ ಗಳಿಂದ ಕಾರ್ಯಕ್ರಮ ವನ್ನು ನಿರೂಪಕಿ ದಿವ್ಯಶ್ರಿ ಅವರಿಂದ ನಿರೂಪಿತ ವಾಗಿತ್ತದೆ. ಪ್ರತಿ ಭಾನುವಾರ ರಾತ್ರಿ ಹಾಗೂ ವಾರದ ದಿನಗಳಲ್ಲಿ ಮತ್ತೆ ಮರುಪ್ರಸಾರ ಮಾಡಲಾಗುತ್ತದೆ.

ಆದರೆ ಇಷ್ಟೇ ಆಗಿದ್ದರೆ ಈ ಕಾರ್ಯಕ್ರಮದ ಬಗ್ಗೆ ನಾವು ಇಲ್ಲಿ ಟೀಕೆ ಮಾಡುವ ಪ್ರಮೇಯ ವೇ ಬರುತ್ತಿರಲಿಲ್ಲ. ಈ ಎಲ್ಲ ವಿವರ ಗಳ ಜತೆಗೆ ಅಶ್ಲೀಲ ದೃಶ್ಯ ಗಳನ್ನು ಪ್ರಸಾರ ಮಾಡುತ್ತಾರಲ್ಲ ಅದು ಹೇಸಿಗೆ ಹುಟ್ಟಿಸುತ್ತೆ.

ಮೊದಲನೆಯದಾಗಿ, ಇಂತಹ ಕಾರ್ಯಕ್ರಮ ಕೊಡಿ ಅಂತ ಕರ್ನಾಟಕದ ಯಾವ ವೀಕ್ಷಕ ನೂ ಇವರಿಗೆ ದುಂಬಾಲು ಬಿದ್ದಿರಲಿಲ್ಲ. ಕೇವಲ ಒಂದು ವರ್ಗದ ವೀಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಸಾರ ಮಾಡುತ್ತಾರಲ್ಲ ಏನನ್ನಬೇಕು ಇವರನ್ನು. ನೋಡಲೇ ಬೇಕು ಎನ್ನುವ ತೆವಲು ತೀಟೆ ಇರುವ ಜನರು ಹೇಗಾದರು ಮಾಡಿ ನೋಡಿಯೇ ನೋಡುತ್ತಾರೆ ಅದು ಯೂಟ್ಯೂಬ್ ಆಗಿರಬಹುದು, ಅಶ್ಲೀಲ ವೆಬ್ ಸೈಟ್ ಆಗಿರಬಹುದು, ಎಫ್ ಚಾನೆಲ್, ಕೆಲ ಹಿಂದಿ ಚಾನೆಲ್ ಗಳು ಕೊನೆಗೆ ಬ್ಲೂ ಫಿಲ್ಮ್ ಕ್ಯಾಸೆಟ್ ಗಳನ್ನು ಹಾಕಿಯಾದರು ನೋಡುತ್ತಾನೆ.
ಸಂಪೂರ್ಣ ಕುಟುಂಬ ವೀಕ್ಷಿಸುವ ಸುದ್ದಿ ವಾಹಿನಿಗಳಲ್ಲಿ ಇಂತಹ ಅವಲಕ್ಷಣಗಳು ಬಂದರೆ ಮಡಿವಂತ ಜನ ಟಿವಿ ಬಂದ್ ಮಾಡುತ್ತಾರೆ ಅಥವ ಚಾನೆಲ್ ಬದಲಾಯಿಸುತ್ತಾರೆ.
ಅತ್ಯಂತ ಅಶ್ಲೀಲ ವಾಗಿರುವ ಹಸಿ ಬಿಸಿ ದೃಶ್ಯಗಳನ್ನು ಒಂದರ ಹಿಂದೆ ಒಂದು ಪ್ರಸಾರ ಮಾಡುತ್ತ, ಅದು ಒಬ್ಬ ಹೆಣ್ಣು ಮಗಳ ಮುಖಾಂತರ ನಿರೂಪಿಸುತ್ತಾರಲ್ಲ, ಕೊನೆ ಪಕ್ಷ ನಿರೂಪಿಸುವವರಿಗಾದರು ನಾಚಿಕೆ ಯಾಗಲ್ವೆ.

ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನುವಂತೆ ಇವರ ಕೆಲ ಸುದ್ದಿ ವಿಶ್ಲೇಷಕರು ರಾಜಕೀಯ ವನ್ನೇ ಅರೆದು ಕುಡಿದಂತೆ ಮಾತನಾಡುತ್ತಾರೆ ಆದರ ಜತೆಗೆ ಇಂತಹ ಕೀಳು ಮಟ್ಟದ ಕಾರ್ಯಕ್ರಮವನ್ನು ಸಹ ಬಿತ್ತರಿಸುತ್ತಾರೆ .
ಇಂತಹ ಕಾರ್ಯಕ್ರಮ ಗಳಿಂದ ಜನರನ್ನು ಸೆಳೆಯುತ್ತೇವೆ ಅನ್ನುವ ಭ್ರಮೆ ಯಲ್ಲಿದಾರೆ ಈ ಕಾರ್ಯಕ್ರಮದ ನಿರ್ಮಾಪಕರು.

ಕೊನೆ ಪಕ್ಷ ನಟಿಯರ ಸಂದರ್ಶನ ವೇನಾದರು ಅಲ್ಲಿದೆಯೇ? ಅದೂ ಇಲ್ಲ ಹಿನ್ನಲೆ ಧ್ವನಿಯಲ್ಲಿ ನಟಿಯ ಬಗ್ಗೆ ಮಾತುಗಳು ಮತ್ತು ದೃಶ್ಯ ಮಾತ್ರ ಬಹು ಅಶ್ಲೀಲ ವಾದದ್ದು.
ಅದು ಅಲ್ಲದೆ ಮೊನ್ನೆ ತನುಶ್ರಿ ದತ್ತಾ ಬಗೆಗಿನ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಜತೆಗಿನ ಪ್ರಚೋದಕ ಚುಂಬನ ದೃಶ್ಯಗಳು ಹಾಗೂ ಬೆಡ್ ರೂಮಿನ ಹಸಿ ಹಸಿ ದೃಶ್ಯಾವಳಿಗಳನ್ನು ಯಾವುದೇ ಸೆನ್ಸಾರ್ ಇಲ್ಲದೆ ಬಿತ್ತರಿಸಿದರು.

ಪ್ರತಿವಾರ ಒಬ್ಬ ನಟಿಮಣಿಯ ಮೈ ಮಾದಕ ಚೆಲುವುಗಳ ಬಗ್ಗೆ ಹಾಗು ಅವರು ನಟಿಸಿದ ಹಸಿ ಹಸಿ ಕಾಮ ಪ್ರಚೋದಕ ದೃಶ್ಯಗಳ ಜೋಡಣೆ ಯೊಂದಿಗೆ ೩೦ ನಿಮಿಷದ ಕಾರ್ಯಕ್ರಮ ತಯಾರು. ಒಂದು ವಾರ ಮುಮೈತ್ ಖಾನ್ ನಟಿಸಿದ ಚಿತ್ರಗಳ ಬಗ್ಗೆ ವರದಿಯಾಯ್ತು ಹಾಗೆ ಇನ್ನೊಂದು ಒಂದು ವಾರ ಹಾಟ್ ಮಾಡೆಲ್ ಮಲ್ಲಿಕಾ ಶೆರಾವತ್. ಇಂಥ ನಟಿಯರು ನಟಿಸಿದ ಎಲ್ಲ ಚಿತ್ರಗಳ ಸಕತ್ ಹಾಟ್ ಹಾಟ್ ದೃಶ್ಯಗಳನ್ನು ಒಂದೇ ಕಾರ್ಯಕ್ರಮದಲ್ಲಿ ನೋಡುವ ಸೌಭಾಗ್ಯ ನಮ್ಮ ಕರುನಾಡ ಕನ್ನಡಿಗನಿಗೆ. ಎಲ್ಲೆಲ್ಲಿಂದನೋ ಹೆಕ್ಕಿ ತಂದು ನಮ್ಮ ನಾಡಿನ ಜನರಿಗೆ ಉಣಬಡಿಸುವ ಹರಕತ್ತು ಏನಿದೆಯೋ ಕಾಣೆ?

ಹಿರಿಕಿರಿಯರು ನೋಡುವ ಕನ್ನಡ ಚಾನೆಲ್ ನಲ್ಲಿ ಇಂತಹ ದೃಶ್ಯಗಳು ಯಾಕೆ ಬೇಕು?

ಹೋಗಲಿ ಈ ನಟಿ ಮಣಿಯರು ಕನ್ನಡ ನಾಡಿನವರಾ? ಇಲ್ಲ ಇವರು ನಟಿಸಿದ ಚಿತ್ರಗಳು ಕನ್ನಡ ಚಿತ್ರಗಳಾ? ಇಲ್ಲ ಕೊನೆ ಪಕ್ಷ ಹೊಸ ಕನ್ನಡ ಚಿತ್ರದಲ್ಲಿ ನಟಿಸಲು ಏನಾದರು ರಾಜ್ಯಕ್ಕೆ ಬಂದಿದ್ದಾರಾ? ಯಾವುದು ಇಲ್ಲ. ಬಹುತೇಕ ದೃಶ್ಯಗಳು ಬೇರೆ ಭಾಷೆಯ ಚಿತ್ರದ್ದು, ನಟಿಮಣಿಯರು ಸಹ ಹೊರಗಿನವರೇ.

ನಮ್ಮ ಕನ್ನಡ ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮದ ಅವಕಶ್ಯತೆ ಇದೆಯಾ?

ಇವರು ಎಂತಹ ಹುಷಾರು ಜನ ಎಂದರೆ, ಸಾಮನ್ಯವಾಗಿ ಇವರ ಎಲ್ಲ ವೀಡಿಯೋ ಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಮಂದಿ  ಮದನಾರಿ ಬಗೆಗಿನ ಒಂದೇ ಒಂದು ಕಾರ್ಯಕ್ರಮವನ್ನು ಇದುವರೆವಿಗೂ ಅಪ್ ಲೋಡ್ ಮಾಡಿಲ್ಲ. ಇಲ್ಲೇ ಗೊತ್ತಾಗುತ್ತೆ ಇವರು ಎಂತಹ ಚಾಲಾಕಿ ಜನ ಎಂದು.

ಈ ಚಾನೆಲ್ ಗೆ ವಿ.ಭಟ್ ಬೇರೆ ಮುಖ್ಯಸ್ಥ ರಾಗಿದ್ದಾರೆ.  ಸುದ್ದಿ ಮಾಧ್ಯಮ ಅದರಲ್ಲೂ ದೃಶ್ಯ ಮಾಧ್ಯ್ವಮ ಎಷ್ಟೊಂದು ಜವಬ್ದಾರಿ ಯುತವಾಗಿರಬೇಕು ಎನ್ನುವುದನ್ನು ಅವರು ತುಂಬಾ ಲೇಖನ ಗಳಲ್ಲಿ ಬರೆದಿದ್ದಾರೆ. ಕಾಕತಾಳೀಯ ಅಂದ್ರೆ ಅವರು ಮುಖ್ಯಸ್ಥ ರಾಗಿರುವ ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮ ಗಳು ಪ್ರಸಾರ ವಾಗುತ್ತಿವೆ.


ಕರ್ನಾಟಕ ದ ಖ್ಯಾತ ವಿಖ್ಯಾತ ಹಮೀದ್ ಪಾಳ್ಯ ಮತ್ತು ರಂಗನಾಥ ಭಾರಧ್ವಾಜ್ ಎನ್ನುವ ಮಹಾಶಯರಿಬ್ಬರ ಮುಂದಾಳತ್ವದಲ್ಲಿ ಸುವರ್ಣ ನ್ಯೂಸ್ ರಥ ಓಡುತ್ತಿದೆ. ರಾಜ್ಯದ ರಾಜಕೀಯವನ್ನು  ವ್ಯಂಗ್ಯ, ವಿಡಂಬನೆ, ಟೀಕೆ ಗಳಿಂದ ನಿರೂಪಿಸುತ್ತಿರುವ ಈ ಮಂದಿ ತಮ್ಮದೇ ಚಾನೆಲ್ ನಲ್ಲಿ ಬರುತ್ತಿರುವ ಈ ಮದನಾರಿ ಕಾರ್ಯಕ್ರಮದ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ.
ಸ್ವಲ್ಪ ಲಗಾಮು ಹಾಕಿ ಇಂತಹ ಕಾರ್ಯಕ್ರಮ ಗಳನ್ನು ನಿಯಂತ್ರಿಸಿದರೆ ಅವರ ಚಾನೆಲ್ ಗೆ ಇರುವ ಹೆಸರು ಇಮ್ಮಡಿ ಯಾಗುವುದರಲ್ಲಿ ಸಂಶಯವಿಲ್ಲ.

ಸೋಮವಾರ, ಆಗಸ್ಟ್ 1, 2011

ಮನೆಗೆ ಬೆಂಕಿ ಬಿದ್ರೆ ಅದ್ರಲ್ಲಿ ಬೀಡಿ ಹಚ್ಚೋ ಜನ

ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜಾ ತಗೋಳ್ಳೋದು ಅಂದ್ರೆ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
ವಿನಾ ಕಾರಣ ವಾದ ವಾಗ್ವಾದ ಗಳಿಗೆ ಆಸ್ಪದ ಮಾಡಿ ಕೊಟ್ಟು ಮಜಾ ತಗೊಳ್ತಿದ್ದಾರೆ ನಮ್ಮ ಸುವರ್ಣ ನ್ಯೂಸ್ ನ ಮಂದಿ.



ಶುಕ್ರವಾರ, ಜುಲೈ 29, 2011

ತಣ್ಣಗಾದ ವಿವಾದ


ಸಿಂಗಮ್ ಚಿತ್ರದ ಸಂಭಾಷಣೆ ಯ ವಿವಾದ ಈಗ ಮುಗಿಯುವ ಹಂತಕ್ಕೆ ಬಂದಿದೆ ಅಂತ ಕಾಣಿಸ್ತಾ ಯಿದೆ. ಆ ಸಂಭಾಷಣೆ ಯನ್ನು ಮ್ಯೂಟ್ ಮಾಡಿ ಅಥವ ಕತ್ತರಿ ಪ್ರಯೋಗ ಮಾಡಿ ಪ್ರದರ್ಶನ ಮಾಡುತ್ತೇವೆ ಎಂದು ಚಿತ್ರ ವಿತರಕರು ಹಾಗು ನಿರ್ಮಾಪಕರು  ಭರವಸೆ ಕೊಟ್ಟಿದ್ದಾರೆ. ಸ್ಯಾಟಲೈಟ್ ನಿಂದ ನೇರ ಚಿತ್ರ ಪ್ರದರ್ಶನ ವಾಗುತ್ತಿರುವ ಚಿತ್ರಮಂದಿರ ಗಳಲ್ಲಿ ಈಗಾಗಲೇ ಕತ್ತರಿ ಪ್ರಯೋಗ ನಡೆದಿದೆ ಹಾಗು ರೀಲ್ ಗಳಲ್ಲಿ ಈ ಬದಲಾವಣೆ ಯನ್ನು ಆದಷ್ಟು ಬೇಗ ಮಾಡುತ್ತೇವೆ ಎಂದಿದ್ದಾರೆ.
ಈಗ ಆಗಲೇ ಆಗಬೇಕಾಗಿರುವ ಡ್ಯಾಮೇಜ್ ಆಗಿಯಾಗಿದೆ. ಬಹು ಜನಕ್ಕೆ ಮಾಧ್ಯಮ ಗಳ ಮೂಲಕ ಈ ಸುದ್ದಿ ತಿಳಿದು ಹೊರ ರಾಜ್ಯದ ಜನರಲ್ಲಿ ಒಂದು ತರಹ ಕುತೂಹಲ ಉಂಟಾಗಿದ್ದು ಚಿತ್ರಕ್ಕೆ ಹೆಚ್ಚಿನ ಪ್ರಚಾರ ಲಭ್ಯವಾಗಿದೆ.
ಈಗ ಇರುವ ಪ್ರಶ್ನೆ ಯೆಂದರೆ, ಈ ಕತ್ತರಿ ಪ್ರಯೋಗ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವೇ ಅಥವ ಹೊರರಾಜ್ಯದ ಎಲ್ಲ ಪ್ರಿಂಟ್ ಗಳಲ್ಲಿ ಈ ಕಾರ್ಯ ಮಾಡಲಾಗುತ್ತದೆಯೋ?  ಕತ್ತರಿ ಪ್ರಯೋಗ ಮಾಡಿದರೆ ಎಲ್ಲ ಪ್ರಿಂಟ್ ಗಳಲ್ಲಿ ಮಾಡಲೇ ಬೇಕು.
ಒಂದು ವೇಳೆ ಮ್ಯೂಟ್ ಮಾಡಿದರೆ, ಹೊರ ರಾಜ್ಯದ ಜನರಲ್ಲಿ ಇದನ್ನು ಯಾಕೆ ಮ್ಯೂಟ್ ಮಾಡಿದ್ದಾರೆ ಎನ್ನುವ ಕುತುಹಲ ವಿರುತ್ತೆ, ಹಾಗು ಅದರ ಬಗ್ಗೆ ಗಮನ ವಹಿಸಿದರೆ ಅದರ ವಿಷಯ ಗೊತ್ತಾಗುತ್ತೆ. "ಓಹೋ ಕನ್ನಡಿಗರನ್ನು ನಾಯಿಗಳು ಎಂದು ಬೈದಿದ್ದಾನ ಅಜಯ್ ದೇವಗನ್" ಎಂದು ಬಾಯಿಗೆ ಬಾಯಿಗೆ ಹರಡುತ್ತಾ ಹೋಗುತ್ತೆ. ಹೀಗೆ  ಇನ್ನಷ್ಟು ಡ್ಯಾಮೆಜ್ ಆಗ್ತಾ ಹೋಗುತ್ತೆ. ಇದನ್ನು ತಡೆಯಲು ಸಾಧ್ಯವಿಲ್ಲ.
ಮೊದಲೇ ಶಿವಸೇನೆ, ಎಮ್.ಎನ್.ಎಸ್ ಹಾಗು ಎಮ್.ಇ.ಎಸ್ ಪುಂಡರಿಗೆ ಬೆಳಗಾವಿಯಲ್ಲಿ ನಮ್ಮ ಕನ್ನಡಿಗರನ್ನು ಕೀಟಲೆ ಮಾಡಲು ಇಷ್ಟು ಸಾಕಲ್ವ.
೪ ವರ್ಷಗಳ ಹಿಂದೆ ತಮಿಳಿನಲ್ಲಿ ಅದೆಂತಹದ್ದೋ ಹಿಂಸೈ ಅರಸನ್ ೨೩ ಪುಲಿಕೇಶಿ ಎನ್ನುವ ಸಿನಿಮಾ ಬಂದಿತ್ತು. ಒಬ್ಬ ಹೇಡಿ ಪಾತ್ರ ಕ್ಕೆ  ವೀರ ಕನ್ನಡಿಗ ಪುಲಿಕೇಶಿ ಯ ಹೆಸರಿಟ್ಟು ಅಂದು ತಮಿಳರು ಅವಮಾನ ಮಾಡಿದ್ದರು, ನಮ್ಮ ಹೋರಾಟಗಾರರ ಫಲದಿಂದ ಆ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಯಾಗಲಿಲ್ಲ ಆದರೆ, ಹೊರ ರಾಜ್ಯಗಳಲ್ಲಿ ಆ ಚಿತ್ರ ಅಪಾರ ಹಣ ಮಾಡಿತು, ಕರ್ನಾಟಕದಲ್ಲಿ ಅಂತಹ ನಷ್ಟ ವಾಗಲಿಲ್ಲ. ಇನ್ನು ತಮಿಳು ಹಾಗು ತೆಲುಗು ಚಾನೆಲ್ ಗಳಲ್ಲಿ ಈ ಚಿತ್ರ ಪ್ರಸಾರ ವಾಗುತ್ತಲೆ ಇದೆ. ಆದರೆ ಆ ಹೆಸರಿನಿಂದ ಘಾಸಿ ಯಾಗಿದ್ದು ನಮ್ಮ ಕನ್ನಡದ ಹೃದಯಗಳಿಗೆ, ಅವಮಾನ ವಾಗಿದ್ದು ನಮ್ಮ ಕನ್ನಡ ವೀರನಿಗೆ.
ಅವರ ಪ್ರಕಾರ ಇದೊಂದು ಕಾಲ್ಪನಿಕ ಕಥೆ, ಪುಲಿಕೇಶಿ ಯ ಹೆಸರನ್ನು ತಮಿಳರು ಉಪಯೋಗಿಸುವುದೇ ಇಲ್ಲ  ಅಂತಹ ಹೆಸರಿನ ವ್ಯಕ್ತಿಗಳು ಸಹ ಇಲ್ಲ  ಹಾಗಿದ್ದರೆ ಪುಲಿಕೇಶಿ ಯ ಹೆಸರು ಯಾಕೆ ಬೇಕಾಗಿತ್ತು? ಚೋಳನ್, ವರ್ಮ ನ್, ಪಾಂಡ್ಯನ್ ಮುಂತಾದ ಹೆಸರು ಇರಲಿಲ್ವೆ?
ರಾಜಕೀಯ ನಾಯಕರು ಸಹ ಇದರ ಬಗ್ಗೆ ಯಾವುದೇ ರೀತಿಯ ಸೊಲ್ಲೆತ್ತದೇ ಸುಮ್ಮನಾದರು, ಆದರೆ ಅವಮಾನ ವಾಗಿದ್ದು ನಮಗೆ ಅಲ್ವಾ.
ನಟ ಪ್ರಕಾಶ್ ರೈ ಹೊರ ರಾಜ್ಯದಲ್ಲಿ ಕನ್ನಡದ ಬಗ್ಗೆ ಎಂದಾದರು ಒಳ್ಳೆಯ ಮಾತುಗಳನ್ನು ಆಡಿದ್ದು ಇದುವರೆವಿಗೂ ಕೇಳಿಲ್ಲ. ಬೆಂಗಳೂರಿಗೆ ಬಂದಾಗ ಮಾತ್ರ ಅದು ಇದು ಅಂತ ಕುಯ್ತಾನೆ. ಆದರೆ ಕಾವೇರಿ ಗಲಾಟೆ ಸಂಧರ್ಭದಲ್ಲಿ ನಾನು ಕರ್ನಾಟಕದವನು ನಿಜ ಆದರೆ ನನ್ನ ಮಾತೃ ಭಾಷೆ ತುಳು ಎಂದು ಹೇಳಿ ಹಾಗಾಗಿ ನಾನು ಯಾರಿಗು ಸಪೋರ್ಟ್ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದ. ಹೀಗಿರುವಾಗ ಕನ್ನಡಮ್ಮನ ಸೊಲ್ಲೆತ್ತದ ಇಂತಹವರಿಂದ ಕನ್ನಡದ ಬಗ್ಗೆ ಅಭಿಮಾನ ಹೇಗೆ ಬಯಸುತ್ತೇವೆ?
ಅವರ ಸಮರ್ಥನೆ ಸಹ ಅಸಹ್ಯ ತರಿಸುವಂತಹದ್ದು. ನಾಚಿಕೆ ಯಾಗಬೇಕು ಇಂತಹ ಜನರಿಗೆ. ಕೇವಲ ಹಣ ಹಾಗು ಹೆಸರಿನ ಹಿಂದೆ ಬಿದ್ದಿರುವಾಗ ಅಭಿಮಾನ, ಆಪ್ಯಾಯತೆ, ಪ್ರೀತಿ ವಿಶ್ವಾಸ ಅರಿವೆಲ್ಲಿರುತ್ತೆ.
ಏನೇ ಆಗಲಿ, ಕನ್ನಡಮ್ಮ ನ ಸೇವೆಗೆ ತುಳು, ಕೊಂಕಣಿ, ತೆಲುಗು, ಬ್ಯಾರಿ, ಉರ್ದು ಹಾಗು ಮತ್ತಿತರ ಮಾತೃ ಭಾಷಿಕರು ಕೊಟ್ಟಿರುವ ಕೊಡುಗೆ ಎಂತದ್ದು ಎನ್ನುವುದು ಎಲ್ಲರಿಗೂ ಗೊತ್ತು. ಅವರಿಗಿರುವ ಅಭಿಮಾನ ಈ ನಾಡಿನಲ್ಲಿ ಹುಟ್ಟಿ ಆಡಿ ಬೆಳೆದ ಈ ನಾಡಿನ ಪ್ರತಿಯೊಬ್ಬ ಕಂದಮ್ಮ ಗಳಿಗೆ ಮಾದರಿಯಾಗಲಿ.

ಮಂಗಳವಾರ, ಜುಲೈ 26, 2011

ಪವಿತ್ರ /ಅಪವಿತ್ರ

ನಮ್ಮಲ್ಲಿನ ಪತ್ರಿಕಾ ವರದಿಗಾರರು ಪಕ್ಷಪಾತಿ ಯಾಗಿ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಅವರು ನೀಡುತ್ತಿರುವ ವರದಿಗಳೇ ಕಾರಣ. ಸನ್ಮಾನ್ಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವನ್ನು ಬೀಳಿಸಬೇಕೆಂದು ನಮ್ಮ ಕೆಲ ಪತ್ರಕರ್ತ ಮಿತ್ರರು ನಿರ್ಧಾರ ಮಾಡಿದ್ದಾರೆಂದು ಕೆಲ ಪತ್ರಿಕಾ ವರದಿಗಳನ್ನು ನೋಡಿದರೆ ಗೊತ್ತಾಗುತ್ತೆ. ಬಲಪಂತೀಯ ಹಾಗು ಜಾತೀವಾದಿ ಸರ್ಕಾರವನ್ನು ಶತಸಿದ್ದ ತೆಗೆದು ಹಾಕಲೇ ಬೇಕೆಂದು ನಿರ್ಧರಿಸುವಂತಿದೆ ಈ ಜನ.

ಮಾಡಿದ್ದುಣ್ಣೊ ಮಹರಾಯ ಯಾರ್ಯಾರು ತಪ್ಪು ಮಾಡಿದ್ದಾರೊ ಅವರು ಅನುಭವಿಸುವುದು ಸಹಜ. ಸ್ವಜನ ಪಕ್ಷಪಾತಿ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು.



ನಿನ್ನೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಆಷಾಢ ಮಾಸದ ಅಂಗವಾಗಿ ಭಾನುವಾರ ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು. ಮೈಸೂರಿನ ಬಹು ಜನ ಗಮನಿಸಿದ ಹಾಗೆ ಸಚಿವರು ಕಳೆದ ೩ ವರ್ಷಗಳಿಂದ ಈ ಕಾರ್ಯ ಮಾಡುತ್ತ ಬಂದಿದ್ದಾರೆ ಆದರೆ ಮಾಧ್ಯಮಗಳಲ್ಲಿ ವರದಿ ಯಾಗಿದ್ದು ಮಾತ್ರ ಇಂಧನ ಸಚಿವೆ ಸರ್ಕಾರದ ಉಳಿವಿಗಾಗಿ ಶೋಭಾ ಚಾಮುಂಡಿ ಪೂಜೆ ಎಂದು.


ಮೊದಲೇ ಸರ್ಕಾರ ಸಂಕಷ್ಟದಲ್ಲಿದೆ, ಅಂತದ್ರಲ್ಲಿ ಈ ಯಮ್ಮ ಹತ್ತಿದ್ದಕ್ಕು ಪೂಜೆ ಮಾಡಿದ್ದಕ್ಕು ಸರಿ ಹೋಯ್ತು,ಹಾಗೆನೆ  ಕಾಗೆ ಕುಳಿತುಕೊಳ್ಳೋದಕ್ಕು ಮರದ ಕೊಂಬೆ ಬಿತ್ತು ಅನ್ನುವ ಹಾಗೆ ಇಂತಹದಕ್ಕೆ ಕಾಯುತಿದ್ದ ಪ್ರತಿಪಕ್ಷದವರು ಹಾಗು ಮಾಧ್ಯಮದವರು ತಮಗೆ ಬೇಕಾದ ಬಣ್ಣ ಬಳಿದು ಅದಕ್ಕೊಂದು ಅಪವಿತ್ರ ಅನ್ನುವ ಹಾಳೆ ಯನ್ನು ಅಂಟಿಸಿ ಈಗ ಮಜಾ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ.
ಶೋಭಾ ಮೇಡಮ್ ಬೆಟ್ಟ ಹತ್ತಿದ್ದಕ್ಕೆ ಮೆಟ್ಟಿಲುಗಳ ಪಾವಿತ್ರ್ಯ ಹಾಳಾಗಿದೆ ಎಂದು ಕೈ ಕಾರ್ಯಕರ್ತರು ಕೈಯಿಂದ ಮೆಟ್ಟಿಲುಗಳನ್ನು ತೊಳೆಯುವ ಕಾರ್ಯ ನಡೆಸಿಯೇ ಬಿಟ್ಟರು. ಜತೆಗೆ  ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶೋಭಾ ಕರಂದ್ಲಾಜೆಗೆ ಧಿಕ್ಕಾರ, ಶೋಭಾ ಮೆಟ್ಟಿಲು ಏರಿದ್ದರಿಂದ ಮೆಟ್ಟಿಲಿಗೆ ಕಳಂಕ ಎಂಬ ಘೋಷಣೆ  ಸಹ ಕೂಗಿದರು.
ಈ  ಜಾತ್ಯಾತೀತ ವಾದಿ ಕಾಂಗ್ರೆಸ್ಸಿಗರಿಗೆ ಪವಿತ್ರ ಅಪವಿತ್ರ ಅನ್ನೋ ಶಬ್ದ ಅವರ ಶಬ್ದಕೋಶದಲ್ಲಿ ಇದೆಯಾ ಎಂದು ಹುಡುಕಿ ನೋಡಬೇಕು!:) 
ಅಲ್ಲಾ ಸ್ವಾಮಿ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸ್ತಾರಲ್ಲ ಇವರು ಎಂತಹ ಜನ! ದೇವರು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಹಿಂದೂ, ವೇದ, ಮುಂತಾದ ಶಬ್ದಗಳನ್ನು ಎಂದೋ ತಮ್ಮ ಡಿಕ್ಷನರಿಯಿಂದ ಇವರು ಕಿತ್ತು ಹಾಕಿದ್ದಾರೆ, ಹೀಗಿರುವಾಗ ಪವಿತ್ರ ಅಪವಿತ್ರ ಅನ್ನೋ ಪ್ರಶ್ನೆ ಎಲ್ಲಿಂದ ಬಂತು?
ಸುಮ್ಮನೆ ಪ್ರಚಾರಕ್ಕೆ ಏನೇನೋ ಗಿಮಿಕ್ ಮಾಡ್ತಾ ಟೈಮ್ ಪಾಸ್ ಮಾಡ್ತಾ ಇರೋ ಜನ ಇವರು. 
ಈ ಲೇಖನ ಬರಿಯೋ ಹೊತ್ನಲ್ಲಿ ಟಿವಿ ಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ಯವರಿಗೆ ಕಾಂಗ್ರೆಸ್ಸ್ ಕಾರ್ಯಕರ್ತ ರಿಂದ ಹಲ್ಲೆ ಎಂದು ವಾರ್ತೆ ಯಲ್ಲಿ ಬರ್ತಾ ಯಿತ್ತು. 
ಮೊದಲೇ ನೂರಾರು ಸಮಸ್ಯೆಗಳನ್ನು ಒಡಲಲ್ಲಿ ಕಟ್ಟಿಕೊಂಡಿರೋ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ