ಶುಕ್ರವಾರ, ಆಗಸ್ಟ್ 12, 2011

"ಉರುಮಿ"

ಗೆಣಸ್ಲೆ ಬ್ಲಾಗಿನ ಸಚಿನ್ ಭಟ್ ಬರೆದಿರುವ ಲೇಖನ.

ಕೆಲ ದಿನಗಳ ಹಿ೦ದೆ ಮಲಯಾಳ೦ನಲ್ಲಿ ’ಉರುಮಿ’ ಎ೦ಬ ಐತಿಹಾಸಿಕ ಚಿತ್ರ ಬಿಡುಗಡೆಯಾಯ್ತು. ಸ೦ತೋಷ್ ಸಿವನ್ ನಿರ್ದೇಶನದ ಈ ಚಿತ್ರಕ್ಕೆ ಪ್ರಥ್ವಿರಾಜ್, ಜೇನಿಲಿಯ, ಪ್ರಭುದೇವ, ವಿದ್ಯಾ ಬಾಲನ್, ನಿತ್ಯಾ ಮೆನನ್, ಟಬು, ಆರ್ಯ ಸೇರಿದ೦ತೆ ಭರ್ಜರಿ ತಾರಾಗಣದ ದ೦ಡೇ ಇದೆ. ಇದರ ಬಗ್ಗೆ ನನಗೂ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಮೊನ್ನೆ ಕೇರಳದಲ್ಲಿದ್ದಾಗ ಈ ಚಿತ್ರದ ನೋಡಲು ನನ್ನ ಸ್ನೇಹಿತರ ಜೊತೆ ಹೋಗಿದ್ದೆ. ನನಗೆ ಮತ್ತು ನನ್ನ ಇನ್ನೊಬ್ಬ ಗೆಳೆಯನನ್ನು ಹೊರತುಪಡಿಸಿದರೆ ಉಳಿದವರಿಗೆ ಕಾಳಕ್ಷರವೂ ಮಳಯಾಳ ಅರಿಯಿಲ್ಲೆ. ಆದರೂ ಕೇವಲ ನನ್ನ ಮೇಲಿನ ಪ್ರೀತಿಯಿ೦ದಲೇ ಬ೦ದವರಾಗಿದ್ದರೂ ಎಲ್ಲರಿಗೂ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಯ್ತು. ಇಷ್ಟೆಲ್ಲ ಪೀಠಿಕೆಗಳ ನ೦ತರ ನಾನೀಗ ಹೇಳಬೇಕೆ೦ದುಕೊ೦ಡಿರುವುದು ಆ ’ಉರುಮಿ’ ಚಿತ್ರದ ಕಥೆಯ ಪ್ರಧಾನ ಪಾತ್ರಧಾರಿ ವಾಸ್ಕೊ-ಡ-ಗಾಮನ ಬಗ್ಗೆಯೇ.


           ಶಾಲೆಯಲ್ಲಿ ಓದುವ ಯಾವುದೇ ಮಕ್ಕಳನ್ನು ಕೇಳಿ ನೋಡಿ: ಭಾರತ ವನ್ನು ಕ೦ಡುಹಿಡಿದವರು ಯಾರೆ೦ದು. ನೂರಕ್ಕೆ ತೊಭತ್ತೊ೦ಭತ್ತು ಜನ ಹೇಳುವುದು ವಾಸ್ಕೋ ಡಿ ಗಾಮನ ಹೆಸರನ್ನು. ಹೀರೋ, ಸ೦ಶೋಧಕ, ಭಾರತವನ್ನು ಹೊರಜಗತ್ತಿಗೆ ಪರಿಚಯಿಸಿದವನು, ಪೋರ್ಚುಗಲ್ಲಿನ ವೈಸರಾಯ್ ಹೀಗೆ ಇತಿಹಾಸವು ಗಾಮನನ್ನು ಹೊಗಳಲು ಬಳಸುವ ಉಪಮೆಗಳಿಗೇನೂ ಕಮ್ಮಿಯಿಲ್ಲ. new world encyclopediaವ೦ತೂ ಈತನನ್ನು most famous of all European explorers ಎ೦ದೇ ಬಣ್ಣಿಸುತ್ತದೆ. ಇ೦ತಿಪ್ಪ ಗಾಮನು ವ್ಯಾಪಾರಕ್ಕಾಗಿ ಭಾರತಕ್ಕೆ ೩ ಬಾರಿ ಭೇಟಿ ನೀಡಿದ್ದ. ಅದು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಇಲ್ಲಿನ ಅಪಾರ ಸ೦ಪತ್ತನ್ನು ಲೂಟಿ ಹೊಡೆಯುವುದಕ್ಕೆ ಎ೦ದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೇ ೨೦, ೧೪೯೮ರಲ್ಲಿ ಸಾವೋ ಗ್ಯಾಬ್ರಿಯಲ್. ಸಾವೋ ರಫೀಲ್, ಬೆರ್ರಿಯೊ ಎ೦ಬ ೩ ಹಡಗುಗಳು ಮತ್ತು ಸುಮಾರು ೧೭೦ ಜನರೊಡನೆ ಮೊದಲ ಬಾರಿ ಕೇರಳದ ಕಲ್ಲೀಕೋಟೆಗೆ ಬ೦ದಿಳಿದಾಗ ಅಲ್ಲಿನ ಸಾಗರೋತ್ತರ ವ್ಯಾಪಾರದ ಬಹುಪಾಲು ಅರಬ್ಬಿನ ಮುಸ್ಲೀಮರ ಕೈಯ್ಯಲ್ಲಿತ್ತು.  ಮುಸ್ಲೀಮರನ್ನು ವ್ಯಾಪಾರದಿ೦ದ ದೂರವಿಡುವ೦ತೆ ಇಲ್ಲಿನ ರಾಜನ ಮನವೊಲಿಸಲು ಪ್ರಯತ್ನಿಸಿದಾಗ, ಸಹಜ ಸೆಕ್ಯುಲರ್ ನಾಡಾಗಿದ್ದ ಕೇರಳದಲ್ಲಿ ಇವನ ಮಾತಿಗೆ ಬೆಲೆ ಸಿಗಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ತನ್ನ ಕೆಲ ಸಹಾಯಕರನ್ನು ವ್ಯಾಪಾರಕ್ಕಾಗಿ ಇಲ್ಲೇ ಬಿಟ್ಟು ಎರಡನೇ ದರ್ಜೆಯ ಕಾಳುಮೆಣಸುಗಳೊ೦ದಿಗೆ ಪುನಃ ತನ್ನ ದೇಶಕ್ಕೆ ಮರಳುತ್ತಾನೆ ಗಾಮ.
          ಈತ ಎರಡನೇ ಬಾರಿ ೨೦ ಸುಸಜ್ಜಿತ ಯುದ್ಧನೌಕೆಗಳೊಡನೆ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಡನೆ ಕಲ್ಲೀಕೋಟೆಗೆ ಬ೦ದಾಗ ಇತಿಹಾಸ ಮತ್ತೊ೦ದು ರಕ್ತಸಿಕ್ತ ಅಧ್ಯಾಯದ ಪ್ರಾರ೦ಭವಾಗುತ್ತದೆ. ಸ್ಥಳೀಯರೊಡನೆ ಈತನ ಘರ್ಷಣೆ ಪ್ರಾರ೦ಭವಾದಾಗ ೪೦ ಮೀನುಗಾರ ಸಮುದಾಯದವರ ಕೈ,ಕಾಲು ತಲೆಗಳನ್ನು ಕತ್ತರಿಸಿ ಸಮುದ್ರಕ್ಕೆಸೆಯುತ್ತಾನೆ. ಮುಸ್ಲೀಮರ ಮೇಲಿನ ಕೋಪದಿ೦ದಾಗಿ, ಮೆಕ್ಕಾದಿ೦ದ ಮರಳಿ ಬರುತ್ತಿದ್ದ ಹಡಗನ್ನು ಸಮುದ್ರದಲ್ಲಿ ಅಡ್ಡಗಟ್ಟಿ ಅದರಲ್ಲಿದ್ದವರನ್ನು ಬ೦ಧನದಲ್ಲಿಡುತ್ತಾನೆ. ಇವರನ್ನು ಬಿಡಿಸಲು ಚಿರಕ್ಕಲ್ಲಿನ ಅರಸು ಭಾನು ವಿಕ್ರಮನು ಕೊತ್ವಾಲ ಮತ್ತು ಬ್ರಾಹ್ಮಣನೊಬ್ಬನನ್ನು ಸ೦ಧಾನಕಾರರನ್ನಾಗಿ ಕಳಿಸಿದರೆ, ಸ೦ಧಾನಕ್ಕೆ೦ದು ಆಗಮಿಸಿದ ಕೊತ್ವಾಲನನ್ನು ಕೊ೦ದು, ಬ್ರಾಹ್ಮಣನ ಕಿವಿಗಳನ್ನು ಕತ್ತರಿಸಿ ನಾಯಿಯ ಕಿವಿಗಳನ್ನು ಹೊಲಿದು ಕಳಿಸುತ್ತಾನೆ. ಅಷ್ಟು ಮಾತ್ರವಲ್ಲದೇ ತನ್ನ ವಶದಲ್ಲಿದ್ದ ಹಡಗಿಗೆ ಬೆ೦ಕಿ ಹಚ್ಚಿ ಅದರಲ್ಲಿದ್ದ ಸುಮಾರು ೪೦೦ ಜನ ಮುಸ್ಲೀಮರನ್ನು ಜೀವ೦ತವಾಗಿ ದಹಿಸುತ್ತಾನೆ. ಈ ಹಡಗು ಸ೦ಪೂರ್ಣವಾಗಿ ಉರಿದು ಭಸ್ಮವಾಗಲು ೪ ದಿನ ತಗುಲಿತ್ತ೦ತೆ. ಅವನ ಕ್ರೌರ್ಯಕ್ಕೆ ತುತ್ತಾದವರಲ್ಲಿ ಕೇವಲ ಹಿ೦ದೂಗಳು ಮತ್ತು ಮುಸ್ಲೀಮರು ಮಾತ್ರವಿರಲಿಲ್ಲ. ಥೋಮಸ್ ಕ್ರಿಶ್ಚಿಯನ್ ಪ೦ಥದ ನೂರಾರು ಜನರನ್ನು ಬಲವ೦ತದಿ೦ದ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ೦ಥಕ್ಕೆ ಮತಾ೦ತರಿಸುತ್ತಾನೆ.
       
 ಹೀಗೆ ಗಾಮನ ಭಾರತದ ೩ ಬಾರಿಯ ಭೇಟಿ ಮತ್ತು ಕಲ್ಲೀಕೋಟೆ, ಕೊಚ್ಚಿ ಮತ್ತು ಚಿರಕ್ಕಲ್ ಪ್ರಾ೦ತ್ಯಗಳಲ್ಲಿ ಅವನ ಬರ್ಬರ ಕ್ರೌರ್ಯರ ಕರಾಳ ಮುಖಗಳನ್ನು ”ಉರುಮಿ” ಅದ್ಭುತವಾಗಿ ತೆರೆದಿಟ್ಟಿದೆ. ”ಉರುಮಿ” ಎನ್ನುವುದು ಕೇರಳದ ಕಳರಿಯಪಟ್ಟಿನಲ್ಲಿ ಬಳಕೆಯಲ್ಲಿದ್ದ ಒ೦ದು ವಿಶಿಷ್ಟವಾದ ಖಡ್ಗದ ಹೆಸರು. ೨ನೇ ಭಾರತದ ಭೇಟಿಯ ವೇಳೆ ಗಾಮನಿ೦ದಾಗಿ ತ೦ದೆಯನ್ನು ಕಳೆದುಕೊಳ್ಳುವ ’ಕೇಳು ನಾಯರ್’ ಎ೦ಬ ಬಾಲಕ ಮೃತಪಟ್ಟ ತನ್ನ ಸ೦ಬ೦ಧಿಕರ ಆಭರಣಗಳಿ೦ದ  ’ಉರುಮಿ’ ಎ೦ಬ ಖಡ್ಗವನ್ನು ತಯಾರಿಸುತ್ತಾನೆ. ೧೫೨೪ರಲ್ಲಿ ೩ನೇ ಬಾರಿ ಕೇರಳಕ್ಕೆ ಬರುವ ಗಾಮ ಮತ್ತು ಅವನ ಮಗ ಅಸ್ಟೇವಾಯೋ ಡ ಗಾಮರ ವಿರುದ್ಧ ಕೇಳು ನಾಯರ್ ಊರವರನ್ನು ಎತ್ತಿ ಕಟ್ಟಿ ಅವನನ್ನು ಕೊಲ್ಲುವುದು ಚಿತ್ರದ ಒಟ್ಟಾರೆ ಕಥೆ. ಸ್ಥಳೀಯ ಕಥೆಗಳಲ್ಲಿ ಕೇಳು ನಾಯರ್ ಗಾಮನನ್ನು ಕೊ೦ದ ಬಗ್ಗೆ ಉಲ್ಲೇಖವಿದ್ದರೂ ಯುರೋಪಿಯನ್ನರು ಮಾತ್ರ ಗಾಮ ಸತ್ತಿದ್ದು ಕೊಚ್ಚಿಯಲ್ಲಿದ್ದಾಗ ಅವನಿಗೆ ಬ೦ದ ಮಲೇರಿಯದಿ೦ದ ಎನ್ನುತ್ತಾರೆ. ಅದೇನೇ ಇದ್ದರೂ ಇ೦ಥದ್ದೊ೦ದು ಅದ್ಭುತ ಚಿತ್ರವನ್ನು ನೀಡಿದ ಸ೦ತೋಷ್ ಸಿವನ್-ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

          ಚಿತ್ರ ನೋಡಿ ಬ೦ದ ನನ್ನ ಗೆಳೆಯರೆಲ್ಲ ನನ್ನನ್ನು ಕೇಳಿದ್ದು ಒ೦ದೇ ಮಾತು. ವಾಸ್ಕೋಡಿಗಾಮ ಇಷ್ಟೊ೦ದು ಕೆಟ್ಟವನೆ೦ದು ನಾವು ಯಾವ ಪುಸ್ತಕದಲ್ಲೂ ಓದಿರಲೇ ಇಲ್ಲವಲ್ಲ? ಈ ಪ್ರಶ್ನೆಗೆ ಮಾತ್ರ ನನ್ನಲ್ಲಿ ಉತ್ತರವಿರಲಿಲ್ಲ. ನಮ್ಮ ಇತಿಹಾಸಕಾರರಿಗಾಗಲೀ, ಸಾಹಿತಿಗಳಿಗಾಗಲೀ ಸತ್ಯ ಹೇಳುವ ಧೈರ್ಯವಿರಲಿಲ್ಲವೇ? ಅಥವಾ ಕೆಲವೊ೦ದು ಸತ್ಯಗಳನ್ನು ತಿಳಿಯಲು ನಮ್ಮ ಜನ ತಯಾರಿಲ್ಲವೇ?

ಬುಧವಾರ, ಆಗಸ್ಟ್ 10, 2011

ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ ?

by PRATAP SIMHA, 
07.08.2011


ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ ?


ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ.
ಆದರೆ…
ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ ಎಸಗಿದ ಕೃತ್ಯಕ್ಕೆ ಸಂಘಟನೆಯನ್ನೇ ದೂರುವುದು ಸರಿಯಲ್ಲ. ಆರೆಸ್ಸೆಸ್ಸನ್ನು ನ್ಯಾಯಾಲಯವೇ ನಿರ್ದೋಷಿಯೆಂದು ತೀರ್ಪಿತ್ತಿದೆ. ಮಿಗಿಲಾಗಿ ಇಡೀ ಸಿಖ್ ಸಮುದಾಯವೇ ಇಂದಿರಾ ಗಾಂಧಿ ಹತ್ಯೆಗೆ ಕಾರಣ ಎನ್ನಲು ಸಾಧ್ಯವೆ? ಆರೆಸ್ಸೆಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಪ್ರಚಾರಾಂದೋಲನ ಕೂಡ ಆಧಾರರಹಿತ. ನಾನು ಆರೆಸ್ಸೆಸ್್ನ ದೊಡ್ಡ ಅಭಿಮಾನಿ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಏಕಮಾತ್ರ ರಾಜಕೀಯೇತರ ಸಂಘಟನೆ ಆರೆಸ್ಸೆಸ್. ನಮ್ಮ ಮೂಲಭೂತ ಹಕ್ಕುಗಳನ್ನು ಮರಳಿ ಗಳಿಸಿಕೊಡುವುದಕ್ಕಾಗಿ ಹಲವು ಜೀವಗಳನ್ನೇ ಬಲಿಕೊಟ್ಟ ಆರೆಸ್ಸೆಸ್ ಗೆ ನಾವೆಲ್ಲ ಆಭಾರಿಯಾಗಿರಬೇಕು…….”
ಮೊನ್ನೆ ಆಗಸ್ಟ್ 1ರಂದು ಕೊಚ್ಚಿಯಲ್ಲಿ ನಡೆದ ಸಮಾರಂಭವೊಂದನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್್ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಈ ರೀತಿ ಹೇಳುತ್ತಿದ್ದರೆ ನೆರೆದವರು ನಿಬ್ಬೆರಗಾಗಿ ನೋಡುತ್ತಿದ್ದರು!
ತುರ್ತು ಪರಿಸ್ಥಿತಿಯೊಂದೇ ಅಲ್ಲ. ಭಾರತ-ಪಾಕಿಸ್ತಾನ, ಭಾರತ-ಚೀನಾ ಯುದ್ಧಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ ಸಂಘಟನೆ ಅದು. ಯಾವ ಪ್ರಧಾನಿ ನೆಹರು ಗಾಂಧೀ ಹತ್ಯೆ ನೆಪದಲ್ಲಿ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೋ ಅದೇ ನೆಹರು ಚೀನಾ ಯುದ್ಧದ ತರುವಾಯ ಗಣರಾಜ್ಯೋತ್ಸವ ದಿನದ ಪರೇಡ್ ಗೆ ಆರೆಸ್ಸೆಸ್ ಗೆ ಆಹ್ವಾನ ನೀಡಿದ್ದರು. ಇಂದಿಗೂ ಬರ, ನೆರೆ, ಪ್ರವಾಹ, ಪ್ರಕೋಪ, ವಿಕೋಪ, ಭೂಕಂಪ, ದುರ್ಘಟನೆ ಯಾವುದೇ ಅನಾಹುತಗಳು ಸಂಭವಿಸಿದರೂ ಮೊದಲಿಗೆ ಧಾವಿಸುವುದು ಆರೆಸ್ಸೆಸ್, ನಂತರ ಆಗಮಿಸುತ್ತದೆ ನಮ್ಮ ಸರ್ಕಾರಿ ಆಡಳಿತ ಯಂತ್ರ. ಇಷ್ಟಾಗಿಯೂ ಬಹಳಷ್ಟು ಜನ ಆರೆಸ್ಸೆಸ್ ಶಾಖೆಗೂ ಮದ್ರಸಾಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಭಾವಿಸಿದ್ದಾರೆ, ಮಾಧ್ಯಮಗಳ ಒಂದು ವರ್ಗವೂ ಅದೇ ತೆರನಾದ ಪ್ರಚಾರಾಂದೋಲನ ಮಾಡುತ್ತದೆ, ಅನುಮಾನಗಳನ್ನು ಹೋಗಲಾಡಿಸುವ ಬದಲು ಹುಸಿ ವರದಿಗಳ ಮೂಲಕ ಅನುಮಾನಕ್ಕೆ ಇನ್ನಷ್ಟು ಆತಂಕಗಳ ಭಾರವನ್ನು ಹೊರಿಸುತ್ತವೆ. ಹಾಗಂತ ಆರೆಸ್ಸೆಸ್ ಬಗ್ಗೆ ಇರುವ ಅನುಮಾನಗಳು ನಿಜವಾಗಿ ಬಿಡುತ್ತವೆಯೇ? ಮದ್ರಸಾಗಳಿಗೂ, ಶಾಖೆಗಳಿಗೂ ವ್ಯತ್ಯಾಸವಿಲ್ಲವೆ? ಇಷ್ಟಕ್ಕೂ ಶಾಖೆಗಳಲ್ಲಿ ಹೇಳಿಕೊಡುವುದಾದರೂ ಏನನ್ನು? ತಥಾಕಥಿತ ವಿರೋಧಿಗಳು ಎಂದಾದರೂ ಶಾಖೆಗೆ ಹೋಗಿ ಸತ್ಯಾಸತ್ಯವನ್ನು ಪರೀಕ್ಷಿಸಿ ನೋಡಿದ್ದಾರೆಯೇ? ಆರೆಸ್ಸೆಸ್ ಕಚೇರಿಗಳಿಗೆ ಹೋಗಿ, ಅಲ್ಲಿರುವ ಗ್ರಂಥಾಲಯದ ಕಪಾಟುಗಳನ್ನು ತಡಕಾಡಿದರೆ ಏನು ಸಿಗಬಹುದು ಅಂದುಕೊಂಡಿರಿ?

ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಶಿವಾಜಿ ಮಹಾರಾಜ, ಚಂದ್ರಶೇಖರ ಆಝಾದ್, ಆಲ್ಫಾಕುಲ್ಲಾ ಖಾನ್ ಇಂತಹ ಅಪ್ರತಿಮ ಶೂರರ ಶೌರ್ಯ, ಸಾಹಸ, ಹೋರಾಟ, ತ್ಯಾಗ, ಬಲಿದಾನಗಳನ್ನು ಹೇಳುವ ಪುಸ್ತಕಗಳು ಸಿಗುತ್ತವೆಯೇ ಹೊರತು ಬಾಂಬ್್ಗಳಲ್ಲ. ಆರೆಸ್ಸೆಸ್ ನ ಶಾಖೆಗಳಲ್ಲಿ ಹೇಳಿಕೊಡುವುದೂ ಇಂತಹ ವೀರರ ಕಥೆಗಳನ್ನೇ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಇಂತಹ ಕ್ರಾಂತಿಕಾರಿಗಳನ್ನು NCERT ಪುಸ್ತಕಗಳಲ್ಲಿ  “ಭಯೋತ್ಪಾದಕ “ರೆಂದು ಚಿತ್ರಿಸಿರುವ ಕಾಂಗ್ರೆಸ್ಸಿಗರಿಂದ ಆರೆಸ್ಸೆಸ್ ಬಗ್ಗೆ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವೇ? ಕಳೆದ ವಾರ ಸಿಎನ್ ಎನ್-ಐಬಿಎನ್ ಚಾನೆಲ್ ನ  “ಡೆವಿಲ್ಸ್ ಅಡ್ವೊಕೇಟ್  ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್  “ಆರೆಸ್ಸೆಸ್ ಒಂದು ಬಾಂಬ್ ತಯಾರಿಸುವ ಕಾರ್ಖಾನೆ ” ಎಂದಿದ್ದಾರೆ! 2008ರಲ್ಲಿ ಮುಂಬೈ ಮೇಲೆ ದಾಳಿಯಾದಾಗಲೂ ಹಿಂದು ಭಯೋತ್ಪಾದಕರ ಕೈವಾಡವಿರಬಹುದು ಎಂದಿದ್ದ ಆಗಿನ ಕೇಂದ್ರ ಸಚಿವ ಎ.ಆರ್. ಅಂಟುಳೆ ಆರೆಸ್ಸೆಸ್ ನತ್ತ ಬೆರಳು ತೋರಿದ್ದರು. ಅದರ ಬೆನ್ನಲ್ಲೇ ತಮ್ಮ ಆಚಾರವಿಲ್ಲದ ನಾಲಗೆಯನ್ನು ಹೊರ ಹಾಕಿದ್ದ ದಿಗ್ವಿಜಯ್ ಸಿಂಗ್,  “ಮುಂಬೈ ದಾಳಿಯಲ್ಲಿ ಮಡಿದ ಹೇಮಂತ್ ಕರ್ಕರೆ ದಾಳಿಗಿಂತ 2 ಗಂಟೆ ಮೊದಲು ನನಗೆ ಕರೆ ಮಾಡಿ, ಹಿಂದು ಕಟ್ಟರ್ ವಾದಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು ” ಎನ್ನುವ ಮೂಲಕ ಮತ್ತೆ ಆರೆಸ್ಸೆಸ್-ವಿಶ್ವ ಹಿಂದು ಪರಿಷತ್ ಬಗ್ಗೆಯೇ ಸಲ್ಲದ ಟೀಕೆ ಮಾಡಿದ್ದರು. ಮೊನ್ನೆ ಜುಲೈ 13ರಂದು ಕಸಬ್ ಜನ್ಮದಿನದ ಕೊಡುಗೆ ರೂಪದಲ್ಲಿ ಮತ್ತೆ ಮುಂಬೈ ಮೇಲೆ ಆಕ್ರಮಣವಾದಾಗಲೂ ದಿಗ್ವಿಜಯ್ ಆರೆಸ್ಸೆಸ್ ನ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ನನ್ನ ಬಳಿ ಸಾಕ್ಷ್ಯಾಧಾರವಿದೆ ಎಂದೂ ಪ್ರತಿಪಾದಿಸಿದರು. ಈತ ಎಂತಹ ಹರುಕುಬಾಯಿಯ ವ್ಯಕ್ತಿ ಎಂಬುದು ಇಡೀ ದೇಶಕ್ಕೇ ಗೊತ್ತಾಗಿದೆ. ಟ್ವಿಟ್ಟರ್ ನಲ್ಲಿ  “ಡಿಗ್ಗಿಲೀಕ್ಸ್  ” ಎಂಬ ಒಂದು ಥ್ರೆಡ್ ಇದ್ದರೆ, ಫೇಸ್ ಬುಕ್, ಆರ್ಕುಟ್ ಗಳಲ್ಲಿ ನಾಯಿಯ ಮುಸುಡಿಗೆ ಇವರ ಮುಖ ಅಂಟಿಸಿ,  “DOGvijay “  ಎಂದೇ ಸಂಬೋಧಿಸಲಾಗುತ್ತಿದೆ! ಹಾಗಿದ್ದರೂ ಮಾಧ್ಯಮಗಳೇಕೆ ಇಂತಹ ಮತಿಗೇಡಿ ಮನುಷ್ಯನ ಮಾತಿಗೆ ಸಲ್ಲದ ಪ್ರಚಾರ ಕೊಟ್ಟು ಆರೆಸ್ಸೆಸ್ಸನ್ನು ಪದೇ ಪದೆ ಕಟಕಟೆಗೆ ತಂದು ನಿಲ್ಲಿಸಲು, ಸಮಜಾಯಿಸಿ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಲು ಪ್ರಯತ್ನಿಸುತ್ತವೆ? ಪಾಕಿಸ್ತಾನದ ಅಬೋಟಾಬಾದ್್ನಲ್ಲಿ ಅಡಗಿದ್ದ ಒಸಾಮ ಬಿನ್ ಲಾಡೆನ್ ನನ್ನು ಕಳೆದ ಮೇ 2ರಂದು ಅಮೆರಿಕ ಪತ್ತೆಹಚ್ಚಿ ಕೊಂದಾಗ,  “ಒಸಾಮಾಜಿ ” ಎಂದು ಸಂಬೋಧಿಸಿದ್ದ ಈ ವ್ಯಕ್ತಿಯ ಯೋಗ್ಯತೆ ಏನೆಂದು ಗೊತ್ತಾಗಿಲ್ಲವೇ? ಆತನ ಮಾತಿಗೆ ಎಷ್ಟು ಬೆಲೆ ಕೊಡಬೇಕೆಂಬುದು ತಿಳಿದಿಲ್ಲವೆ? ಏಕೆ ಆರೆಸ್ಸೆಸ್ಸನ್ನು ಹಳಿಸಲು ಇಂತಹ ಅಯೋಗ್ಯ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಾರೆ?
ಅದಿರಲಿ, ಕಳೆದ ಎಂಟೂವರೆ ದಶಕಗಳಿಂದ ರಾಷ್ಟ್ರಚಿಂತನೆಯ ಪ್ರಸಾರದಲ್ಲಿ, ರಾಷ್ಟ್ರಭಕ್ತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆರೆಸ್ಸೆಸ್್ನಲ್ಲಾಗಲಿ, ಅದಕ್ಕೆ ಹೊಂದಿಕೊಂಡಿರುವ ವಿಶ್ವ ಹಿಂದು ಪರಿಷತ್್ನಲ್ಲಾಗಲಿ ಅಸೀಮಾನಂದ, ಪ್ರಗ್ಯಾಸಿಂಗ್, ಇಂದ್ರೇಶ್ ಕುಮಾರ್ ಮುಂತಾದ ಕೋಪಾಗ್ನಿಗಳು ಏಕೆ ಸೃಷ್ಟಿಯಾದವು? ಈ ಬಗ್ಗೆ ದಿಗ್ವಿಜಯ್ ಸಿಂಗ್ ಅವರು ಹಾಗೂ ಅವರ ಮಾಧ್ಯಮ ಮಿತ್ರರು ಒಸಾಮನ ವಂಶಸ್ಥರನ್ನೇ ಪ್ರಶ್ನಿಸಬಹುದಲ್ಲವೆ? 900 ವರ್ಷಗಳ ಮುಸ್ಲಿಂ ಆಕ್ರಮಣಕಾರರ ದೌರ್ಜನ್ಯ, 150 ವರ್ಷಗಳ ಬ್ರಿಟಿಷ್ ದೌರ್ಜನ್ಯವನ್ನೇ ಸಹಿಸಿಕೊಂಡಿದ್ದ ಹಿಂದುಗಳಲ್ಲಿ ಈಗೇಕೆ ಕೋಪಾಗ್ನಿ ಸ್ಫೋಟಗೊಳ್ಳುತ್ತಿದೆ? ಮಾಲೆಗಾಂವ್ ಸ್ಫೋಟ, ಅಜ್ಮೇರ್ ದುರಂತಗಳು ಏಕೆ ಸಂಭವಿಸಿದವು? ಮುಸ್ಲಿಮರು ಭಯೋತ್ಪಾದನೆಯತ್ತ ಆಕರ್ಷಿತಗೊಳ್ಳಲು ಅನಕ್ಷರತೆ, ನಿರುದ್ಯೋಗ, ಹಿಂದು ಕೋಮುವಾದ ಹೀಗೆ ಕಾರಣ ಹುಡುಕುತ್ತಾರಲ್ಲಾ ಹಿಂದುಗಳ ಪ್ರತಿದಾಳಿಗೆ ಎಡೆಮಾಡಿಕೊಟ್ಟಿರುವ ಕಾರಣವನ್ನೂ ಹುಡುಕಬಹುದಲ್ಲವೆ? ಇನ್ನು ಎಷ್ಟು ವರ್ಷ ಅಂತ ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಹಿಸಿಕೊಳ್ಳಬೇಕು? ಸುಮ್ಮನೆ ಕುಳಿತರೆ ಯಾವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಕಾಶ್ಮೀರಿ ಪಂಡಿತರ ಉದಾಹರಣೆ ಕಣ್ಣಮುಂದಿಲ್ಲವೆ? ಇಸ್ಲಾಮಿಕ್ ಭಯೋತ್ಪಾದನೆಯನ್ನು ನಮ್ಮ ಸರ್ಕಾರವೇ ತಹಬಂದಿಗೆ ತರುವ ದಾಢಸಿತನ ತೋರಿದ್ದರೆ ಹಿಂದುಗಳ ಆಕ್ರೋಶಕ್ಕೆ ಕಾರಣವೇ ಇರುತ್ತಿರಲಿಲ್ಲ, ಅಲ್ಲವೆ?
1947ರಲ್ಲಿ ದೇಶ ವಿಭಜನೆಯಾದಾಗ ಪೂರ್ವಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) 30 ಪರ್ಸೆಂಟ್ ಇದ್ದ ಹಿಂದುಗಳ ಸಂಖ್ಯೆ ಈಗ ಎಷ್ಟಿದೆ? 1991ರ ಬಾಂಗ್ಲಾ ಜನಗಣತಿಯ ಪ್ರಕಾರ ಹಿಂದುಗಳ ಸಂಖ್ಯೆ 10.5 ಪರ್ಸೆಂಟ್! ಇವತ್ತು ಆ ಪ್ರಮಾಣ 5 ಪರ್ಸೆಂಟ್್ಗಿಂತಲೂ ಕೆಳಗಿಳಿದಿದೆ. ಇದಕ್ಕೆ ಯಾರು ಕಾರಣ? ಇದುವರೆಗೂ 2 ಕೋಟಿ ಬಾಂಗ್ಲಾ ಹಿಂದುಗಳು ಕಣ್ಮರೆಯಾಗಿದ್ದಾರೆ. ಒಂದೋ ಅವರು ಬಲವಂತವಾಗಿ ಮತಾಂತರಗೊಂಡಿದ್ದಾರೆ, ಇಲ್ಲವೆ ಮಸಣ ಸೇರಿದ್ದಾರೆ. ಈ ಮಧ್ಯೆ ನಮ್ಮ ಪಶ್ಚಿಮ ಬಂಗಾಳದಲ್ಲಿ 1947ರಲ್ಲಿ ಶೇ 12ರಷ್ಟಿದ್ದ ಮುಸ್ಲಿಮರ ಸಂಖ್ಯೆ ಇವತ್ತು 26 ಪರ್ಸೆಂಟ್ ದಾಟಿದೆ! ಅದು ಸಾಲದೆಂಬಂತೆ ದೀಪಾವಳಿಯ ಮುನ್ನಾದಿನ ರಾಜಧಾನಿ ದಿಲ್ಲಿಯಲ್ಲಿ ಹಬ್ಬದ ಖರೀದಿಯಲ್ಲಿ ತೊಡಗಿದ್ದ 65 ಹಿಂದೂಗಳನ್ನು ಬಾಂಬ್ ಸ್ಫೋಟಿಸಿ ಕೊಂದರು, ಅಕ್ಷರಧಾಮದ ಮೇಲೆ ಆಕ್ರಮಣ ಮಾಡಿದರು. ಇಂತಹ ಘಟನೆಗಳನ್ನು ಹಿಂದುಗಳು ಎಷ್ಟು ದಿನ ಅಂತ ಸಹಿಸಿಕೊಂಡು ಕುಳಿತುಕೊಳ್ಳಬೇಕು? ಹಿಂದುಗಳು ಬಂದೂಕು ಎತ್ತುವಂತೆ, ಬಾಂಬಿಡುವಂತೆ ಮಾಡಿದವರಾರು? ಆತ್ಮರಕ್ಷಣೆಗಾಗಿ ಬಾಂಬ್ ಮೂಲಕವೇ ಪ್ರತ್ಯುತ್ತರ ನೀಡಲು ಹೊರಟರೆ ಅದನ್ನು ಹೇಗೆ ಭಯೋತ್ಪಾದನೆ ಎನ್ನಲು ಸಾಧ್ಯ? 1972ರ ಮ್ಯೂನಿಕ್ ಒಲಿಂಪಿಕ್ಸ್ ವೇಳೆ ಇಸ್ರೇಲಿ ಕ್ರೀಡಾ ತಂಡವನ್ನು ಒತ್ತೆಯಾಗಿ ತೆಗೆದುಕೊಂಡು ಕಗ್ಗೊಲೆಗೈದ ಇಸ್ಲಾಮಿಕ್ ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲ ಕೊಟ್ಟವರನ್ನು ಇಸ್ರೇಲ್ ಹೆಕ್ಕಿ ಕೊಲ್ಲಲಿಲ್ಲವೆ? 9/11 ದಾಳಿಗೆ ಪ್ರತಿಯಾಗಿ ಅಮೆರಿಕ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲಿಲ್ಲವೆ? ಒಸಾಮನನ್ನು ಬೆನ್ನಟ್ಟಿ ಹೋಗಿ ಕುಕ್ಕಿ ಸಾಯಿಸಲಿಲ್ಲವೆ? ಪಾಕಿಸ್ತಾನದ ಪರಮಮಿತ್ರ ಚೀನಾವೇ ತನ್ನ ನೆಲದಲ್ಲಿ ತಲೆಯೆತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಗೆ ಮೊನ್ನೆ ಪಾಕಿಸ್ತಾನವನ್ನು ದೂರಿಲ್ಲವೆ? ಸ್ಥಳೀಯರ ಸಹಾಯವಿಲ್ಲದೆ ಮುಂಬೈನಂಥ ದಾಳಿಯನ್ನು, ಹೈದರಾಬಾದ್್ನ ಲುಂಬಿನಿ ಗಾರ್ಡನ್, ದಿಲ್ಲಿ, ಪುಣೆಯ ಜರ್ಮನ್ ಬೇಕರಿ ಸ್ಫೋಟಗಳಂಥ ದಾಳಿಗಳನ್ನು ಮಾಡಲು ಸಾಧ್ಯವಿತ್ತೆ? ಅಸೀಮಾನಂದ, ಪ್ರಗ್ಯಾಸಿಂಗ್್ರಂಥವರು ಇಂತಹ ದಾಳಿಗಳಿಂದ ಸೃಷ್ಟಿಯಾದ ಪ್ರತ್ಯಾಸ್ತ್ರಗಳೆನಿಸುವುದಿಲ್ಲವಾ?
ಈ ದೇಶ ಇಬ್ಭಾಗವಾಗಲು ಕಾರಣವಾದ ಮುಸ್ಲಿಂ ಲೀಗ್ ನ ಹೆಸರನ್ನಿಟ್ಟುಕೊಂಡಿರುವವರ ಜತೆ ಸೇರಿ ಕೇರಳದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗರಿಗೆ ಆರೆಸ್ಸೆಸ್ ಎಂಥ ರಾಷ್ಟ್ರವಾದಿ ಸಂಘಟನೆ, ಹಿಂದುಗಳ ಆತಂಕಗಳೇನು ಎಂಬುದು ಹೇಗೆ ತಾನೇ ಅರ್ಥವಾದೀತು?

ಮಂಗಳವಾರ, ಆಗಸ್ಟ್ 9, 2011

ಕಾಂಗ್ರೆಸ್ಸ್ ಮತ್ತು ದೇವರು



ಯುಪಿಎ ಒಕ್ಕೂಟದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆದ ಶ್ರೀಮತಿ ಸೋನಿಯ ಗಾಂಧಿ ಸರ್ವೈಕಲ್ ಕ್ಯಾನ್ಸರ್ ನಿಂದ ಬಳಲುತಿದ್ದು ಅಮೆರಿಕದ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದು. ಅವರು ಬೇಗ ಗುಣಮುಖರಾಗಲಿ ಎಂದು ದೇಶದ ಬಹುತೇಕ ಜನರು ದೇವರಲ್ಲಿ ಪ್ರಾರ್ಥಿಸುತಿದ್ದಾರೆ. ನಾವು ಸಹ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇವೆ.
ಇಂದು ಮತ್ತು ಮೊನ್ನೆಯ ಕೆಲ ಮುಖ್ಯ ಘಟನೆಗಳನ್ನು ನಾನು ಇಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ.

ಬಳ್ಳಾರಿಯಲ್ಲಿ ಪ್ರತಿಪಕ್ಷದ ಮುಖಂಡರಾದ ಶ್ರೀ ಸಿದ್ದರಾಮಯ್ಯ ನವರು ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ೧೦೧ ತೆಂಗಿನಕಾಯಿ ಹೊಡೆದು ಮೇಡಂ ಬೇಗ ಗುಣಮುಖರಾಗಲಿ ಎಂದು ಪೂಜೆ ಸಲ್ಲಿಸಿದರು.

ಶ್ರೀ ರಂಗಪಟ್ಟಣದ ಗಂಜಾಂ ನಲ್ಲಿ ಕುಟುಂಬ ಸಮೇತರಾಗಿ ಶ್ರೀ ಆರ್.ವಿ.ದೇಶಪಾಂಡೆ ಸಾಹೇಬರು ಶ್ರೀ ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿ ಹೋಮ ಹವನ ಮಾಡಿದರು.

ನಿನ್ನೆ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಉರುಳು ಸೇವೆ ಕಾರ್ಯಕ್ರಮ ನಡೆಸಿದರು.
ಮೊನ್ನೆ ಮಂಗಳೂರಿನಲ್ಲಿ ಶ್ರೀ ಜನಾರ್ಧನ ಪೂಜಾರಿ ಉರುಳು ಸೇವೆ ಸಲ್ಲಿಸಿದರು.

ಮತ್ತು ನಿನ್ನೆ ನಡೆದ ಒಂದು ಸಭೆ ಯಲ್ಲಿ ಭಾಷಣ ಮಾಡುತಿದ್ದ ಶ್ರೀಮತಿ ಮೋಟಮ್ಮನವರು ಗದ್ಗದಿತರಾಗಿ ಕಣ್ಣೀರಿಟ್ಟರು.


ಆಶ್ಚರ್ಯದ ಸಂಗತಿ ಎಂದರೆ, ಕೈ ಪಕ್ಷದ ಮುಖಂಡರುಗಳಿಗೆ ಹಿಂದು ಮತ್ತು ದೇವರುಗಳು ಅಂದರೆ ಅಲರ್ಜಿ, ಅದರಲ್ಲಿ ಬಿಜೆಪಿ ಮುಖಂಡರುಗಳು ಬಹಿರಂಗ ವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದರೆ ಇವರೆಲ್ಲ ಆಡದ ಮಾತುಗಳಿಲ್ಲ ಮಾಡದ ಟೀಕೆ ಗಳಿಲ್ಲ. ಅದರಲ್ಲೂ ಪ್ರಗತಿಪರ, ಚಿಂತಕರು, ಜಾತ್ಯಾತೀತವಾದಿ ಮುಖಂಡರು ಗಳು ಕೊಡದ ಹೇಳಿಗೆ ಗಳಿಲ್ಲ.

ಇರಲಿ ಬಿಡಿ ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಮುಖಂಡರುಗಳು ಹಿಂದೆ ಆಡಿದ ಮಾತುಗಳು, ಇವರೇ ಮಾಡಿದ ಟೀಕೆಗಳು, ಜಾತ್ಯಾತೀತ ನಿಲುವುಗಳು ಮತ್ತು ಅವರ ಪಕ್ಷದ ಹಿಂದೂ ವಿರೋಧಿ ಸಿದ್ಧಾಂತ ಇವೆಲ್ಲ ಏನು? ಅವರ ನಂಬಿಕೊಂಡ ಮತದಾರರುಗಳಿಗೆ ಕೊಡುವ ಸಂದೇಶ ಏನು? ಅಂದರೆ ಇವರ ನಿಲುವು ಗಳು ಎಲ್ಲ ಸಮಯಸಾಧಕತನವೇ? ಎಲ್ಲ ಡೋಂಗಿ ಸಿದ್ಧಾಂತವೇ? ಕೆಲವರನ್ನು ಮೆಚ್ಚಿಸಲು ಮಾಡುವ ಸೋಗಲಾಡಿತನವೇ?
ಸಮಯಸಂಧರ್ಭಕ್ಕೆ ತಕ್ಕಂತೆ ನಡೆದು ಕೊಳ್ಳುವ ಇವರ ನಡೆ ಏನನ್ನು ಸೂಚಿಸುತ್ತೆ?
ವಿಧಾನಸೌಧ ಮುಖ್ಯಮಂತ್ರಿಯವರ ಕೊಠಡಿ ವಾಸ್ತು ಪ್ರಕಾರ ಬದಲಾಯಿಸಿ ಕೊಂಡರೆ ಅದಕ್ಕೆ ಟೀಕೆ,
ಮುಖ್ಯಮಂತ್ರಿ ಮತ್ತು ಮಂತ್ರಿ ಗಳು ದೇವಸ್ಥಾನ ಗಳಿಗೆ ತೆರಳಿದರೆ ಅದಕ್ಕೂ ಸಹ ಟೀಕೆ,
ಹೋಮ ಹವನ ಕಾರ್ಯಕ್ರಮ ಮಾಡಿದರೆ ಅದಕ್ಕೆ ಟೀಕೆ,
ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವ ಕಾರ್ಯಕ್ಕೆ ಟೀಕೆ,
ಕಾಲೇಜು ವಿಧ್ಯಾರ್ಥಿಗಳಿಗೆ ದೇಶಭಕ್ತಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೆ ಟೀಕೆ,
ಕೆಲ ವಿಚಾರ ವಾದಿಗಳು ಎಂತೆಂಥ ಹೇಳಿಕೆ ಗಳನ್ನು ಕೊಟ್ಟರು ಎಂದು ಜ್ನಾಪಿಸಿಕೊಳ್ಳಿ, ಶ್ರೀ ಸಾಯಿಬಾಬ ರವರ ಮರಣಕ್ಕೂ ಮುಂಚೆ, ಹಲವಾರು ಕಾಯಿಲೆಗಳಿಂದ ನರಳುತ್ತಿರುವ ತನ್ನನ್ನು ತಾನು ಗುಣಪಡಿಸಿಕೊಳ್ಳದ ಈ ಡೋಂಗೀ ಬಾಬ ಭಕ್ತರನ್ನು ಕಾಪಾಡುತ್ತಾನೆಯೆ? ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನದೊಳಗೆ ನೆರೆ ನೀರು ನುಗ್ಗಿದಾಗ, ಭಕ್ತರನ್ನು ರಕ್ಷಿಸುವುದು ಇರಲಿ ತನ್ನ ದೇವಸ್ಥಾನವನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಲಿಲ್ಲವಲ್ಲ. ಅತಿವೃಷ್ಟಿ ಯಿಂದ ನೆರೆ ಸಂತ್ರಸ್ತರಾದ ಜನರನ್ನು ಯಾವ ದೇವರು ಕಾಪಾಡಿದ? ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಟೀಕೆ ಮಾಡಿದ ಜನ ಇಂದು ಕಾಂಗ್ರೆಸ್ ಮುಖಂಡರ ಈ ನಡೆ ಏನಂತ ಉತ್ತರಿಸುವರು?
ಬಿಜೇಪಿ ಪಕ್ಷ ಮತ್ತು ಸರ್ಕಾರ ಏನೇ ಕಾರ್ಯಕ್ರಮ ನಡೆಸಿದರೂ ಹೀಗೆ ಎಲ್ಲ ವಿಷಯಗಳಲ್ಲಿ ಟೀಕೆ ಮಾಡಿ,  ಇವರ ವೋಟ್ ಬ್ಯಾಂಕ್ ನ ಮತದಾರರ ಮನ ಮೆಚ್ಚಿಸುವ ಈ ಜನ ಇಂದು ಮಾಡುತ್ತಿರುವುದೇನು.
ಯಾವುದೇ ಪಕ್ಷ ಕ್ಕೂ ಸಹ ಒಟ್ಟಿನಲ್ಲಿ ಎಲ್ಲರಿಗೂ ದೇವರು ಬೇಕು ಮತ್ತು ನಂಬಿಕೆಗೆ ಬೆಲೆ ಕೊಡ್ತಾರೆ ಅಂತ ಗೊತ್ತು. ಗೊತ್ತಿದ್ದರೂ ಯಾಕೆ ಒಂದು ವರ್ಗದ ಜನರನ್ನು ಮೆಚ್ಚಿಸಲು ಬೇರೆ ಯವರನ್ನು ಯಾಕೆ ಟೀಕೆ ಮಾಡಬೇಕು. ಇದು ಸಮಯಸಾಧಕತನವಲ್ಲದೆ ಬೇರೆ ಇನ್ನೇನು?
ಪ್ರತಿಯೊಬ್ಬರಿಗೂ ನಂಬಿಕೆ ಅನ್ನುವುದು ಇರುತ್ತೆ, ಆ ನಂಬಿಕೆ ಕೆಲವರನ್ನು ಕಾಪಾಡುತ್ತೆ. ಆ ನಂಬಿಕೆ ಮತ್ತು ಅಶಾವಾದ ದಿಂದ ಕೆಲವರು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಗೆಲುವು ಸಾಧಿಸುತ್ತಾರೆ. ಆದ್ದರಿಂದ ಆ ನಂಬಿಕೆಗಳಿಗೆ ಪ್ರಶ್ನೆ ಸಲ್ಲದಲ್ವೆ.
ಏನೇ ಆಗಲಿ ಸೋನಿಯ ಗಾಂಧಿ ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

ಭಾನುವಾರ, ಆಗಸ್ಟ್ 7, 2011

ಮದನಾರಿ ಬೇಕಾ?



ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ "ಮದನಾರಿ", ಚಿತ್ರರಂಗದ ಭಾಷೆಯಲ್ಲಿ ಹೇಳಬೇಕಾದರೆ ಇದೊಂದು ಮಸಾಲ ಕಾರ್ಯಕ್ರಮ, ಇದರ ಮುಖ್ಯ ಆಕರ್ಷಣೆ ಎಂದರೆ ಐಟಮ್ ಗರ್ಲ್ ಗಳ ಬಗ್ಗೆ ಸಂಪೂರ್ಣ ವಾದ ವಿವರ ಅವರ ಜೀವನದ ಏಳು ಬೀಳುಗಳ ಬಗ್ಗೆ ವಿವರ, ಅವರಿಗಿರುವ ಬಾಯ್ ಫ್ರೆಂಡ್ ಗಳು ಜತೆಯಲ್ಲಿ ಇರುವವರ ಹಾಗು ಕೈ ಕೊಟ್ಟವರ ಬಗ್ಗೆ ಮಾತು. ಹಾಗು ಚಿತ್ರ ರಂಗಕ್ಕೆ ಪ್ರವೇಶ ಅದರ ಹಿನ್ನೆಲೆ, ಇನ್ನು ಮುಂತಾದ ಚಿತ್ರ ವಿಚಿತ್ರ ಸಂಗತಿ ಗಳಿಂದ ಕಾರ್ಯಕ್ರಮ ವನ್ನು ನಿರೂಪಕಿ ದಿವ್ಯಶ್ರಿ ಅವರಿಂದ ನಿರೂಪಿತ ವಾಗಿತ್ತದೆ. ಪ್ರತಿ ಭಾನುವಾರ ರಾತ್ರಿ ಹಾಗೂ ವಾರದ ದಿನಗಳಲ್ಲಿ ಮತ್ತೆ ಮರುಪ್ರಸಾರ ಮಾಡಲಾಗುತ್ತದೆ.

ಆದರೆ ಇಷ್ಟೇ ಆಗಿದ್ದರೆ ಈ ಕಾರ್ಯಕ್ರಮದ ಬಗ್ಗೆ ನಾವು ಇಲ್ಲಿ ಟೀಕೆ ಮಾಡುವ ಪ್ರಮೇಯ ವೇ ಬರುತ್ತಿರಲಿಲ್ಲ. ಈ ಎಲ್ಲ ವಿವರ ಗಳ ಜತೆಗೆ ಅಶ್ಲೀಲ ದೃಶ್ಯ ಗಳನ್ನು ಪ್ರಸಾರ ಮಾಡುತ್ತಾರಲ್ಲ ಅದು ಹೇಸಿಗೆ ಹುಟ್ಟಿಸುತ್ತೆ.

ಮೊದಲನೆಯದಾಗಿ, ಇಂತಹ ಕಾರ್ಯಕ್ರಮ ಕೊಡಿ ಅಂತ ಕರ್ನಾಟಕದ ಯಾವ ವೀಕ್ಷಕ ನೂ ಇವರಿಗೆ ದುಂಬಾಲು ಬಿದ್ದಿರಲಿಲ್ಲ. ಕೇವಲ ಒಂದು ವರ್ಗದ ವೀಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಸಾರ ಮಾಡುತ್ತಾರಲ್ಲ ಏನನ್ನಬೇಕು ಇವರನ್ನು. ನೋಡಲೇ ಬೇಕು ಎನ್ನುವ ತೆವಲು ತೀಟೆ ಇರುವ ಜನರು ಹೇಗಾದರು ಮಾಡಿ ನೋಡಿಯೇ ನೋಡುತ್ತಾರೆ ಅದು ಯೂಟ್ಯೂಬ್ ಆಗಿರಬಹುದು, ಅಶ್ಲೀಲ ವೆಬ್ ಸೈಟ್ ಆಗಿರಬಹುದು, ಎಫ್ ಚಾನೆಲ್, ಕೆಲ ಹಿಂದಿ ಚಾನೆಲ್ ಗಳು ಕೊನೆಗೆ ಬ್ಲೂ ಫಿಲ್ಮ್ ಕ್ಯಾಸೆಟ್ ಗಳನ್ನು ಹಾಕಿಯಾದರು ನೋಡುತ್ತಾನೆ.
ಸಂಪೂರ್ಣ ಕುಟುಂಬ ವೀಕ್ಷಿಸುವ ಸುದ್ದಿ ವಾಹಿನಿಗಳಲ್ಲಿ ಇಂತಹ ಅವಲಕ್ಷಣಗಳು ಬಂದರೆ ಮಡಿವಂತ ಜನ ಟಿವಿ ಬಂದ್ ಮಾಡುತ್ತಾರೆ ಅಥವ ಚಾನೆಲ್ ಬದಲಾಯಿಸುತ್ತಾರೆ.
ಅತ್ಯಂತ ಅಶ್ಲೀಲ ವಾಗಿರುವ ಹಸಿ ಬಿಸಿ ದೃಶ್ಯಗಳನ್ನು ಒಂದರ ಹಿಂದೆ ಒಂದು ಪ್ರಸಾರ ಮಾಡುತ್ತ, ಅದು ಒಬ್ಬ ಹೆಣ್ಣು ಮಗಳ ಮುಖಾಂತರ ನಿರೂಪಿಸುತ್ತಾರಲ್ಲ, ಕೊನೆ ಪಕ್ಷ ನಿರೂಪಿಸುವವರಿಗಾದರು ನಾಚಿಕೆ ಯಾಗಲ್ವೆ.

ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನುವಂತೆ ಇವರ ಕೆಲ ಸುದ್ದಿ ವಿಶ್ಲೇಷಕರು ರಾಜಕೀಯ ವನ್ನೇ ಅರೆದು ಕುಡಿದಂತೆ ಮಾತನಾಡುತ್ತಾರೆ ಆದರ ಜತೆಗೆ ಇಂತಹ ಕೀಳು ಮಟ್ಟದ ಕಾರ್ಯಕ್ರಮವನ್ನು ಸಹ ಬಿತ್ತರಿಸುತ್ತಾರೆ .
ಇಂತಹ ಕಾರ್ಯಕ್ರಮ ಗಳಿಂದ ಜನರನ್ನು ಸೆಳೆಯುತ್ತೇವೆ ಅನ್ನುವ ಭ್ರಮೆ ಯಲ್ಲಿದಾರೆ ಈ ಕಾರ್ಯಕ್ರಮದ ನಿರ್ಮಾಪಕರು.

ಕೊನೆ ಪಕ್ಷ ನಟಿಯರ ಸಂದರ್ಶನ ವೇನಾದರು ಅಲ್ಲಿದೆಯೇ? ಅದೂ ಇಲ್ಲ ಹಿನ್ನಲೆ ಧ್ವನಿಯಲ್ಲಿ ನಟಿಯ ಬಗ್ಗೆ ಮಾತುಗಳು ಮತ್ತು ದೃಶ್ಯ ಮಾತ್ರ ಬಹು ಅಶ್ಲೀಲ ವಾದದ್ದು.
ಅದು ಅಲ್ಲದೆ ಮೊನ್ನೆ ತನುಶ್ರಿ ದತ್ತಾ ಬಗೆಗಿನ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಜತೆಗಿನ ಪ್ರಚೋದಕ ಚುಂಬನ ದೃಶ್ಯಗಳು ಹಾಗೂ ಬೆಡ್ ರೂಮಿನ ಹಸಿ ಹಸಿ ದೃಶ್ಯಾವಳಿಗಳನ್ನು ಯಾವುದೇ ಸೆನ್ಸಾರ್ ಇಲ್ಲದೆ ಬಿತ್ತರಿಸಿದರು.

ಪ್ರತಿವಾರ ಒಬ್ಬ ನಟಿಮಣಿಯ ಮೈ ಮಾದಕ ಚೆಲುವುಗಳ ಬಗ್ಗೆ ಹಾಗು ಅವರು ನಟಿಸಿದ ಹಸಿ ಹಸಿ ಕಾಮ ಪ್ರಚೋದಕ ದೃಶ್ಯಗಳ ಜೋಡಣೆ ಯೊಂದಿಗೆ ೩೦ ನಿಮಿಷದ ಕಾರ್ಯಕ್ರಮ ತಯಾರು. ಒಂದು ವಾರ ಮುಮೈತ್ ಖಾನ್ ನಟಿಸಿದ ಚಿತ್ರಗಳ ಬಗ್ಗೆ ವರದಿಯಾಯ್ತು ಹಾಗೆ ಇನ್ನೊಂದು ಒಂದು ವಾರ ಹಾಟ್ ಮಾಡೆಲ್ ಮಲ್ಲಿಕಾ ಶೆರಾವತ್. ಇಂಥ ನಟಿಯರು ನಟಿಸಿದ ಎಲ್ಲ ಚಿತ್ರಗಳ ಸಕತ್ ಹಾಟ್ ಹಾಟ್ ದೃಶ್ಯಗಳನ್ನು ಒಂದೇ ಕಾರ್ಯಕ್ರಮದಲ್ಲಿ ನೋಡುವ ಸೌಭಾಗ್ಯ ನಮ್ಮ ಕರುನಾಡ ಕನ್ನಡಿಗನಿಗೆ. ಎಲ್ಲೆಲ್ಲಿಂದನೋ ಹೆಕ್ಕಿ ತಂದು ನಮ್ಮ ನಾಡಿನ ಜನರಿಗೆ ಉಣಬಡಿಸುವ ಹರಕತ್ತು ಏನಿದೆಯೋ ಕಾಣೆ?

ಹಿರಿಕಿರಿಯರು ನೋಡುವ ಕನ್ನಡ ಚಾನೆಲ್ ನಲ್ಲಿ ಇಂತಹ ದೃಶ್ಯಗಳು ಯಾಕೆ ಬೇಕು?

ಹೋಗಲಿ ಈ ನಟಿ ಮಣಿಯರು ಕನ್ನಡ ನಾಡಿನವರಾ? ಇಲ್ಲ ಇವರು ನಟಿಸಿದ ಚಿತ್ರಗಳು ಕನ್ನಡ ಚಿತ್ರಗಳಾ? ಇಲ್ಲ ಕೊನೆ ಪಕ್ಷ ಹೊಸ ಕನ್ನಡ ಚಿತ್ರದಲ್ಲಿ ನಟಿಸಲು ಏನಾದರು ರಾಜ್ಯಕ್ಕೆ ಬಂದಿದ್ದಾರಾ? ಯಾವುದು ಇಲ್ಲ. ಬಹುತೇಕ ದೃಶ್ಯಗಳು ಬೇರೆ ಭಾಷೆಯ ಚಿತ್ರದ್ದು, ನಟಿಮಣಿಯರು ಸಹ ಹೊರಗಿನವರೇ.

ನಮ್ಮ ಕನ್ನಡ ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮದ ಅವಕಶ್ಯತೆ ಇದೆಯಾ?

ಇವರು ಎಂತಹ ಹುಷಾರು ಜನ ಎಂದರೆ, ಸಾಮನ್ಯವಾಗಿ ಇವರ ಎಲ್ಲ ವೀಡಿಯೋ ಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಮಂದಿ  ಮದನಾರಿ ಬಗೆಗಿನ ಒಂದೇ ಒಂದು ಕಾರ್ಯಕ್ರಮವನ್ನು ಇದುವರೆವಿಗೂ ಅಪ್ ಲೋಡ್ ಮಾಡಿಲ್ಲ. ಇಲ್ಲೇ ಗೊತ್ತಾಗುತ್ತೆ ಇವರು ಎಂತಹ ಚಾಲಾಕಿ ಜನ ಎಂದು.

ಈ ಚಾನೆಲ್ ಗೆ ವಿ.ಭಟ್ ಬೇರೆ ಮುಖ್ಯಸ್ಥ ರಾಗಿದ್ದಾರೆ.  ಸುದ್ದಿ ಮಾಧ್ಯಮ ಅದರಲ್ಲೂ ದೃಶ್ಯ ಮಾಧ್ಯ್ವಮ ಎಷ್ಟೊಂದು ಜವಬ್ದಾರಿ ಯುತವಾಗಿರಬೇಕು ಎನ್ನುವುದನ್ನು ಅವರು ತುಂಬಾ ಲೇಖನ ಗಳಲ್ಲಿ ಬರೆದಿದ್ದಾರೆ. ಕಾಕತಾಳೀಯ ಅಂದ್ರೆ ಅವರು ಮುಖ್ಯಸ್ಥ ರಾಗಿರುವ ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮ ಗಳು ಪ್ರಸಾರ ವಾಗುತ್ತಿವೆ.


ಕರ್ನಾಟಕ ದ ಖ್ಯಾತ ವಿಖ್ಯಾತ ಹಮೀದ್ ಪಾಳ್ಯ ಮತ್ತು ರಂಗನಾಥ ಭಾರಧ್ವಾಜ್ ಎನ್ನುವ ಮಹಾಶಯರಿಬ್ಬರ ಮುಂದಾಳತ್ವದಲ್ಲಿ ಸುವರ್ಣ ನ್ಯೂಸ್ ರಥ ಓಡುತ್ತಿದೆ. ರಾಜ್ಯದ ರಾಜಕೀಯವನ್ನು  ವ್ಯಂಗ್ಯ, ವಿಡಂಬನೆ, ಟೀಕೆ ಗಳಿಂದ ನಿರೂಪಿಸುತ್ತಿರುವ ಈ ಮಂದಿ ತಮ್ಮದೇ ಚಾನೆಲ್ ನಲ್ಲಿ ಬರುತ್ತಿರುವ ಈ ಮದನಾರಿ ಕಾರ್ಯಕ್ರಮದ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ.
ಸ್ವಲ್ಪ ಲಗಾಮು ಹಾಕಿ ಇಂತಹ ಕಾರ್ಯಕ್ರಮ ಗಳನ್ನು ನಿಯಂತ್ರಿಸಿದರೆ ಅವರ ಚಾನೆಲ್ ಗೆ ಇರುವ ಹೆಸರು ಇಮ್ಮಡಿ ಯಾಗುವುದರಲ್ಲಿ ಸಂಶಯವಿಲ್ಲ.

ಸೋಮವಾರ, ಆಗಸ್ಟ್ 1, 2011

ಮನೆಗೆ ಬೆಂಕಿ ಬಿದ್ರೆ ಅದ್ರಲ್ಲಿ ಬೀಡಿ ಹಚ್ಚೋ ಜನ

ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜಾ ತಗೋಳ್ಳೋದು ಅಂದ್ರೆ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
ವಿನಾ ಕಾರಣ ವಾದ ವಾಗ್ವಾದ ಗಳಿಗೆ ಆಸ್ಪದ ಮಾಡಿ ಕೊಟ್ಟು ಮಜಾ ತಗೊಳ್ತಿದ್ದಾರೆ ನಮ್ಮ ಸುವರ್ಣ ನ್ಯೂಸ್ ನ ಮಂದಿ.